ಲಂಡನ್, ಜೂನ್ 11: ಬಾಂಗ್ಲಾದೇಶ ವಿರುದ್ಧ ಮಂಗಳವಾರದ ಪಂದ್ಯದ ಬಳಿಕ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ್ ತವರಿಗೆ ಹಿಂದಿರುಗಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಟ್ವಿಟರ್ ಮೂಲಕ ಈ ಅಚ್ಚರಿಯ ಸುದ್ದಿಯನ್ನು ಹೊರಹಾಕಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಲಸಿತ್ ಮಾಲಿಂಗ ಅವರ ಪತ್ನಿಯ ತಾಯಿ ಅವರ ಸಾವಿನ ಕಾರಣ ತಾಯ್ನಾಡಿಗೆ ತುರ್ತಾಗಿ ಹಿಂದಿರುಗುತ್ತಿದ್ದು, ಜೂನ್ 15ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದ ಹೊತ್ತಿಗೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ಸಿ) ಹೇಳಿದೆ.
ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ಗೆ ಬಿಸಿಸಿಐನಿಂದಲೇ ಮೋಸ!
"ಬಾಂಗ್ಲಾದೇಶ ವಿರುದ್ಧದ ಪ
ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ಗೆ ಬಿಸಿಸಿಐನಿಂದಲೇ ಮೋಸ!
"ಶ್ರೀಮತಿ ಕಾಂತಿ ಪೆರೆರಾ ಅವರ ಅಂತ್ಯಕ್ರಿಯೆ ಕೊಲಂಬೊದ ಬಾರ್ನಿ ರೈಮಂಡ್ ಫ್ಯೂನರಲ್ ಹೋಮ್ನಲ್ಲಿ ಜೂನ್ 13ರಂದು, ಗುರುವಾರ ನಡೆಯಲಿದೆ,'' ಎಂದು ಎಸ್ಎಸಲ್ಸಿ ಟ್ವೀಟ್ನಲ್ಲಿ ವಿವರಿಸಿದೆ.
ಒಡಿಐ ಕ್ರಿಕೆಟ್ನಲ್ಲಿ ಯುವರಾಜ್ಗೆ ಕೀರ್ತಿ ತಂದ 5 ಪಂದ್ಯಗಳಿವು!
ಸದ್ಯ ಶ್ರೀಲಂಕಾ ಆಡಿರುವ ಮೂರು ಪಂದ್ಯಗಳಲ್ಲಿ ಮಾಲಿಂಗ ಮೂರು ವಿಕೆಟ್ ಪಡೆದಿದ್ದಾರೆ. ಒಂದು ಸೋಲು ಮತ್ತೊಂದು ಪಂದ್ಯದಲ್ಲಿ ಮಳೆ ಕಾರಣ ಅಂಕ ಹಂಚಿಕೊಂಡಿರುವ ಶ್ರೀಲಂಕಾ, ಅಫಘಾನಿಸ್ತಾನ ವಿರುದ್ಧಆಲ್ಲಪ ಮೊತ್ತಕ್ಕೆ ಆಲ್ಔಟ್ ಆದರೂ ಸೋಲಿನ ದವಡೆಯಿಂದ ಪಾರಾಗಿ ಜಯ ದಾಖಲಿಸಿತ್ತು. ಇದಕ್ಕೂ ಮುನ್ನ ನ್ಯೂಜಿಲೆಂಡ್ ಎದುರು 10 ವಿಕೆಟ್ಗಳ ಹೀನಾಯ ಸೋಲನುಭವಿಸಿತ್ತು.
ದಾದಾ, ತೆಂಡೂಲ್ಕರ್ ಸಾಲಿಗೆ ಸೇರಿದ ಶತಕ ವೀರ ಶಿಖರ್ ಧವನ್!
ಇದೀಗ ಬಾಂಗ್ಲಾದೇಶ ವಿರುದ್ಧದ ಪಂದ್ಯವೂ ಮಳೆಗೆ ಆಹುತಿಯಾಗುವ ಎಲ್ಲಾ ಸಾಧ್ಯತೆಗಳಿದ್ದು, ಮಳೆ ಕಾರಣ ಟಾಸ್ ಕೂಡ ನಡೆದಿಲ್ಲ.