
ಉತ್ತಮವಾಗಿ ನಿರ್ವಹಣೆ
ಕೆಎಲ್ ರಾಹುಲ್ ತನಗೆ ಸಿಕ್ಕ ಜವಾಬ್ಧಾರಿಯನ್ನು ಕೆಟ್ಟದಾಗಿ ನಿರ್ವಹಿಸುತ್ತಿಲ್ಲ. ಬ್ಯಾಟ್ ಹಾಗೂ ವಿಕೆಟ್ನ ಹಿಂದೆ ಕೆಎಲ್ ರಾಹುಲ್ ಉತ್ತಮವಾಗಿ ಆಡುತ್ತಿದ್ದಾರೆ. ಅವರು ಅದಕ್ಕೆ ತುಂಬಾ ಚೆನ್ನಾಗಿ ಹೊಂದಾಣಿಕೆಯಾಗುತ್ತಿದ್ದಾರೆ ಎಂದು ವೃದ್ಧಿಮಾನ್ ಸಾಹ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಆತನೊಬ್ಬ ಅತ್ಯುತ್ತಮ ಬ್ಯಾಟ್ಸ್ಮನ್
ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ. ವಿಕೆಟ್ ಕೀಪಿಂಗ್ನಲ್ಲಿ ಇನ್ನಷ್ಟು ಪಳಗುವ ಸಲುವಾಗಿ ರಾಹುಲ್ ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಇದು ಟೀಮ್ ಇಂಡಿಯಾದ ಪಾಲಿಗೆ ಅತ್ಯುತ್ತಮ ವಿಚಾರವಾಗಿದೆ ಎಂದು ಕೆಎಲ್ ರಾಹುಲ್ ಬಗ್ಗೆ ವೃದ್ಧಿಮಾನ್ ಸಾಹ ಹೇಳಿದ್ದಾರೆ.

ಧೋನಿ ಬಗ್ಗೆ ಸಾಹ ಮಾತು
"ಆನ್ ದಿ ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್ ಎರಡರಲ್ಲೂ ಧೋನಿ ಓರ್ವ ದಿಗ್ಗಜ ಆಟಗಾರ. ಆತ ಯಾವಾಗಲೂ ಯಾವಾಗಲೂ ಊಹಿಸಲು ಅಸಾಧ್ಯವಾಗುವಂತಾ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ. ಆತನನ್ನು ನಾನು ಯಾವಾಗಲೂ ಸಕಾರಾತ್ಮಕವಾಗಿಯೇ ನೋಡಿದ್ದೇನೆ. ಆತನ ದೇಹದಲ್ಲಿ ಒಂದೇ ಒಂದು ಋಣಾತ್ಮಕ ಎಲುಬಿಲ್ಲ" ಎಂದು ಧೋನಿಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ

ಧೋನಿಯ ಜೊತೆಗೆ ಒಂದೇ ಬಾರಿ ಆಡುವ ಬಳಗದಲ್ಲಿ
ಟೆಸ್ಟ್ ತಂಡದ ಖಾಯಂ ವಿಕೆಟ್ ಕೀಪರ್ ಎನಿಸಿರುವ ವೃದ್ಧಿಮಾನ್ ಸಾಹ 2010ರಲ್ಲಿ ಟೀಮ್ ಇಂಡಿಯಾಗೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಪದಾರ್ಪಣೆಯನ್ನು ಮಾಡಿದ್ದರು. ವಿಚಿತ್ರವೆಂದರೆ ಈ ಒಂದೇ ಸಂದರ್ಭದಲ್ಲಿ ಧೊನಿ ಹಾಗೂ ವೃದ್ಧಿಮಾನ್ ಸಾಹ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಮತ್ಯಾವತ್ತೂ ಇಬ್ಬರು ಜೊತೆಯಾಗಿ ಆಡುವ ಬಳಗದಲ್ಲಿ ಕಣಕ್ಕಿಳಿಯಲಿಲ್ಲ.


Click it and Unblock the Notifications
