ಐಸಿಸಿ ಅಂಪೈರ್ಸ್ ಪ್ಯಾನೆಲ್ಗೆ ಭಾರತೀಯ ಅಂಪೈರ್ ಸೇರ್ಪಡೆ

ನವದೆಹಲಿ, ಆಗಸ್ಟ್ 11: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನ ಅಂತಾರಾಷ್ಟ್ರೀಯ ಅಂಪೈರ್ಗಳ ಸಮಿತಿಗೆ ಭಾರತೀಯ ಅಂಪೈರ್ ಕೆಎನ್ ಅನಂತಪದ್ಮನಾಭನ್ ಸೇರ್ಪಡೆಗೊಂಡಿದ್ದಾರೆ. ಮತ್ತೊಬ್ಬ ಭಾರತೀಯ ಅಂಪೈರ್ ನಿತಿನ್ ಮೆನನ್ ಎಲೈಟ್ ಪ್ಯಾನೆಲ್ಗೆ ಬಡ್ತಿ ಪಡೆದ ನಂತರ ಅನಂತಪದ್ಮನಾಭನ್ ಐಸಿಸಿ ಪ್ಯಾನೆಲ್ಗೆ ಆರಿಸಲ್ಪಟ್ಟಿದ್ದಾರೆ.
ಕೇರಳದ ಮಾಜಿ ಸ್ಪಿನ್ನರ್ ಆಗಿರುವ ಕೆಎನ್ ಅನಂತಪದ್ಮನಾಭನ್ ಅವರು ಅಂತಾರಾಷ್ಟ್ರೀಯ ಪ್ಯಾನೆಲ್ನಲ್ಲರುವ ಇನ್ನಿತರ ಭಾರತೀಯರಾದ ಸಿ ಸಂಶುದ್ದೀನ್, ಅನಿಲ್ ಚೌಧರಿ, ವೀರೇಂದರ್ ಶರ್ಮಾ ಅವರ ತಂಡವನ್ನು ಸೇರಿಕೊಂಡಿದ್ದಾರೆ.
50ರ ಹರೆಯದ ಅನಂತಪದ್ಮನಾಧನ್ ಇನ್ಮುಂದೆ ಜೂನಿಯರ್ ವಿಶ್ವಕಪ್ ಹೊರತಾಗಿ ಏಕದಿನ ಮತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಅಂಪೈರಿಂಗ್ ಮಾಡಲು ಅರ್ಹರಾಗಿದ್ದಾರೆ. ಈ ಮೊದಲು ಅನಂತಪದ್ಮನಾಭನ್ ಅವರು ಐಪಿಎಲ್ ಸೇರಿ ಪ್ರಮುಖ ದೇಸಿ ಕ್ರಿಕೆಟ್ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದರು.
ಹಿಂದಿನ ರಣಜಿ ಟ್ರೋಫಿ ಫೈನಲ್ ವೇಳೆ ಅಂಪೈರಿಂಗ್ ಮಾಡುತ್ತಿದ್ದ ಸಂಶುದ್ದೀನ್ ಗಾಯಗೊಂಡಿದ್ದರು. ಬೆಂಗಾಲ್ ಮತ್ತು ಸೌರಾಷ್ಟ್ರ ನಡುವಿನ ಈ ಫೈನಲ್ ಪಂದ್ಯದಲ್ಲಿ ಅನಂತಪದ್ಮನಾಭನ್ ಅಂಪೈರ್ ಜವಾಬ್ದಾರಿ ನಿರ್ವಹಿಸಿದ್ದರು. 'ಈ ಜವಾಬ್ದಾರಿಯನ್ನು ನೀಡುವ ಮೂಲಕ ಬಿಸಿಸಿಐ ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನಾನು ನಿಜವಾಗಿಯೂ ಸಂತೋಷ ಮತ್ತು ಕೃತಜ್ಞನಾಗಿದ್ದೇನೆ,' ಎಂದು ಅನಂತ್ ಖುಷಿ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications