ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'WTC finalನಲ್ಲಿ 4 ವೇಗಿಗಳು ಆಡಿದರೆ ಜಡೇಜಾ ಬೆಂಚಲ್ಲಿರಬೇಕಾಗುತ್ತದೆ'

Jadeja will have to sit out if India play 4 seamers in WTC final: Sarandeep Singh

ನವದೆಹಲಿ: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದಲ್ಲಿ ಸ್ಪಿನ್ನರ್‌ಗಳಾದ ಆರ್‌ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೊತೆಯಾಗಿ ಆಡುವ ಬಗ್ಗೆ ಮಾತುಕತೆಗಳು ನಡೆಯುತ್ತಲೇ ಇವೆ. ಭಾರತದ ಮಾಜಿ ಆಫ್‌ ಸ್ಪಿನ್ನರ್ ಸರಣ್‌ದೀಪ್ ಸಿಂಗ್ ಕೂಡ ಕೂಡ ಜಡೇಜಾ ಪ್ಲೇಯಿಂಗ್‌ XIನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಒಂದೇ ಪಂದ್ಯದಲ್ಲಿ ಎರಡೆರಡು ಸಾರಿ ದುರ್ವರ್ತನೆ ತೋರಿದ ಶಕೀಬ್: ಶಾಕಿಂಗ್ ವಿಡಿಯೋಒಂದೇ ಪಂದ್ಯದಲ್ಲಿ ಎರಡೆರಡು ಸಾರಿ ದುರ್ವರ್ತನೆ ತೋರಿದ ಶಕೀಬ್: ಶಾಕಿಂಗ್ ವಿಡಿಯೋ

ಸೌತಾಂಪ್ಟನ್‌ನ ಏಜಸ್ ಬೌಲ್‌ನಲ್ಲಿ ಜೂನ್‌ 18ರಂದು ಪರಿಸ್ಥಿತಿ ನೋಡಿಕೊಂಡು ನಾಲ್ಕು ಪ್ರಮುಖ ವೇಗಿಗಳನ್ನು ಕಣಕ್ಕಿಳಿಸಬೇಕಾ ಎಂದು ನೋಡಬೇಕಾಗುತ್ತದೆ. ಮೂರು ವೇಗಿಗಳು ಸಾಕಾಗುತ್ತದೆ. ಆದರೆ ಅಗತ್ಯ ಬಿದ್ದರೆ ನಾಲ್ಕು ವೇಗಿಗಳನ್ನು ಆಡಿಸಬೇಕಾಗಬಹುದು ಎಂದು ಸರಣ್‌ದೀಪ್ ಸಿಂಗ್ ಅಭಿಪ್ರಾಯಿಸಿದ್ದಾರೆ.

'ಇಂಗ್ಲೆಂಡ್‌ನ ಪರಿಸ್ಥಿತಿ ಮೋಡ ಕವಿದಿದ್ದರೆ ಇಶಾಂತ್ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್ ಶಮಿ ಜೊತೆಗೆ ಮತ್ತೊಬ್ಬ ಹೆಚ್ಚುವರಿ ವೇಗಿಯನ್ನು ಆಡಿಸಬೇಕಾಗಬಹುದು. ನಾಲ್ಕು ವೇಗಿಗಳು ಆಡಿದರೆ ಆಲ್ ರೌಂಡರ್ ರವೀಂದ್ರ ಜಡೇಜಾ ಬೆಂಚ್‌ನಲ್ಲಿರಬೇಕಾಗುತ್ತದೆ,' ಎಂದು ಸಿಂಗ್ ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದಷ್ಟೇ ಅಲ್ಲ ಒಳ್ಳೆಯ ಅವಕಾಶ ಕೊಡಿ; ಮನೀಷ್ ಪಾಂಡೆಯ ಕೋಚ್ ಮನವಿಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದಷ್ಟೇ ಅಲ್ಲ ಒಳ್ಳೆಯ ಅವಕಾಶ ಕೊಡಿ; ಮನೀಷ್ ಪಾಂಡೆಯ ಕೋಚ್ ಮನವಿ

ಭಾರತೀಯ ತಂಡದಲ್ಲಿ ಸದ್ಯ ಸ್ಪಿನ್ನರ್‌ಗಳಾಗಿ ಆರ್‌ ಅಶ್ವಿನ್, ರವೀಂದ್ರ ಜಡೇಜಾ ಇದ್ದಾರೆ. ಮತ್ತೊಬ್ಬ ಹೆಚ್ಚುವರಿ ವೇಗಿ ಅಂದರೆ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಒದ್ದೆ ನೆಲದಲ್ಲಿ ಸ್ಪಿನ್ ಬೌಲರ್ ಅಷ್ಟೇನೂ ಕೆಲಸಕ್ಕೆ ಬರುವುದಿಲ್ಲವಾದ್ದರಿಂದ ಸಿಂಗ್‌, ಪರಿಸ್ಥಿತಿ ನೋಡಿಕೊಂಡು ಆಡಿಸಬೇಕು ಎಂದಿದ್ದಾರೆ.

Story first published: Friday, June 11, 2021, 19:59 [IST]
Other articles published on Jun 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X