ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಹಾಗೂ ವಿದರ್ಭ ತಂಡಗಳು ವಿಜಯ್ ಹಜಾರೆ ಟೂರ್ನಿಯ ಫೈನಲ್ನಲ್ಲಿ ಕಾದಾಟ ನಡೆಸಲಿವೆ. ವಡೋಧರಾದಲ್ಲಿ ಶನಿವಾರ ನಡೆಯುವ ಪಂದ್ಯ ಎಲ್ಲರ ಚಿತ್ತ ಕದ್ದಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಐದನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಕನಸು ಕರ್ನಾಟಕ ತಂಡದ್ದಾಗಿದೆ. ಇನ್ನು ಇದೇ ಚೊಚ್ಚಲ ಬಾರಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಿರುವ ವಿದರ್ಭ ಟ್ರೋಫಿ ಎತ್ತುವ ಕನಸಿನಲ್ಲಿದೆ.
ದಶಕಗಳ ಕಾಲ ಒಂದೇ ತಂಡದ ಪರ ಆಡಿದ ಇಬ್ಬರು ಸ್ನೇಹಿತರ ನಡುವಿನ ಕಾಳಗ ನೋಡಲು ಅಭಿಮಾನಿಗಳು ರೆಡಿ ಆಗಿದ್ದಾರೆ. ಕ್ರಿಕೆಟ್ ವ್ಯಾಕರಣವನ್ನು ಕಲಿತ ರಾಜ್ಯದ ವಿರುದ್ಧ ಕರುಣ್ ನಾಯರ್ ಕಣಕ್ಕೆ ಇಳಿಯಲಿದ್ದಾರೆ. ಫಾರ್ಮ್ ಇಲ್ಲದೆ ಇದ್ದಾಗ ಕರುಣ್ ನಾಯರ್ ಅವರನ್ನು ಕರ್ನಾಟಕ ತಂಡ ಕೈ ಬಿಟ್ಟಿತ್ತು. ಆಗ ಕರುಣ್ ವಿದರ್ಭ ತಂಡಕ್ಕೆ ವಲಸೆ ಹೋದರು. ಈಗ ತವರಿನ ತಂಡದ ವಿರುದ್ಧ ಪ್ರಶಸ್ತಿಗಾಗಿ ವಿದರ್ಭ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲಿದ್ದ ದೇವದತ್ ಪಡಿಕ್ಕಲ್ ತವರಿಗೆ ಮರಳುತ್ತಿದ್ದಂತೆ ಕರ್ನಾಟಕ ತಂಡದ ಪರ ವಿಜಯ್ ಹಜಾರೆ ಟೂರ್ನಿ ಆಡಲು ಮುಂದಾದರು. ಈ ವೇಳೆ ಸಿಕ್ಕ ಎರಡು ಅವಕಾಶದಲ್ಲೂ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದರು. ಇವರ ಆಗಮನ ನಿಶ್ಚಿತವಾಗಿ ಕರ್ನಾಟಕ ತಂಡ ಬ್ಯಾಟಿಂಗ್ ವಿಭಾಗಕ್ಕೆ ಆನೆ ಬಲ ತುಂಬಿದಂತೆ ಆಗಿದೆ. ಇನ್ನು ಟೂರ್ನಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಮಯಾಂಕ್ ಅಗರ್ವಾಲ್, ಕೆವಿ ಅನೀಶ್, ಆರ್.ಸ್ಮರಣ್, ಕೆಎಲ್ ಶ್ರೀಜೇಶ್ ತಂಡಕ್ಕೆ ನೆರವಾಗಬಲ್ಲರು ಮಧ್ಯಮ ಕ್ರಮಮಾಂಕದಲ್ಲಿ ಶ್ರೇಯಸ್ ಗೋಪಾಲ್ ಹಾಗೂ ಅಭಿನವ್ ಮನೋಹರ್ ತಂಡದ ಪರ ರನ್ ಹಿಗ್ಗಿಸಬಲ್ಲರು.
ಮಯಾಂಕ್ ಅಗರ್ವಾಲ್, 9 ಪಂದ್ಯ, 619 ರನ್,
ಕೆವಿ ಅನೀಶ್, 9 ಪಂದ್ಯ, 364 ರನ್,
ಕೆ.ಸ್ಮರಣ್, 9 ಪಂದ್ಯ, 332 ಪಂದ್ಯ,
ಕರ್ನಾಟಕದ ಬೌಲಿಂಗ್ ಸ್ಥಿರವಾಗಿದೆ. ವಿಕೆಟ್ ಬೇಟೆ ನಡೆಸಿ, ರನ್ಗಳಿಗೆ ಕಡಿವಾಣ ಹಾಕಬಲ್ಲ ಬೌಲರ್ಸ್ ರಾಜ್ಯ ತಂಡದಲ್ಲಿದ್ದಾರೆ. ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್ ಮಿಡ್ಲ್ ಓವರ್ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ವೇಗಿಗಳಾದ ಅಭಿಲಾಶ್ ಶೆಟ್ಟಿ, ವಾಸುಕಿ ಕೌಶಿಕ್, ಪ್ರಸಿದ್ಧ ಕೃಷ್ಣ ಸಹ ಎದುರಾಳಿ ಬ್ಯಾಟರ್ಗಳನ್ನು ಕಾಡಬಲ್ಲರು.
ಶ್ರೇಯಸ್ ಗೋಪಾಲ್, 9 ಪಂದ್ಯ, 18 ವಿಕೆಟ್
ವಾಸುಕಿ ಕೌಶೀಕ್, 9 ಪಂದ್ಯ, 15 ವಿಕೆಟ್
ಅಭಿಲಾಶ್ ಶೆಟ್ಟಿ, 6 ಪಂದ್ಯ, 14 ವಿಕೆಟ್

ವಿದರ್ಭ ತಂಡದ ಪರ ಕರುಣ್ ನಾಯರ್ ನಾಯಕನಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ತಂಡವನ್ನು ಕರುಣ್ ನಾಯರ್ ಫೈನಲ್ಗೆ ಕರೆದುಕೊಂಡು ಹೋದ ಶ್ರೇಯವನ್ನು ಹೊಂದಿದ್ದಾರೆ. ಇನ್ನು ಆರಂಭಿಕರಾದ ಧ್ರುವ್ ಶೋರೆ, ಯಶ್ ರಾಥೋಡ್ ಮಾತ್ರ ತಂಡಕ್ಕೆ ಆಧಾರವಾಬಲ್ಲರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇನ್ನು ಬೌಲರ್ಗಳು ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ತೋಡಿಸಲು ಶ್ರಮಿಸಬೇಕಿದೆ.
ಕರುಣ್ ನಾಯರ್, 8 ಪಂದ್ಯ, 752 ರನ್
ಧ್ರುವ್ ಶೋರೆ, 8 ಪಂದ್ಯ, 384 ರನ್
ಯಶ್ ರಾಥೋಡ್, 8 ಪಂದ್ಯ, 384 ರನ್
ನಚಿಕೇತ್ ಭೂತೇ, 8 ಪಂದ್ಯ, 15 ವಿಕೆಟ್
ಹರ್ಷ ದುಬೆ, 8 ಪಂದ್ಯ, 14 ವಿಕೆಟ್
ದರ್ಶನ್ ನಲ್ಕಂಡೆ, 8 ಪಂದ್ಯ, 13 ವಿಕೆಟ್