ವಿಫಲತೆ ತಿದ್ದಿಕೊಳ್ಳುವುದು ಆಟಗಾರನಿಗೆ ಬಿಟ್ಟ ವಿಚಾರ
ಓರ್ವ ಕ್ರಿಕೆಟಿಗ ಕಳಪೆ ಪ್ರದರ್ಶನ ನೀಡುವುದರ ಮೂಲಕ ವಿಫಲನಾದರೆ ಅದನ್ನು ಪ್ರಶ್ನಿಸುವ ಮತ್ತು ಟೀಕಿಸುವ ಹಕ್ಕು ನಮಗ್ಯಾರಿಗೂ ಇರುವುದಿಲ್ಲ. ಉತ್ತಮ ಪ್ರದರ್ಶನ ನೀಡುತ್ತಿದ್ದ ಆಟಗಾರ ವಿಫಲನಾದಾಗ ಮತ್ತೆ ಉತ್ತಮ ಪ್ರದರ್ಶನ ನೀಡಿ ಯಶಸ್ಸಿನ ಹಾದಿಗೆ ಮರಳುವುದು ಆತನಿಗೆ ತಿಳಿದಿರುತ್ತದೆ. ಈ ಹಿಂದೆ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದ ಆಟಗಾರನಿಗೆ ಮತ್ತೆ ವಿಫಲತೆಯಿಂದ ಯಶಸ್ಸಿನ ಹಾದಿಗೆ ಮರಳುವುದು ಹೇಗೆ ಎಂಬ ವಿಚಾರ ತಿಳಿದಿರುತ್ತದೆ ಎಂದು ವಿರಾಟ್ ಕೊಹ್ಲಿ ಖಾರವಾಗಿ ಪ್ರತಿಕ್ರಿಯಿಸಿದರು. ಹೀಗಾಗಿ ಆಟಗಾರ ತನ್ನ ವಿಫಲತೆಯನ್ನು ತಿದ್ದಿಕೊಳ್ಳುವುದು ಆತನಿಗೆ ಬಿಟ್ಟಿರುವ ವಿಚಾರ ಅದಕ್ಕೆ ಬೇರೆಯವರು ಮೂಗು ತೂರಿಸಬಾರದು ಎಂಬರ್ಥದಲ್ಲಿ ವಿರಾಟ್ ಕೊಹ್ಲಿ ತಮ್ಮದೇ ಆದ ಶೈಲಿಯಲ್ಲಿ ಉತ್ತರ ನೀಡಿದರು.
ಪೂಜಾರ ಈ ರೀತಿಯ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ!
ಇನ್ನೂ ಮುಂದುವರಿದು ಮಾತನಾಡಿರುವ ವಿರಾಟ್ ಕೊಹ್ಲಿ ಚೇತೇಶ್ವರ್ ಪೂಜಾರ ಈ ರೀತಿಯ ಟೀಕೆಗಳಿಗೆಲ್ಲಾ ತಲೆಯನ್ನು ಕೂಡಾ ಕೆಡಿಸಿಕೊಳ್ಳುವುದಿಲ್ಲ ಎಂದು ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಈ ರೀತಿ ಹೇಳಿಕೆ ನೀಡುವುದರ ಮೂಲಕ ಚೇತೇಶ್ವರ್ ಪೂಜಾರ ಕುರಿತು ಟೀಕೆಗಳನ್ನು ವ್ಯಕ್ತಪಡಿಸುತ್ತಿರುವವರ ಕಾಲೆಳೆದಿದ್ದಾರೆ. ಕೇವಲ ಚೇತೇಶ್ವರ್ ಪೂಜಾರ ಮಾತ್ರವಲ್ಲ ತಂಡದ ಇನ್ನೂ ಹಲವಾರು ಆಟಗಾರರು ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಹ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.
ಮೂರನೆಯವರ ಮಾತಿಗೆ ಬೆಲೆ ಇಲ್ಲ!
ಹೊರಗಿನ ಕೆಲ ಜನ ತಾವು ಏನು ಹೇಳಬೇಕೆಂದಿದ್ದಾರೋ ಅದನ್ನು ಹೇಳಿ ಮುಗಿಸುತ್ತಾರೆ ಆದರೆ ಕೊನೆಗೆ ಆ ಟೀಕೆಗಳು ಕೇವಲ ಪದಗಳಾಗಿ ಮಾತ್ರ ಉಳಿಯುತ್ತವೆ ಹೊರತು ಆಟಗಾರರು ಅದಕ್ಕೆ ಪ್ರಾಶಸ್ತ್ಯ ನೀಡುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಆ ಟೀಕೆಗಳು ಯಾವುದೇ ರೀತಿಯ ಬೆಲೆಯನ್ನು ಹೊಂದಿಲ್ಲ ಎಂದು ನಿಮಗೆ ಅನಿಸಿದರೆ ಆ ಟೀಕೆಗಳನ್ನು ಬದಿಗೆ ತಳ್ಳಿ ನಿಮ್ಮ ದಾರಿಯಲ್ಲಿ ನೀವು ಸಾಗಬಹುದು ಎಂದು ವಿರಾಟ್ ಕೊಹ್ಲಿ ಮೂರನೆಯವರ ಮಾತಿಗೆ ಬೆಲೆ ಕೊಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.