ಭಾರತ-ಪಾಕ್ ಮುಖಾಮುಖಿ
ಇದಾಗಿದ್ದು ಭಾನುವಾರ (ನವೆಂಬರ್ 11) ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯದ ವೇಳೆ. ಪಂದ್ಯ ಆರಂಭಕ್ಕೂ ಮುನ್ನ ಎರಡೂ ದೇಶಗಳ ರಾಷ್ಟ್ರಗೀತೆ ಹಾಡಲಾಗುತ್ತದೆ. ಈ ವೇಳೆ ಇತ್ತಂಡಗಳ ಆಟಗಾರರ ಜೊತೆ ಮೈದಾನದಲ್ಲಿದ್ದ ಮಸ್ಕತ್ ನ ಪುಟಾಣಿ ಅನಾರೋಗ್ಯದಿಂದ ಬಳಲಿದಳು.
ಕೈಯಾರೆ ಎತ್ತಿಕೊಂಡರು
ಮಗು ಅನಾರೋಗ್ಯ ಸಮಸ್ಯೆಗೀಡಾಗಿರುವುದನ್ನು ಅರಿತ ಹರ್ಮನ್ಪ್ರೀತ್ ಪುಟಾಣಿಯನ್ನು ಹಿಡಿದು ನಿಂತು ರಾಷ್ಟ್ರಗೀತೆ ಮುಗಿಯೋವರೆಗೂ ಕಾದರು. ಗೀತೆ ಮುಗಿಯುತ್ತಲೇ ಮಗುವನ್ನು ಕೈಯಾರೆ ಎತ್ತಿಕೊಂಡು ಬಂದವರೆ, ಚಿಕಿತ್ಸೆಗಾಗಿ ಇನ್ನೊಬ್ಬರ ಕೈಗೆ ಹಸ್ತಾಂತರಿಸಿದರು. ಕೌರ್ ಅವರ ಹಿಂದಿನ ಅದ್ಭುತ ಬ್ಯಾಟಿಂಗ್ ಕಂಡಿದ್ದ ಅಭಿಮಾನಿಗಳು ಕೌರ್ ಅವರ ಅನುಕಂಪದ ಹೃದಯಕ್ಕೂ ಮನ ಸೋತಿದ್ದಾರೆ.
ಟೂರ್ನಿಯಲ್ಲಿ ಎರಡನೇ ಜಯ
ಬಿ ಗ್ರೂಪ್ನಲ್ಲಿ ರುವ ಭಾರತ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಜಯ ಸಾಧಿಸಿತ್ತು. ಈ ವೇಳೆ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಕೌರ್ ಟಿ20 ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯೆ ಕೀರ್ತಿಗೂ ಪಾತ್ರರಾಗಿದ್ದರು. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲೂ ಭಾರತ 7 ವಿಕೆಟ್ ಗೆಲುವನ್ನಾಚರಿಸಿತ್ತು.
ಒಂದೇ ಹೃದಯವನ್ನು ಕದಿಯುತ್ತಿದ್ದೀರಿ
ನ್ಯೂಜಿಲ್ಯಾಂಡ್ ವಿರುದ್ಧ ಕೌರ್ ಹೊಟ್ಟೆನೋವಿನ ಸಮಸ್ಯೆಯ ನಡುವೆಯೂ ಅಬ್ಬರದ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನ ಗೆದ್ದಿದ್ದರು. ಪುಟಾಣಿಗೆ ಕೌರ್ ನೆರವಾಗಿದ್ದನ್ನು ಕಂಡ ಅಭಿಮಾನಿಯೊಬ್ಬರು 'ನಮಗಿರೋದು ಒಂದೇ ಹೃದಯ. ಅದನ್ನೇ ಮತ್ತೆ ಮತ್ತೆ ಕದಿಯುತ್ತಿದ್ದೀರಲ್ಲ?' ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications












