ಆಟಗಾರರಿಗೆ ಗಾಯ
ಪ್ರಮುಖ ಫಾರ್ವರ್ಡ್ ಆಟಗಾರರಾದ ಟಿಮ್ ಕಾಹಿಲ್ ಹಾಗೂ ಮೈಕೆಲ್ ಸೂಸೈರಾಜ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದು, ಹಾಗೂ ಗೌರವ್ ಮುಖಿ ಮತ್ತು ಕಾರ್ಲೋಸ್ ಕಾಲ್ವೋ ಅಮಾನತುಗೊಂಡು ಹೊರಗುಳಿದಿರುವುದು ಜೆಮ್ಷೆಡ್ಪುರ ತಂಡಕ್ಕೆ ತುಂಬಲಾರದ ನಷ್ಟವಾಗಿದೆ. ಆದರೆ ಮುಂಬೈ ವಿರುದ್ಧ ಐಎಸ್ಎಲ್ನಲ್ಲಿ ಜೆಮ್ಷೆಡ್ಪುರ ತಂಡ ಇದುವರೆಗೂ ಸೋತಿಲ್ಲ, ಇದು ತಂಡದ ಮನೋಬಲವನ್ನು ಹೆಚ್ಚಿಸಿದೆ.
ದೊಡ್ಡ ಸಮಸ್ಯೆಯಾಗಿದೆ
‘ಟಿಮ್ ಕಾಹಿಲ್ ಅವರು ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಉತ್ತಮವಾಗಿ ಆಡುತ್ತಿದ್ದ ಗೌರವ್ ಮುಖಿ ಕೂಡ ಅಮಾನತುಗೊಂಡಿರುವುದು ತಂಡಕ್ಕೆ ನಷ್ಟವಾಗಿದೆ. ಅದೇ ರೀತಿ ಕಾರ್ಲೋಸ್ ಕಾಲ್ವೋ ಅವರ ಅನುಪಸ್ಥಿತಿಯೂ ತಂಡಕ್ಕೆ ಹಾನಿಯಾದಂತಾಗಿದೆ. ಸೂಸೈರಾಜ್ ಅನುಪಸ್ಥಿತಿಯೂ ತಂಡವನ್ನು ಕಾಡಲಿದೆ,‘ ಎಂದು ಫೆರಾಂಡೋ ಹೇಳಿದರು.
ಆಕ್ರಮಣಕಾರಿ ಆಟ
ಮುಂಬೈ ತಂಡದ ಆಕ್ರಮಣಕಾರಿ ಆಟವನ್ನೂ ಟಾಟಾ ಪಡೆ ಎದುರಿಸಬೇಕಾಗಿದೆ. ಎದುರಾಳಿ ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿರುವುದಕ್ಕೆ ಮುಂಬೈ ಯೋಚಿಸುವುದಿಲ್ಲ, ಆದರೆ ಸಿಕ್ಕಾಗ ಆಕ್ರಮಣಕಾರಿ ಆಟಕ್ಕೆ ಮುಂದಾಗುವುದು ಸ್ಪ,ಷ್ಟ. ಅರ್ನಾಲ್ಡ್ ಇಸೊಕೊ, ಮೌಡೌ ಸೌಗೌ ಮತ್ತು ರೊಲ್ ಬಾಸ್ಟೋಸ್ ಅವರಲ್ಲಿರುವ ಶಕ್ತಿಯನ್ನು ಕೋಚ್ ಜಾರ್ಜ್ ಕೋಸ್ಟಾ ಉತ್ತಮ ರೀತಿಯಲ್ಲಿ ಬಳಸಿದ್ದಾರೆ. ಇದರಿಂದಾಗಿ ಮುಂಬೈ ತಂಡ ನಿರಂತರ ಯಶಸ್ಸಿನ ಹೆಜ್ಜೆಯನ್ನಿಟ್ಟಿದೆ. ಈ ಬಗ್ಗೆ ಟಾಟಾ ಪಡೆಯ ಕೋಚ್ ಫೆರಾಂಡೋ ಉತ್ತಮ ರೀತಿಯಲ್ಲಿ ರಣತಂತ್ರ ರಚಿಸಬೇಕಾಗಿದೆ. ಸೌಗೌ ಜೆಮ್ಷುಡ್ಪುರಕ್ಕೆ ಆಗಮಿಸಿದಾರೆ, ಆದರೆ ಹಿಂದಿನ ಪಂದ್ಯದಲ್ಲಿ ಸ್ನಾಯು ಸೆಳೆತದ ಕಾರಣ ಆಡಿರಲಿಲ್ಲ.
ಕೇವಲ ಮೂರು ಪಂದ್ಯಗಳು
‘ನಾಳೆ ಪಂದ್ಯದ ನಂತರ ನಮಗೆ ಉಳಿದಿರುವುದು ಕೇವಲ ಮೂರು ಪಂದ್ಯಗಳು. ಎರಡೂ ತಂಡಗಳು ತೀವ್ರ ಒತ್ತಡದಲ್ಲಿವೆ. ಆದರೆ ಒತ್ತಡವನ್ನು ನಿಭಾಯಿಸುವುದು ನಮ್ಮ ಕರ್ತವ್ಯ, ನಮಗಿಂತ ಜೆಮ್ಶೆಡ್ಪುರದ ಮೇಲೆ ಹೆಚ್ಚು ಒತ್ತಡವಿದೆ. ನಾವು ಈಗಾಗಲೇ ನಾಲ್ಕರಲ್ಲಿ ಸ್ಥಾನ ಪಡೆದಿದ್ದೇವೆ, ಆದರೆ ಟಾಟಾ ಪಡೆ ಇನ್ನೂ ಅಂತಿಮ ನಾಲ್ಕರ ಹಂತಕ್ಕಾಗಿ ಹೋರಾಟ ನಡೆಸಬೇಕಾಗಿದೆ, ‘ಎಂದು ಕೋಸ್ಟಾ ಹೇಳಿದ್ದಾರೆ.