
ಅದೊಂದು ರಣತಂತ್ರವಾಗಿತ್ತು
ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿಚಾರವಾಗಿ ಅದೊಂದು ರಣತಂತ್ರವಾಗಿತ್ತು ಎಂದು ವಿವರಿಸಿದ್ದಾರೆ. "ಅಂತಿಮ ಪಂದ್ಯದಲ್ಲಿ ಒಂದು ಹೆಚ್ಚುವರಿ ಬೌಲರ್ ಜೊತೆಯಲ್ಲಿ ಕಣಕ್ಕಿಳಿಯುವುದು ನಮ್ಮ ಯೋಜನೆಯಾಗಿತ್ತು. ಹಾಗಾಗಿ ದುರದೃಷ್ಟವಶಾತ್ ಕೆಎಲ್ ರಾಹುಲ್ ಹೊರಗುಳಿಯಬೇಕಾಯಿತು" ಎಂದು ರೋಹಿತ್ ಶರ್ಮಾ ಹೇಳಿದರು.

ಕನ್ನಡಿಗನನ್ನು ಸಮರ್ಥನೆ ಮಾಡಿದ ರೋಹಿತ್
ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಸರಣಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ರಾಹುಲ್, 1, 0, 0, 14 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಈ ಕಾರಣಕ್ಕಾಗಿ ರಾಹುಲ್ ಅವರನ್ನು ಹೊರಗಿಟ್ಟಿಲ್ಲ ಎಂದು ವಿವರಿಸಿದರು ರೋಹಿತ್ ಶರ್ಮಾ.

ರಾಹುಲ್ ನಮ್ಮ ತಂಡದ ಪ್ರಮುಖ ಆಟಗಾರ
"ಸೀಮಿತ ಓವರ್ಗಳಲ್ಲಿ ರಾಹುಲ್ ನಮ್ಮ ತಂಡದ ಪ್ರಮುಖ ಆಟಗಾರ, ವಿಶೇಷವಾಗಿ ಟಿ20 ಮಾದರಿಯಲ್ಲಿ. ಪ್ರಸಕ್ತ ಫಾರ್ಮ್ನಲ್ಲಿ ಅತ್ಯುತ್ತಮ ಆಡುವ ಬಳಗದಲ್ಲಿ ಕಣಕ್ಕಿಳಿಯಲು ಮ್ಯಾನೇಜ್ಮೆಂಟ್ ನಿರ್ಧರಿಸಿತು. ಆದರೆ ಇದು ಕೇವಲ ಒಂದು ಪಂದ್ಯಕ್ಕೆ ಮಾತ್ರ, ಇದರಿಂದಾಗಿ ಕೆಎಲ್ ರಾಹುಲ್ ಅವರನ್ನು ಪರಿಗಣಿಸಲಾಗುವುದಿಲ್ಲ ಎಂಬ ಸಂಕೇತವನ್ನು ರವಾನಿಸುವುದಿಲ್ಲ" ಎಂದಿದ್ದಾರೆ ರೋಹಿತ್ ಶರ್ಮಾ.

ರಾಹುಲ್ ಸಾಮರ್ಥ್ಯ ಅರಿವಿದೆ
"ವಿಶ್ವಕಪ್ನ ಸಮೀಪಕ್ಕೆ ತಲುಪುತ್ತಿದ್ದಂತೆಯೇ ವಿಷಯಗಳು ಬದಲಾವಣೆಯಾಗಬಹುದು. ಆರಂಭಿಕನಾಗಿ ರಾಹುಲ್ ಅವರ ಸಾಮರ್ಥ್ಯ ಹಾಗೂ ಕೊಡುಗೆಯನ್ನು ಮತ್ತು ನಮಗಾಗಿ ಅವರು ಏನು ಮಾಡಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾನು ಏನನ್ನೂ ತಳ್ಳಿಹಾಕಲ್ಲ, ಜೊತೆಗೆ ವಿಶ್ವಕಪ್ಗೆ ಇದೇ ನಮ್ಮ ಆದ್ಯತೆಯ ತಂಡವಾಗಿದೆ ಎಂಬುದನ್ನು ಹೇಳುವುದಿಲ್ಲ" ಎಂದಿದ್ದಾರೆ ರೋಹಿತ್ ಶರ್ಮಾ


Click it and Unblock the Notifications
