ಶುಕ್ರವಾರ, ಏಪ್ರಿಲ್ 26ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ರೋಚಕ ಪಂದ್ಯವು ಅಸಾಮಾನ್ಯ ಸಂಗತಿಗೆ ಸಾಕ್ಷಿಯಾಗಿದ್ದು, ಇದು ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಯಾಗಿದೆ.
ಟಿ20 ಕ್ರಿಕೆಟ್ ಸ್ವರೂಪದಲ್ಲಿ ಮೊದಲ ಬಾರಿಗೆ ತಂಡವೊಂದು 260 ಪ್ಲಸ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದೆ ಮತ್ತು ಇದನ್ನು ಇಂಡಿಯನ್ ಪ್ರೀಮಿಯರ್ ಲೀಗ್ ತಂಡವಾದ ಪಂಜಾಬ್ ಕಿಂಗ್ಸ್ ಸಾಧಿಸಿದೆ.

ಪಂಜಾಬ್ ಕಿಂಗ್ಸ್ ತಂಡದ ಶತಕವೀರ ಜಾನಿ ಬೈರ್ಸ್ಟೋವ್ ಅವರು ಕೆಕೆಆರ್ ಬೌಲರ್ಗಳ ವಿರುದ್ಧ ನಂಬಲಾಗದಷ್ಟು ದಾಳಿ ನಡೆಸಿದ ಕಾರಣ, ಸುನಿಲ್ ನರೈನ್ ಹೊರತುಪಡಿಸಿ ಉಳಿದ ಬೌಲರ್ಗಳು ಅಸಹಾಯಕರಾಗಿದ್ದರು.
ಕಳೆದ ವರ್ಷ ಸೆಂಚುರಿಯನ್ನಲ್ಲಿ ನಡೆದ T20I ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 4 ವಿಕೆಟ್ಗೆ 259 ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಪ್ರಯತ್ನವನ್ನು ಉತ್ತಮಗೊಳಿಸುವ ಮೂಲಕ ಪಂಜಾಬ್ 262 T20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ-ಯಶಸ್ವಿ ಚೇಸ್ ಆಗಿರುವುದರಿಂದ ಹೊಸ ವಿಶ್ವ ದಾಖಲೆಯನ್ನು ಬರೆದಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ್ದ 262 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು ಯಾರೊಬ್ಬರೂ ಫೇವರಿಟ್ ಆಗಿರಲಿಲ್ಲ. ಆದರೆ ಪಂಜಾಬ್ ಬ್ಯಾಟರ್ಗಳು ಎಲ್ಲರ ಆಲೋಚನೆ ತಲೆಕೆಳಗೆ ಮಾಡಿದರು.
262 - ಪಂಜಾಬ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಕೋಲ್ಕತ್ತಾ, ಐಪಿಎಲ್ 2024
259 - ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, ಸೆಂಚುರಿಯನ್, 2023
253 - ಮಿಡ್ಲ್ಸೆಕ್ಸ್ vs ಸರ್ರೆ, ದಿ ಓವಲ್, ಟಿ20 ಬ್ಲಾಸ್ಟ್, 2023
262 - ಪಂಜಾಬ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಕೋಲ್ಕತ್ತಾ, 2024
224 - ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್, ಶಾರ್ಜಾ, 2020
ಈ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟುವಿಕೆ ಪಂದ್ಯವು ಬಹಳ ಕುತೂಹಲಕಾರಿ ಪ್ರಶ್ನೆಯನ್ನು ಸಹ ಹುಟ್ಟುಹಾಕಿದೆ. ಬ್ಯಾಟರ್ಗಳಿಗೆ ಮಾತ್ರ ಟಿ20 ಆಟವಾ? ಎಂದು ಕೇಳಲಾಗುತ್ತಿದೆ.
ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಬೌಲರ್ಗಳ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು.
"ಬೌಲರ್ಗಳನ್ನು ಯಾರಾದರೂ ಕಾಪಾಡಿ ಪ್ಲೀಸ್ #ಕೆಕೆಆರ್vsಪಿಬಿಕೆಎಸ್ #ಐಪಿಎಲ್2024," ಎಂದು ರವಿಚಂದ್ರನ್ ಅಶ್ವಿನ್ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
"ಈ ರೀತಿಯ ಆಟವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ಇದನ್ನು ವಿವರಿಸಲು "ಐತಿಹಾಸಿಕ' ಎನ್ನುವ ಏಕೈಕ ಮಾರ್ಗವಾಗಿದೆ ಎಂದು ನಾನು ಊಹಿಸುತ್ತೇನೆ. 262 ರನ್ಗಳನ್ನು 8 ಎಸೆತಗಳು ಮತ್ತು 8 ವಿಕೆಟ್ಗಳು ಬಾಕಿ ಇರುವಂತೆಯೇ ಯಶಸ್ವಿಯಾಗಿ ಬೆನ್ನಟ್ಟಲಾಗಿದೆ. ಇನ್ನೇನು ಸಾಧ್ಯ?" ಎಂದು ಭಾರತದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಬರೆದುಕೊಂಡಿದ್ದಾರೆ.
"ಬ್ಯಾಟರ್ಗಳು ತಮ್ಮ ನಿಜವಾದ ಸಾಮರ್ಥ್ಯವನ್ನು ಅನ್ಲಾಕ್ ಮಾಡಿದ್ದಾರೆ. ಬ್ಯಾಟರ್ಗಳಿಗಿಂತ ಉತ್ತಮವಾಗಿ ಪ್ರದರ್ಶನ ನೀಡುವುದನ್ನು ಬೌಲರ್ಗಳಿಗೆ ಹೇಳಿಕೊಡಬೇಕಿದೆ ಮತ್ತು ಐಪಿಎಲ್ ವಿಕಸನಗೊಳ್ಳುತ್ತಿದೆ," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.