ಬೆಂಗಳೂರು, ಜುಲೈ, 06: ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿದ್ದ ಲೆಗ್ ಸ್ಪಿನ್ನರ್ ಕರಣ್ ಶರ್ಮ ಅವರ ಕನಸು ಭಗ್ನವಾಗಿದೆ. ಗಾಯಾಳುವಾಗಿರುವ ಕರಣ್ ಅವರು ಜಿಂಬಾಬ್ವೆ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ ಘೋಷಿಸಿದೆ.
ಜಿಂಬಾಬ್ವೆ ಪ್ರವಾಸಕ್ಕಾಗಿ 15 ಮಂದಿ ಆಟಗಾರರ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಕಳೆದ ವಾರ ಪ್ರಕಟಿಸಿತ್ತು. ಅಜಿಂಕ್ಯ ರಹಾನೆ ನಾಯಕತ್ವದ ತಂಡದಲ್ಲಿದ್ದ ಕರಣ್ ಶರ್ಮ ಅವರು ಮಧ್ಯದ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರವಾಸಕ್ಕೆ ತೆರಳುವ ತಂಡವನ್ನು ಸೇರುತ್ತಿಲ್ಲ. ಕರಣ್ ಬದಲಿಗೆ ಬೇರೆ ಯಾವ ಆಟಗಾರನನ್ನು ಕಳಿಸುತ್ತಿಲ್ಲ ಎಂದು ಬಿಸಿಸಿಐ ದೃಢಪಡಿಸಿದೆ.