ಇಂಡಿಯನ್ ಪ್ರೀಮಿಯರ್ ಲೀಗ್ನ ಜನಪ್ರಿಯ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ 2024ರ ಐಪಿಎಲ್ಗೂ ಮುನ್ನ ಶುಕ್ರವಾರ ರಾತ್ರಿ ಇದ್ದಕ್ಕಿದ್ದಂತೆ ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕನಾಗಿ ಘೋಷಿಸಿತು.
ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಕಾಡುತ್ತಿರುವ ಒಂದು ಪ್ರಶ್ನೆಯೆಂದರೆ, 2024ರ ಐಪಿಎಲ್ ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಆಟಗಾರನಾಗಿ ರೋಹಿತ್ ಶರ್ಮಾ ಅವರ ಕೊನೆಯ ಪಂದ್ಯಾವಳಿಯಾಗಿರಲಿದೆಯಾ ಎಂಬುದಾಗಿದೆ.

ರೋಹಿತ್ ಶರ್ಮಾಗೆ ಇದು ಸತತ 11 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ಗೆ ನಾಯಕತ್ವ ವಹಿಸಿ ಐದು ಟ್ರೋಫಿಗಳಿಗೆ ಮುನ್ನಡೆಸಲು ಕಾರಣವಾದ ದೊಡ್ಡ ನಿಷ್ಠೆಯಾಗಿದೆ. 2025ರಲ್ಲಿ ಮೆಗಾ ಹರಾಜು ನಡೆಯಲಿದೆ ಮತ್ತು ರೋಹಿತ್ ಶರ್ಮಾ ಇನ್ನು ಮುಂದೆ ಮುಂಬೈ ಇಂಡಿಯನ್ಸ್ ಯೋಜನೆಯಲ್ಲಿರಲ್ಲ ಎಂಬುದು ಈಗ ಸ್ಪಷ್ಟವಾಗಿದೆ.
ಐಪಿಎಲ್ ಆಡಳಿತ ಮಂಡಳಿಯು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುತ್ತದೆ. ಅದರಲ್ಲಿ 3 ಭಾರತೀಯರು ಮತ್ತು 1 ಸಾಗರೋತ್ತರ ಆಟಗಾರನಾಗಿರುತ್ತಾರೆ.
ಭವಿಷ್ಯದಲ್ಲಿ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳುವ ಮೂವರು ಭಾರತೀಯರೆಂದರೆ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಆಗಿರಬಹುದು. ಒಂದು ಸ್ಲಾಟ್ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲು ಸೇರಿರಲಿದೆ.
ಆದಾಗ್ಯೂ, ರೋಹಿತ್ ಶರ್ಮಾ ಮುಂಬರುವ ಆವೃತ್ತಿಯಲ್ಲಿ ಉತ್ತಮ ಐಪಿಎಲ್ ಪಂದ್ಯಾವಳಿಯನ್ನು ಹೊಂದಿದ್ದರೆ ಮತ್ತು ನಂತರ ತೃಪ್ತಿಕರವಾದ ಟಿ20 ವಿಶ್ವಕಪ್ ಟೂರ್ನಿ ಹೊಂದಿದ್ದರೆ ಏನಾಗಲಿದೆ?, ಅಲ್ಲಿ ಭಾರತ ತಂಡವನ್ನು ಮುನ್ನಡೆಸುವುದನ್ನು ತಳ್ಳಿಹಾಕಲಾಗುವುದಿಲ್ಲ.

2022ರ ಟಿ20 ವಿಶ್ವಕಪ್ ನಂತರ, ಹೆಚ್ಚಿನ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರುವ ಹಾರ್ದಿಕ್ ಪಾಂಡ್ಯ, ಚುಟುಕು ಸ್ವರೂಪದಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸುವುದನ್ನು ಮುಂದುವರಿಸಲು ಬಯಸುತ್ತಾರೆ ಎಂಬ ಕುತೂಹಲಕಾರಿ ಸಮಯಗಳು ಮುಂದಿವೆ.
