ಟೀಮ್ ಇಂಡಿಯಾಕ್ಕೆ ಗಾಯ ಬಹುವಾಗಿ ಕಾಡುತ್ತಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಗಾಯದ ಕಾರಣದಿಂದ ಪ್ರಮುಖ ಟೂರ್ನಿಗಳಿಂದ ವಂಚಿತರಾಗುತ್ತಿದ್ದಾರೆ. ಈ ಪಟ್ಟಿಯನ್ನು ನೋಡಿದರೆ ಒಮ್ಮೆ ಶಾಕ್ ಆಗುತ್ತದೆ. ಹೀಗೆ ಬೆಳೆದರೆ ಹೇಗಪ್ಪ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್, ಭವಿಷ್ಯದ ನಾಯಕ ಎಂದೇ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ, ಆರಂಭಿಕ ಋತುರಾಜ್ ಗಾಯಕ್ವಾಡ್ ಗಾಯಕ್ಕೆ ತುತ್ತಾಗಿರುವುದು ಅಭಿಮಾನಿಗಳ ಮನದಲ್ಲಿ ಹಲವು ಪ್ರಶ್ನೆಗಳನ್ನು ಏಳುವಂತೆ ಮಾಡಿದೆ. ತಾವು ಫಿಟ್ ಆಗಿದ್ದರೂ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧ ಸರಣಿಯಿಂದ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇವರು ಸಹ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಇಶಾನ್ ಸ್ಥಾನದಲ್ಲಿ ಜಿತೇಶ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ಗಳಾಗಿ ಭಾರತದ T20 ತಂಡದ ಭಾಗವಾದರು. ಟೀಂ ಇಂಡಿಯಾದಿಂದ ಇಶಾನ್ ಹೆಸರು ಕೈ ಬಿಟ್ಟ ಮೇಲೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಮುಂಬೈ ಇಂಡಿಯನ್ಸ್ನ ಈ ಪ್ರಬಲ ಬ್ಯಾಟ್ಸ್ಮನ್ ಈಗ ಟಿ20 ವಿಶ್ವಕಪ್ನಿಂದಲೂ ಹೊರಗುಳಿಯಲಿದ್ದಾರಾ ಎಂಬುದು ದೊಡ್ಡ ಪ್ರಶ್ನೆ ಎದ್ದಿದೆ.
ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ತನ್ನ ಕೊನೆಯ ಟಿ20 ಸರಣಿಯನ್ನು ಆಡಲಿದೆ. ಈ ಏಕೈಕ ಅಂತರಾಷ್ಟ್ರೀಯ ಟಿ20 ಸರಣಿಯಾಗಿದ್ದು, ಇದರಲ್ಲಿ ಕೆಲವು ಪ್ರಯೋಗಗಳನ್ನು ಮಾಡಬಹುದು. ವಿಶ್ವಕಪ್ ಸಿದ್ಧತೆಗಾಗಿ ತಂಡದ ಆಯ್ಕೆಗಾಗಿ ತಂಡದ ಸಂಯೋಜನೆಯನ್ನು ಕಂಡುಹಿಡಿಯಲು ಮತ್ತು ಆಟಗಾರರನ್ನು ಗುರುತಿಸಲು ಇದು ಕೊನೆಯ ಅವಕಾಶ. ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ, ರೋಹಿತ್ ಮತ್ತು ವಿರಾಟ್ ಅವರನ್ನು ಸಹ ಈ ಸ್ವರೂಪಕ್ಕೆ ಮರಳಿದ್ದಾರೆ.
ಇಲ್ಲಿ ಸೂರ್ಯ ಮತ್ತು ಹಾರ್ದಿಕ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದು, ಇಂಗ್ಲೆಂಡ್ ಸರಣಿಯ ದೃಷ್ಟಿಯಿಂದ ಕೆಲವು ವೇಗದ ಬೌಲರ್ಗಳಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಇಶಾನ್ ಕಿಶನ್ ತಂಡಕ್ಕೆ ಸೇರದಿರುವುದು ನೋವುಂಟುಮಾಡಿದೆ. ಪಿಟಿಐ ಬಿಸಿಸಿಐ ಅಧಿಕಾರಿಯೊಬ್ಬರ ಜೊತೆ ಈ ವಿಚಾರವಾಗಿ ಮಾತನಾಡಿದೆ.

ಇಶಾನ್ ತಂಡದೊಂದಿಗೆ ನಿರಂತರವಾಗಿ ಪ್ರಯಾಣಿಸಿದರು, ಅವರಿಗೆ ಪ್ಲೇಯಿಂಗ್ -11 ರಲ್ಲಿ ಅವಕಾಶಗಳು ಸಿಗಲಿಲ್ಲ. ಇದರಿಂದ ಅವರು ನಿರಾಸೆ ಅನುಭವಿಸಿದ್ದಾರೆ. ಅದಕ್ಕಾಗಿಯೇ ಅವರು ಸದ್ಯಕ್ಕೆ ಬಿಡುವು ಪಡೆದಿದ್ದಾರೆ. ಸದ್ಯ ಆಯ್ಕೆದಾರರು ಇಶಾನ್ ಹೊರತುಪಡಿಸಿ ಬೇರೆ ಆಟಗಾರರತ್ತ ಮುಖ ಮಾಡಿದ್ದಾರೆ. ಅವರು ಇಂಗ್ಲೆಂಡ್ ಟೆಸ್ಟ್ ಸರಣಿಯ ತಂಡದಲ್ಲಿ ಸ್ಥಾನ ಪಡೆಯುತ್ತಾರೆಯೇ ಅಥವಾ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್, ಕೆಎಸ್ ಭರತ್ ಕಾಣಿಸಿಕೊಳ್ಳುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ?
ಇಶಾನ್ ಕಿಶನ್ ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ತಮ್ಮ ಹೆಸರನ್ನು ಹಿಂಪಡೆದಿದ್ದರು. ವೈಯಕ್ತಿಕ ಕಾರಣಗಳಿಂದ ಇಶಾನ್ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು.
ಇಂಡಿಯನ್ ಎಕ್ಸ್ಪ್ರೆಸ್ನಲ್ಲಿನ ವರದಿಯ ಪ್ರಕಾರ ಇಶಾನ್ ತಂಡದೊಂದಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ಪ್ರಯಾಣಿಸುತ್ತಿದ್ದರು, ಆದರೆ ಆಟಗಾರರು ವಿರಾಮದಲ್ಲಿದ್ದಾಗ ಮಾತ್ರ ಪ್ಲೇಯಿಂಗ್ -11 ರಲ್ಲಿ ಅವಕಾಶ ಪಡೆಯುತ್ತಿದ್ದರು. ಅಥವಾ ಯಾರಿಗಾದರೂ ಗಾಯವಾದರೆ ತಂಡಕ್ಕೆ ಇಶಾನ್ ಆಗಮನ ವಾಗುತ್ತಿತ್ತು. ಇದರಿಂದ ಇಶಾನ್ಗೆ ನಿರಾಸೆಗೊಂಡಿದ್ದರು. ಅಲ್ಲದೆ ಮಾನಸಿಕ ಒತ್ತಡವನ್ನು ಹೋಗಲಾಡಿಸಲು ಬಿಸಿಸಿಐ ವಿಶ್ರಾಂತಿ ನೀಡಿದಂತೆ ಕಾಣುತ್ತಿದೆ.