
ಇಂಗ್ಲೆಂಡ್ಗೆ ಪಂತ್ ಭಯ
ಇಂಗ್ಲೆಂಡ್ ತಡವಾಗಿ ಇನ್ನಿಂಗ್ಸ್ ಡಿಕ್ಲೇರ್ ಮಾಡಲು ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಭಯವೇ ಕಾರಣ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬಹಿರಂಗವಾಗಿಯೇ ಹೇಳಿದ್ದಾರೆ. ಈ ಭಯದಿಂದಲೇ ಇಂಗ್ಲೆಂಡ್ 400 ರನ್ಗಳ ಮುನ್ನಡೆಯ ಬಳಿಕವೂ ಡಿಕ್ಲೇರ್ ಮಾಡಿರಲಿಲ್ಲ ಎಂದು ಜೋ ರೂಟ್ ವಿವರಿಸಿದ್ದಾರೆ.

ಮೊದಲೇ ಡಿಕ್ಲೇರ್ ಮಾಡಬಹುದಾಗಿತ್ತು
"ನಾವು ಮೊದಲೇ ಡಿಕ್ಲೇರ್ ಮಾಡಿಕೊಳ್ಳಬಹುದಾಗಿತ್ತು. ಖಂಡಿತ ನಾವು ಮಾಡಬಹುದಾಗಿತ್ತು. ಆದರೆ ನಾನು ಕೇವಲ ಎರಡು ಫಲಿತಾಂಶಗಳು ಮಾತ್ರವೇ ಬರಬೇಕೆಂದು ಬಯಸಿದ್ದೆ. ನಮ್ಮ ಬೌಲರ್ಗಳಿಗೆ ಸ್ವಲ್ಪ ಸಮಯವನ್ನು ನೀಡಲು ನಾವು ಬಯಸಿದ್ದೆವು. ಮೊದಲಿಗೆ ನಾವು 400 ರನ್ಗಳ ಗುರಿ ನೀಡಲು ಬಯಸಿದ್ದೆವು, ಆದರೆ ಬಳಿಕ ಮತ್ತಷ್ಟು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡೆವು" ಎಂದಿದ್ದಾರೆ ಜೋ ರೂಟ್.

ಪಂತ್ ಮತ್ತಷ್ಟು ಕುತೂಹಲವಾಗಿಸುತ್ತಿದ್ದರು
"ರಿಷಫ್ ಪಂತ್ ಒಂದು ಸೆಶನ್ ಬ್ಯಾಟಿಂಗ್ ಮಾಡಿದರೆ ಪಂದ್ಯವನ್ನು ಮತ್ತಷ್ಟು ಕುತೂಹಲವಾಗಿಸುತ್ತಿದ್ದರು. ಆದರೆ ನಾನು ವಿಕೆಟ್ಅನ್ನು ತೆಗೆಯುವ ಒತ್ತಡವನ್ನು ಹೇರಿಕೊಳ್ಳಲು ಬಯಸಿರಲಿಲ್ಲ. ಈ ಪಿಚ್ನಲ್ಲಿ ಬೌಲರ್ಗಳು ವಿಕೆಟ್ ಪಡೆಯುವುದನ್ನು ಮಾತ್ರವೇ ಕೇಂದ್ರೀಕರಿಸಲು ಬಯಸಿದ್ದೆ. ನಾವು ಯಾವಾಗಲೂ 10 ವಿಕೆಟ್ ಪಡೆಯಲು ಅವಕಾಶವನ್ನು ಸೃಷ್ಟಿಸಬಲ್ಲೆವು. ಆದರೆ ಅದಕ್ಕಾಗಿ ನಾವು ಸ್ವಲ್ಪ ಶಿಸ್ತಿನಿಂದ ಇದ್ದು ನಮ್ಮ ಬಳಿಗೆ ಬರುವ ಅವಕಾಶವನ್ನು ಬಳಸಿಕೊಳ್ಳಬೇಕಿತ್ತು. ಎಲ್ಲವೂ ನಮ್ಮ ಪರವಾಗಿ ನಡೆದಿರುವುದಕ್ಕೆ ನಾನು ಸಂತಸಪಡುತ್ತೇನೆ" ಎಂದು ಜೋ ರೂಟ್ ಹೇಳಿದರು.

ನಿಜಕ್ಕೂ ಅದ್ಭುತವಾದ ವಿಜಯ
"ಈ ಗೆಲುವು ನಿಜಕ್ಕೂ ಅದ್ಭುತವಾದ ಗೆಲುವು. ಆದರೆ ಇದು ಕಢವಲ ಆರಂಭ ಎಂಬುದು ನಮಗೆ ತಿಳಿದಿದೆ. ಭಾರತ ಅದ್ಭುತವಾದ ದೇಶವಾಗಿದ್ದು ಶ್ರೇಷ್ಠವಾದ ಆಟಗಾರರನ್ನು ಒಳಗೊಂಡಿದೆ. ಅವರು ನಮ್ಮಮೇಲೆ ಬಲಿಷ್ಠವಾಗಿ ಬರಬಹುದು. ಆದರೆ ಈಗ 1-0 ಅಂತರವನ್ನು ಹೊಂದಿರುವುದು ನಿಜಕ್ಕೂ ಉತ್ತಮ. ಈ ವಾರದಲ್ಲಿ ನಾವು ಆಡಿದ ರೀತಿಗೆ ನಿಜಕ್ಕೂ ಹೆಮ್ಮೆಪಡುತ್ತೇವೆ. ನಾವು ಕೆಲ ಪ್ರದೇಶಗಳಲ್ಲಿ ಇನ್ನೂ ಉತ್ತಮವಾಗಬೇಕಿದೆ" ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಭಿಪ್ರಾಯವನ್ನು ವ್ಯಕ್ತಡಿಸಿದರು.


Click it and Unblock the Notifications
