
ಅಗೌರವದ ಪರಿಣಾಮವೇ ರಾಜಿನಾಮೆ
ಆಟಗಾರರ ವಿರುದ್ಧ ಗುಡುಗಿರುವ ಅವರು, ''ಟೀಂ ಇಂಡಿಯಾ ಆಟಗಾರರು ತರಬೇತುದಾರರಿಗೆ ಕೊಡಬೇಕಾದ ಗೌರವ ಕೊಡುತ್ತಿಲ್ಲ. ತಾವು ಹೇಳಿದಂತೆ ಕೋಚ್ ಕೇಳಬೇಕೆನ್ನುವ ಮನೋಭಾವ ಆಟಗಾರರಲ್ಲಿ ಹೆಚ್ಚಾಗಿದೆ. ಇದರ ಪರಿಣಾಮವೇ, ಕುಂಬ್ಳೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವಂತಾಗಿದೆ'' ಎಂದು ಅವರು ಟೀಕಿಸಿದ್ದಾರೆ.

ನಿಷ್ಠುರ ವ್ಯಕ್ತಿಗಳು ಬೇಕಿಲ್ಲ ಎಂದ ಸನ್ನಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ವಿರುದ್ಧ ಪರೋಕ್ಷವಾಗಿ ಟೀಕಾಸ್ತ್ರ ಪ್ರಯೋಗಿಸಿರುವ ಅವರು, ''ಆಟಗಾರರು ಹೇಳಿದ್ದಕ್ಕೆಲ್ಲಾ ಹೂಂ ಎಂದು ತಲೆಯಲ್ಲಾಡಿಸುವ ಕೋಚ್ ನಿಮಗೆ ಬೇಕೆನಿಸುತ್ತದೆ. ನಿಷ್ಠುರವಾಗಿ, ಕಾಯಕವೇ ಕೈಲಾಸ ಎನ್ನುವಂಥ ವ್ಯಕ್ತಿಗಳು ನಿಮಗೆ ಬೇಕಿಲ್ಲ ಅಲ್ಲವೇ'' ಎಂದು ಅವರು ಕಿಡಿಕಾರಿದ್ದಾರೆ.
ಕುಂಬ್ಳೆ ನಿರ್ಗಮನ, ಯಾರಾಗಲಿದ್ದಾರೆ ಹೊಸ ಕೋಚ್?

ನಿಷ್ಠುರವಾದರೆ ಕೋಚ್ ಹುದ್ದೆಗೆ ಸಂಚಕಾರ
''ಟೀಂ ಇಂಡಿಯಾದಲ್ಲಿ ಪ್ರಾಕ್ಟೀಸ್ ಗೆ ಗೈರು ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವತ್ತು ನಮಗೆ ಮೈ ಹುಷಾರಿಲ್ಲ ಎಂದು ಹೇಳಿ ತರಬೇತಿಗೆ ಚಕ್ಕರ್ ಹಾಕಿ ಶಾಪಿಂಗ್ ಗೆ ಹೋಗುವವರ ಸಂಖ್ಯೆ ಗಣನೀಯವಾಗಿದೆ. ಇಂಥವರ ಬಗ್ಗೆ ಕೊಂಚ ನಿಷ್ಠುರವಾದರೆ ಕೋಚ್ ಗೆ ತಂಡದಲ್ಲಿ ಉಳಿಗಾಲವಿರದಂಥ ಪರಿಸ್ಥಿತಿ ನಿರ್ಮಾಣವಾಗಿದೆ'' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ತಂಡಕ್ಕೆ ಇಂಥವರಿಂದ ಮಾರಕ
ಇಂಥ ಸೋಗಲಾಡಿ ಹಾಗೂ ಹಠಮಾರಿ ಆಟಗಾರರನ್ನು ತಂಡದಿಂದಲೇ ಕಿತ್ತುಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇಂಥ ಆಟಗಾರರಿದ್ದರೆ ತಂಡಕ್ಕೆ ಅದು ಮಾರಕ ಎಂದು ಎಚ್ಚರಿಸಿದ್ದಾರೆ.
ಕುಂಬ್ಳೆ ರಾಜೀನಾಮೆ ಪತ್ರದಲ್ಲಿ ಅಸಲಿ ರಹಸ್ಯ ಬಹಿರಂಗ

ತಂಡದ ಸಾಧನೆ ಪರಾಮರ್ಶಿಸಿ
ಇದಲ್ಲದೆ ಕುಂಬ್ಳೆಯವರನ್ನು ಕೊಂಡಾಡಿದ ಸನ್ನಿ, ಕುಂಬ್ಳೆಯವರ ಕಾರ್ಯವೈಖರಿ ಬಗ್ಗೆ ಟೀಕಿಸುವ ಮುನ್ನ ಅವರ ಸಾಧನೆಯನ್ನು ನೋಡಬೇಕು. ಅಲ್ಲದೆ, ಅವರು ಕೋಚ್ ಆದ ನಂತರ ಒಂದು ವರ್ಷದ ಅವಧಿಯಲ್ಲಿ ತಂಡದ ಸಾಧನೆಗಳನ್ನೂ ಪರಾಮರ್ಶಿಸಬೇಕು. ಅಂಥ ಆಟಗಾರನ ಸೇವೆಯನ್ನು ಕಳೆದುಕೊಂಡಿದ್ದು ನಿಜಕ್ಕೂ ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.


Click it and Unblock the Notifications











