For Quick Alerts
ALLOW NOTIFICATIONS  
For Daily Alerts
 

Ranji Trophy: 74 ವರ್ಷಗಳಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ ಕೇರಳ

ರಣಜಿ ಟ್ರೋಫಿ 2025ರ ಮೊದಲ ಸೆಮಿಫೈನಲ್ ಪಂದ್ಯ ಗುಜರಾತ್ ಮತ್ತು ಕೇರಳ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಮೈದಾನ-ಎ ನಲ್ಲಿ ನಡೆಯಿತು. ಈ ಪಂದ್ಯದ 5ನೇ ಮತ್ತು ಕೊನೆಯ ದಿನವಾದ ಇಂದು ಸಚಿನ್ ಬೇಬಿ ನೇತೃತ್ವದ ಕೇರಳ ತಂಡ ಇತಿಹಾಸ ನಿರ್ಮಿಸಿದೆ. 74 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಕೇರಳ ತಂಡವು ಮೊದಲ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದಿದೆ.

ಕೇರಳ ನಾಯಕ ಸಚಿನ್ ಬೇಬಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ಅವರ ಅದ್ಭುತ 177 ರನ್‌ಗಳ ಶತಕದ ನೆರವಿನಿಂದ ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 457 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಈ ದೊಡ್ಡ ಗುರಿಗೆ ಉತ್ತರವಾಗಿ, ಗುಜರಾತ್ ಬ್ಯಾಟರ್‌ಗಳು ಸಹ ಅದ್ಭುತ ಪ್ರದರ್ಶನ ನೀಡಿದರು. ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಪ್ರಿಯಾಂಕ್ ಪಾಂಚಾಲ್ 148 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ಆದರೆ, ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಸಾಧಿಸಿ ಮೊದಲ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯಿತು.

Kerala Team Defeats Gujarat in Semifinal 1 to Enter Ranji Trophy Final

ಇಂದು, ಶುಕ್ರವಾರ ಪಂದ್ಯದ 5ನೇ ದಿನವು ರೋಮಾಂಚಕಾರಿಯಾಗಿತ್ತು. ಗುಜರಾತ್ ತಂಡವು 7 ವಿಕೆಟ್ ಕಳೆದುಕೊಂಡು 429 ಸ್ಕೋರ್‌ನೊಂದಿಗೆ 5ನೇ ದಿನವನ್ನು ಪ್ರಾರಂಭಿಸಿತು. ಗುಜರಾತ್ ತಂಡ ಫೈನಲ್ ತಲುಪಲು 29 ರನ್ ಗಳಿಸಬೇಕಿತ್ತು. ಆದರೆ, ಕೇರಳ 3 ವಿಕೆಟ್‌ಗಳನ್ನು ತೆಗೆದುಕೊಳ್ಳಬೇಕಾಯಿತು. ಒಂದು ಹಂತದಲ್ಲಿ ಗುಜರಾತ್‌ 9 ವಿಕೆಟ್ ನಷ್ಟಕ್ಕೆ 455 ರನ್ ಗಳಿಸಿತ್ತು. ಗುಜರಾತ್ ಫೈನಲ್ ತಲುಪಲು 3 ರನ್‌ಗಳನ್ನು ಗಳಿಸಬೇಕಾಗಿತ್ತು. ಈ ಸಮಯದಲ್ಲಿ ಕೇರಳ ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಾಗದ ಪವಾಡ ನಡೆಯಿತು.

ಗುಜರಾತ್ ಬ್ಯಾಟರ್ ಅರ್ಜನ್ ನಾಗವಾಸ್ವಾಲಾ ಅವರು ಸರ್ವಾಟೆ ಎಸೆತದಲ್ಲಿ ಸ್ವೀಪ್ ಶಾಟ್ ಆಡಿದರು. ಅವರ ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸಿತು . ಶಾರ್ಟ್ ಲೆಗ್‌ನಲ್ಲಿ ನಿಂತಿದ್ದ ಫೀಲ್ಡರ್‌ನ ಹೆಲ್ಮೆಟ್‌ಗೆ ಚೆಂಡು ತಗುಲಿ ಮೇಲಕ್ಕೆ ಚಿಮ್ಮಿತು, ಅದನ್ನು ಮೊದಲ ಸ್ಲಿಪ್‌ನಲ್ಲಿ ನಿಂತಿದ್ದ ಸಚಿನ್ ಬೇಬಿ ಸುಲಭವಾಗಿ ಹಿಡಿದರು. ಹೀಗಾಗಿ ಮೊದಲ ಇನ್ನಿಂಗ್ಸ್‌ನ ಆಧಾರದ ಮೇಲೆ, ಕೇರಳ ತಂಡವು ಗುಜರಾತ್‌ಗಿಂತ 2 ರನ್‌ಗಳ ಮುನ್ನಡೆಯೊಂದಿಗೆ ಫೈನಲ್‌ಗೆ ಪ್ರವೇಶಿಸಿತು.

ಫೈನಲ್ ತಲುಪಲು ಕಾರಣವೇನು?

ರಣಜಿ ಟ್ರೋಫಿಯ ನಿಯಮವೆಂದರೆ ನಾಕೌಟ್ ಪಂದ್ಯವು ಡ್ರಾ ಆಗಲು ಸಾಧ್ಯವಿಲ್ಲ. ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜೇತರೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಾಕೌಟ್ ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವುದು ಮುಖ್ಯ. ಈ ಪಂದ್ಯದಲ್ಲಿ, ಕೇರಳ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಗುಜರಾತ್‌ಗಿಂತ 2 ರನ್‌ಗಳ ಮುನ್ನಡೆ ಸಾಧಿಸಿತು. ಈ ಆಧಾರದ ಮೇಲೆ ಕೇರಳ ತಂಡವನ್ನು ಪಂದ್ಯದ ವಿಜೇತ ಎಂದು ಘೋಷಿಸಲಾಯಿತು. ಹೀಗಾಗಿ ಫೈನಲ್‌ಗೆ ಅರ್ಹತೆ ಪಡೆಯಿತು.

ಮುಂಬೈಗೆ ಮುಖಭಂಗ

ಶುಕ್ರವಾರ ನಡೆದ ಸೆಮಿಫೈನಲ್‌ 2 ರಲ್ಲಿ ವಿದರ್ಭ ತಂಡವು ಮುಂಬೈ ಅನ್ನು 80 ರನ್‌ಗಳಿಂದ ಸೋಲಿಸಿ ರಣಜಿ ಟ್ರೋಫಿಯ ಫೈನಲ್‌ಗೆ ಪ್ರವೇಶಿಸಿತು. ಈ ಮೂಲಕ ಮುಂಬೈ ವಿರುದ್ಧ ಅಕ್ಷಯ್ ವಾಡ್ಕರ್ ನೇತೃತ್ವದ ವಿದರ್ಭ ಕಳೆದ ವರ್ಷದ ಫೈನಲ್‌ನಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್‌ ಪಂದ್ಯದ ಐದನೇ ಮತ್ತು ಕೊನೆಯ ದಿನದಂದು ವಿದರ್ಭ ತಂಡವನ್ನು 169 ರನ್‌ಗಳಿಂದ ಸೋಲಿಸುವ ಮೂಲಕ ಮುಂಬೈ ತಂಡವು 2023-24ರ ಋತುವಿನಲ್ಲಿ 42 ನೇ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ 8 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಿತು.

ಫೆಬ್ರವರಿ 26, ಬುಧವಾರ ನಾಗ್ಪುರದಲ್ಲಿ ನಡೆಯಲಿರುವ 2024-25ರ ರಣಜಿ ಟ್ರೋಫಿಯ ಫೈನಲ್‌ನಲ್ಲಿ ವಿದರ್ಭ ಮತ್ತು ಕೇರಳ ತಂಡಗಳು ಮುಖಾಮುಖಿಯಾಗಲಿವೆ.

Story first published: Friday, February 21, 2025, 17:51 [IST]
Other articles published on Feb 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+