ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 2024ರ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿಯು ಒಟ್ಟು ಆರು ಸ್ಲಾಟ್ಗಳನ್ನು ಮೂರು ಸಾಗರೋತ್ತರ ಸ್ಲಾಟ್ಗಳೊಂದಿಗೆ ಭರ್ತಿ ಮಾಡಲು ಎದುರು ನೋಡುತ್ತಿದೆ.
ಆರ್ಸಿಬಿ ಫ್ರಾಂಚೈಸಿಯು 19 ಆಟಗಾರರನ್ನು ಉಳಿಸಿಕೊಂಡಿದೆ ಮತ್ತು ತಮ್ಮ ತಂಡವನ್ನು ಪೂರ್ಣಗೊಳಿಸಲು 23.35 ಕೋಟಿ ರೂಪಾಯಿಗಳಷ್ಟು ಪರ್ಸ್ ಹೊಂದಿದೆ.

ವನಿಂದು ಹಸರಂಗ, ಜೋಶ್ ಹ್ಯಾಜಲ್ವೋಡ್ ಮತ್ತು ಭಾರತದ ವೇಗಿ ಹರ್ಷಲ್ ಪಟೇಲ್ ಸೇರಿದಂತೆ 11 ಆಟಗಾರರನ್ನು ತಂಡವು ರಿಟೇನ್ ಸಮಯದಲ್ಲಿ ಬಿಡುಗಡೆ ಮಾಡಿತು. ಮತ್ತೊಮ್ಮೆ ಐಪಿಎಲ್ ಹರಾಜಿಗೆ ಮುನ್ನ, ಆರ್ಸಿಬಿ ತಮ್ಮ ಬೌಲಿಂಗ್ ಸಂಯೋಜನೆ ಹೊಂದಿಸಲು ಹೆಣಗಾಡುತ್ತಿದೆ.
ಇದೇ ವೇಳೆ ಆರ್ಸಿಬಿ ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಅವರು ತಂಡದ ಅಧಿಕೃತ ಯೂಟ್ಯೂಬ್ ಚಾನೆಲ್ನ ಇತ್ತೀಚಿನ ವಿಡಿಯೋದಲ್ಲಿ ತಮ್ಮ ಐದು ಆಟಗಾರರ ಅಗ್ರ ಕ್ರಮಾಂಕವನ್ನು ಬಹಿರಂಗಪಡಿಸುವುದರೊಂದಿಗೆ ಬ್ಯಾಟಿಂಗ್ ವಿಭಾಗವನ್ನು ಉತ್ತಮವಾಗಿ ವಿಂಗಡಿಸಲಾಗಿದೆ.
ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡಿರುವ ಆಂಡಿ ಫ್ಲವರ್, ಆರ್ಸಿಬಿಯ ಅಗ್ರ ನಾಲ್ವರು ಬ್ಯಾಟರ್ಗಳನ್ನು ಖಚಿತಪಡಿಸಿದ್ದಾರೆ. ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯಲಿದ್ದಾರೆ. ರಜತ್ ಪಾಟಿದಾರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿಯಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಿಂದ ಆರ್ಸಿಬಿ ವ್ಯಾಪಾರ ಮಾಡಿಕೊಂಡ ಕ್ಯಾಮೆರಾನ್ ಗ್ರೀನ್ ಅಗ್ರ ಐದರಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ ಎಂದು ಆಂಡಿ ಫ್ಲವರ್ ಹೇಳಿದರು.
ಹರ್ಷಲ್ ಪಟೇಲ್ ಬಿಡುಗಡೆಯಾದ ಬಳಿಕ ಆರ್ಸಿಬಿ ತಂಡದಲ್ಲಿ ಉಳಿದಿರುವ ಭಾರತದ ಏಕೈಕ ವೇಗಿ ಮೊಹಮ್ಮದ್ ಸಿರಾಜ್. ಎಡಗೈ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿ ಅವರನ್ನು ಸಾಗರೋತ್ತರವಾಗಿ ಉಳಿಸಿಕೊಳ್ಳಲಾಗಿದ್ದು, ಸಹ ಆಟಗಾರ ಡೇವಿಡ್ ವಿಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.
ಇದೇ ವೇಳೆ, ಆರ್ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಫ್ರಾಂಚೈಸಿಯ ಹರಾಜು ತಂತ್ರವನ್ನು ಬಹಿರಂಗಪಡಿಸಿದರು. ಪಂದ್ಯಾವಳಿಯಲ್ಲಿ ಸ್ಪರ್ಧಾತ್ಮಕವಾಗಿರಲು ತಂಡದಲ್ಲಿ ಉತ್ತಮ ಬೌಲರ್ಗಳ ಅಗತ್ಯತೆಯ ಕುರಿತು ಅವರು ಮಾತನಾಡಿದರು.
