ಲಂಡನ್, ಜುಲೈ 23: ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ಲಾರ್ಡ್ಸ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಈ ಬಾರಿ ಕ್ರಿಕೆಟ್ ಆಡುವ ಬದಲು ಕ್ರಿಕೆಟ್ ಆಟ ನೋಡಲು ಹೋಗುತ್ತಿದ್ದಾರೆ. ದಿ ವಿಲನ್ ಚಿತ್ರೀಕರಣ ಮುಗಿಸಿಕೊಂಡು, ಕ್ರಿಕೆಟ್ ಆಟ ನೋಡಲು ಹೋಗುವುದಾಗಿ ಸುದೀಪ್ ಟ್ವೀಟ್ ಮಾಡಿದ್ದಾರೆ.
ಬ್ರಿಟನ್ ಅಂಗಳದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದ ಭಾರತದ ವನಿತೆಯರ ತಂಡ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಅದರ ಅಂಗಳದಲ್ಲೇ ಎದುರಿಸಲಿದೆ.

ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಅವರ ಅಂಗಳದಲ್ಲೇ ಸೆಣಸಲಿದೆ. ಈ ಮಹತ್ವದ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಸ್ಯಾಂಡಲ್ವುಡ್ ನಟ ಸುದೀಪ್.
ಸದ್ಯ ದಿ ವಿಲನ್ ಚಿತ್ರದ ಶೂಟಿಂಗ್ಗಾಗಿ ಲಂಡನ್ನಲ್ಲಿರುವ ಕಿಚ್ಚ ಈ ಲಾರ್ಡ್ಸ್ನಲ್ಲಿ ನಡೆಯಲ್ಲಿ ನಡೆಯಲಿರುವ ವನಿತೆಯರ ಕ್ರಿಕೆಟ್ನ ಅಂತಿಮ ಹಣಾಹಣಿ ಪಂದ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಈ ವಿಷಯವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಸುದೀಪ್ ಎಲ್ಲ ಶೆಡ್ಯೂಲ್ಗಳು ಸಂತೋಷದಿಂದ ಕಳೆದಿದ್ದು, ವರ್ಲ್ಡ್ ಕಪ್ನಲ್ಲಿ ಭಾರತೀಯ ವನಿತೆಯರ ಆಟವನ್ನು ನೋಡಲು ಕಾತುರದಲ್ಲಿದ್ದೇನೆ ಇಂತಹ ಅಪರೂಪದ ಹಾಗು ಹೆಮ್ಮೆಯ ಕ್ಷಣಗಳನ್ನು ತಪ್ಪಿಸಿಕೊಳ್ಳುವುದಾದ್ರು ಹೇಗೆ ಅಂತ ತಮ್ಮ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಇದೇ ವೇಳೆ ಲಂಡನ್ನಿನಲ್ಲಿರುವ ಕರ್ನಾಟಕದ ಹೆಮ್ಮೆಯ ಗಾಯಕ ರಘು ದೀಕ್ಷಿತ್ ಅವರು ತಮ್ಮ ಕಾರ್ಯಕ್ರಮಕ್ಕೆ ಬರುವಂತೆ ಟ್ವೀಟ್ ನಲ್ಲೇ ಆಹ್ವಾನ ನೀಡಿದ್ದಾರೆ.