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳದಿದ್ದರೂ, ಯಾವುದೇ ಫ್ರಾಂಚೈಸಿಗಾಗಿ ಎಂದಿಗೂ ಆಡುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದಾರೆ. ಆದರೆ ಉತ್ತರ ಭಾರತದ ಒಂದು ಐಪಿಎಲ್ ಫ್ರಾಂಚೈಸ್ ಇರುವುದರಿಂದ ಅವರು ತಮ್ಮ ಮನಸ್ಸನ್ನು ಬದಲಾಯಿಸುತ್ತಾರೆಯೇ ಅದು ಅವರಿಗೆ ಮಾರ್ಗದರ್ಶಕ ಅಥವಾ ನಾಯಕ ಆಗಲು ಖಾಲಿ ಚೆಕ್ ನೀಡಲಿದೆಯೇ ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.
ಫ್ರಾಂಚೈಸಿ ಕ್ರಿಕೆಟ್ನ ಜಗತ್ತಿನಲ್ಲಿ, ಮುಂಬೈ ಇಂಡಿಯನ್ಸ್ ನೀಡಿದ ನೀರಸ ಮಾಧ್ಯಮ ಹೇಳಿಕೆಯಲ್ಲಿ ಶ್ರೇಷ್ಠ ಐಪಿಎಲ್ ನಾಯಕರೊಬ್ಬರ ಉಲ್ಲೇಖದ ಅನುಪಸ್ಥಿತಿಯು ಗಮನಾರ್ಹವಾಗಿದೆ.
ಮುಂಬೈ ಇಂಡಿಯನ್ಸ್ ಜಾಗತಿಕ ಕೋಚಿಂಗ್ ಮುಖ್ಯಸ್ಥ ಮಹೇಲಾ ಜಯವರ್ಧನೆ ಅವರು ರೋಹಿತ್ ಶರ್ಮಾ ಅವರ ಕೊಡುಗೆಗಾಗಿ ಧನ್ಯವಾದ ಸಲ್ಲಿಸಿದರು.
ಕೇವಲ 48 ಗಂಟೆಗಳ ಹಿಂದೆ, ರೋಹಿತ್ ಶರ್ಮಾ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ತಮ್ಮ ಅಂತಿಮ ವಿಶ್ವಕಪ್ ಹಣಾಹಣಿಯಲ್ಲಿ ಮತ್ತೊಂದು ಜವಾಬ್ದಾರಿ ತೆಗೆದುಕೊಳ್ಳಲು ಪ್ರೇರಣೆಯ ಬಗ್ಗೆ ಮಾತನಾಡಿದ್ದರು. ಇದೇ ವೇಳೆ ತನ್ನ ಅಭಿಮಾನಿಗಳಿಗಾಗಿ ಭಾರತೀಯ ನಾಯಕನು ತನ್ನ ಐಪಿಎಲ್ ಭವಿಷ್ಯದ ಯೋಜನೆಗಳನ್ನು ಚೆನ್ನಾಗಿ ವಿವರಿಸಬಹುದಿತ್ತು. ಆದರೆ ಅಲ್ಲಿ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ.
2021ರಲ್ಲಿ ಹಾರ್ದಿಕ್ ಪಾಂಡ್ಯ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲವಾದ್ದರಿಂದ ಕಳೆದ ಮೂರು ಐಪಿಎಲ್ ಆವೃತ್ತಿಗಳು ಮುಂಬೈ ಇಂಡಿಯನ್ಸ್ ತನ್ನ ಹಾದಿಯಲ್ಲಿ ಸಾಗಲಿಲ್ಲ, ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದರು ಮತ್ತು ಜೋಫ್ರಾ ಆರ್ಚರ್ಗೆ ದೊಡ್ಡ ಹೂಡಿಕೆಯು ನಿಜವಾಗಿಯೂ ಫಲ ನೀಡಲಿಲ್ಲ.
ಈ ಎಲ್ಲಾ ವಿಷಯಗಳು ಮುಂಬೈ ತಂಡದ ಕಾರ್ಯಕ್ಷಮತೆ ಮತ್ತು ಮುಂಬೈ ಇಂಡಿಯನ್ಸ್ ನಾಯಕನಾಗಿ ರೋಹಿತ್ ಶರ್ಮಾ ಅವರ ಅಂಕಿಅಂಶಗಳ ಮೇಲೆ ಪರಿಣಾಮ ಬೀರಿತು.