"ಮೊಹಮ್ಮದ್ ಸಿರಾಜ್ ನಾವು ರಿಟೇನ್ ಮಾಡಿದದರ ಪ್ರಮುಖ ಭಾಗವಾಗಿದೆ. ಆದ್ದರಿಂದ ಸಾಗರೋತ್ತರ ಬೌಲಿಂಗ್ ಆಯ್ಕೆಗಳು ಸೇರಿದಂತೆ ಇನ್ನೂ ಕೆಲವು ಬೌಲಿಂಗ್ ಆಯ್ಕೆಗಳೊಂದಿಗೆ ಮೊಹಮ್ಮದ್ ಸಿರಾಜ್ ಅವರನ್ನು ಬೆಂಬಲಿಸುವುದು ನಮಗೆ ಆದ್ಯತೆಯಾಗಿದೆ," ಎಂದು ಮೊ ಬೊಬಾಟ್ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
"ನಾವು ಸ್ಥಳೀಯ ಸ್ಪಿನ್ನರ್ಗಳನ್ನು ಹೊಂದಿದ್ದೇವೆ, ಅದು ಸಾಕಷ್ಟು ಪ್ರಬಲವಾಗಿದೆ ಎಂದು ನಾನು ಭಾವಿಸುತ್ತೇನೆ. ಅವರಲ್ಲಿ ಕೆಲವರಿಗೆ ಕಳೆದ ವರ್ಷ ಅಥವಾ ಎರಡು ವರ್ಷಗಳಲ್ಲಿ ಕೆಲವು ಅವಕಾಶಗಳು ಸಿಕ್ಕಿವೆ," ಎಂದರು.
ಆರ್ಸಿಬಿ ರಿಟೇನ್ ವಿಂಡೋದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಕ್ಯಾಮೆರಾನ್ ಗ್ರೀನ್ ಅವರನ್ನು ವ್ಯಾಪಾರ ಮಾಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 17.5 ಕೋಟಿ ರೂಪಾಯಿಗೆ ವ್ಯಾಪಾರ ಮಾಡಿಕೊಂಡಿತು.
ಇದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ ಮಾನ್ಯತೆ ಪಡೆದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿತು.
ಜೋಶ್ ಹೇಝಲ್ವುಡ್ ಮತ್ತು ವನಿಂದು ಹಸರಂಗ ಅವರಂತಹ ಉತ್ತಮ ಗುಣಮಟ್ಟದ ಸಾಗರೋತ್ತರ ಬೌಲರ್ಗಳನ್ನು ಬಿಡುಗಡೆ ಮಾಡಿರುವುದನ್ನು ಅರ್ಥಮಾಡಿಕೊಳ್ಳಲು ಕಠಿಣವಾಗಿತ್ತು.
ಆರ್ಸಿಬಿ ಕೆಲವು ವರ್ಷಗಳಲ್ಲಿ ಆಟಗಾರರನ್ನು ದೊಡ್ಡ ಬೆಲೆಗೆ ಖರೀದಿಸಿದೆ ಮತ್ತು ಒಂದೆರಡು ಋತುಗಳಲ್ಲಿ ಅವರನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ವನಿಂದು ಹಸರಂಗ ಗಾಯಕ್ಕೆ ತುತ್ತಾಗಿರುವುದು ಆರ್ಸಿಬಿ ಅವರನ್ನು ಬಿಡುಗಡೆ ಮಾಡಲು ಮತ್ತು ಅನುಭವಿ ವಿದೇಶಿ ಸ್ಪಿನ್ನರ್ಗಾಗಿ ಹುಡುಕುವಂತೆ ಪ್ರೇರೇಪಿಸಿದೆ.
ಮೂವರು ಅಂತಾರಾಷ್ಟ್ರೀಯ ಆಟಗಾರರಾದ ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ ಮತ್ತು ರೆಹಾನ್ ಅಹ್ಮದ್ ಹೊರಬಿದ್ದ ನಂತರ, ಆಟಗಾರರ ಅಂತಿಮ ಪಟ್ಟಿ 333ರಿಂದ 330ಕ್ಕೆ ಇಳಿದಿತ್ತು.
ಕೌಶಲ್ ತಾಂಬೆ (ಮಹಾರಾಷ್ಟ್ರ) ಮತ್ತು ಸಾಹಿಲ್ ಧಿವಾನ್ (ರಾಜಸ್ಥಾನ) ಅವರನ್ನು ಎರಡು ದೇಶೀಯ ಭಾರತೀಯ ಆಟಗಾರರನ್ನು ರೋಸ್ಟರ್ಗೆ ಸೇರಿಸಲಾಗಿದೆ, ಹೀಗಾಗಿ ಒಟ್ಟು ಆಟಗಾರರ ಸಂಖ್ಯೆ 332 ಆಗಿದೆ.