ಮೊಹಾಲಿ, ಮೇ 09 : ತಾಳ್ಮೆ ಕಳೆದುಕೊಂಡು ಅಂಪೈರ್ ನೊಂದಿಗೆ ವಾಗ್ವಾದಕ್ಕಿಳಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವೇಗಿ ಸಂದೀಪ್ ಶರ್ಮ ದಂಡಕ್ಕೆ ಗುರಿಯಾಗಿದ್ದಾರೆ.
ಭಾನುವಾರ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ತಾವು ಎಸೆದ ಬೌಲನ್ನು ನೋಬಾಲ್ ಎಂದ ಅಂಪೈರ್ ನೊಂದಿಗೆ ಸಂದೀಪ್ ಶರ್ಮಾ ಕೆಲ ನಿಮಿಷ ವಾದಕ್ಕೆ ಇಳಿದಿದ್ದಾರೆ. ಇದರಿಂದ ಅವರಿಗೆ ಪಂದ್ಯ ಸಂಭಾವನೆಯ ಶೇ 50ರಷ್ಟು ದಂಡ ವಿಧಿಸಿದ್ದಾರೆ.[ಐಪಿಎಲ್ : ರೋಹಿತ್ ಶರ್ಮ ಅವರಿಗೆ ಶೇ 50ರಷ್ಟು ದಂಡ]

ಅಂಪೈರ್ ಗೆ ತಿಳಿಸದೆ ಅಚಾನಕ್ಕಾಗಿ 'ರೌಂಡ್ ದ ವಿಕೆಟ್' ಬೌಲಿಂಗ್ ಮಾಡಿದ್ದರು. ಇದರಿಂದ ಅಂಪೈರ್ ಎ.ನಂದ ಕಿಶೋರ್ ನೋಬಾಲ್ ಘೋಷಿಸಿದರು. ಇದರಿಂದ ಎರಡ್ಮೂರು ನಿಮಿಷಗಳ ಕಾಲ ಅಂಪೈರ್ ನೊಂದಿಗೆ ಸಂದೀಪ್ ಶರ್ಮ ವಾದ ಮಾಡಿದ್ದರು.
ಹೇಳದೆ 'ರೌಂಡ್ ದ ವಿಕೆಟ್' ಬೌಲಿಂಗ್ ಮಾಡಿದಕ್ಕೆ ನೋಬಾಲ್ ನೀಡಲಾಗಿದೆ ಎಂದು ಅಂಪೈರ್ ಎ.ನಂದ ಕಿಶೋರ್ ಅವರು ಸ್ಪಷ್ಟನೆ ನೀಡಿದರು.
ಆದರೂ ತಾಳ್ಮೆ ಕಳೆದುಕೊಂಡ ಸಂದೀಪ್ ವಾದ ಮಾಡುತ್ತಲ್ಲೇ ಇದ್ದರು. ಇದರಿಂದ ಸಂದೀಪ್ ಶರ್ಮ ಅವರ ನಡುವಳಿಕೆ ಮಿತಿ ಮೀರಿದ್ದರಿಂದ ದಂಡ ಹಾಕಲಾಯಿತು.