For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ವಿಜಯೋತ್ಸವ ಆಚರಿಸಲು ಟೀಮ್ ಇಂಡಿಯಾ ಆಹ್ವಾನಿಸಿದ ಮಾಲ್ಡೀವ್ಸ್

ಇತ್ತೀಚೆಗಷ್ಟೇ ಕಿರೀಟಧಾರಿಯಾದ 2024ರ ಟಿ20 ವಿಶ್ವ ಚಾಂಪಿಯನ್ ಭಾರತ ಕ್ರಿಕೆಟ್ ತಂಡವು ತನ್ನ ವಿಜಯೋತ್ಸವವನ್ನು ಆಚರಿಸಲು ಮಾಲ್ಡೀವ್ಸ್‌ ದೇಶದ ಪ್ರವಾಸೋದ್ಯಮ ಸಂಘ ಮತ್ತು ಅದರ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕ ನಿಗಮವು ಆಹ್ವಾನಿಸಿದೆ.

ಶನಿವಾರ, ಜೂನ್ 29ರಂದು ಬಾರ್ಬಡೋಸ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಸೋಲಿಸಿದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯಿತು.

Maldives Invited Team India to Celebrate T20 World Cup 2024 Victory

"ಮಾಲ್ಡೀವ್ಸ್ ಅಸೋಸಿಯೇಷನ್ ​​ಆಫ್ ಟೂರಿಸಂ ಇಂಡಸ್ಟ್ರಿ (MATI) ಸಹಯೋಗದೊಂದಿಗೆ ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್ (MMPRC/ Visit Maldives) ಜಂಟಿಯಾಗಿ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ವಿಶೇಷ ಮತ್ತು ಮುಕ್ತ ಆಹ್ವಾನವನ್ನು ನೀಡಿದೆ," ಎಂದು ಎರಡು ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಎಂಎಂಪಿಆರ್‌ಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಇಬ್ರಾಹಿಂ ಶಿಯುರಿ ಮತ್ತು ಮ್ಯಾಟಿಯ ಪ್ರಧಾನ ಕಾರ್ಯದರ್ಶಿ ಅಹ್ಮದ್ ನಜೀರ್ ಅವರು ಕಳೆದ ಗುರುವಾರ ಬಾರ್ಬಡೋಸ್‌ನಿಂದ ಭಾರತಕ್ಕೆ ಮರಳಿದ ತಂಡಕ್ಕೆ ಆತಿಥ್ಯ ವಹಿಸಲು ಎದುರು ನೋಡುತ್ತಿರುವುದಾಗಿ ಹೇಳಿದರು.

Maldives Invited Team India to Celebrate T20 World Cup 2024 Victory

ಭಾರತ ಕ್ರಿಕೆಟ್ ತಂಡವನ್ನು ನವದೆಹಲಿ ಮತ್ತು ಮುಂಬೈ ಎರಡರಲ್ಲೂ ಹರ್ಷೋದ್ಗಾರದ ಮೂಲಕ ಅಭಿಮಾನಿಗಳು ಸ್ವಾಗತಿಸಿದರು. ಮುಂಬೈ ನಗರವು ಲಕ್ಷಾಂತರ ಬೆಂಬಲಿಗರನ್ನು ಒಳಗೊಂಡ ವಿಜಯೋತ್ಸವದ ಮೆರವಣಿಗೆಗೆ ಆತಿಥ್ಯ ವಹಿಸಿತು.

"ಭಾರತ ಕ್ರಿಕೆಟ್ ತಂಡಕ್ಕೆ ಆತಿಥ್ಯ ನೀಡಲು ಮತ್ತು ನಿಮ್ಮ ವಾಸ್ತವ್ಯವು ಸ್ಮರಣೀಯ ಕ್ಷಣಗಳು, ವಿಶ್ರಾಂತಿ ಮತ್ತು ಹೇಳಿ ಮಾಡಿಸಿದ ಅನುಭವಗಳಿಂದ ತುಂಬಿರುವುದನ್ನು ಖಚಿತಪಡಿಸಿಕೊಳ್ಳುವುದನ್ನು ನಾವು ಗೌರವಿಸುತ್ತೇವೆ," ಎಂದು ಇಬ್ರಾಹಿಂ ಶಿಯುರಿ ಮತ್ತು ಅಹ್ಮದ್ ನಜೀರ್ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟಿಗರಿಗೆ ಈ ಆಮಂತ್ರಣವು ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಬಲವಾದ ಮತ್ತು ದೀರ್ಘಕಾಲದ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಭಾರತೀಯ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಮತ್ತು ಅವರ ವಿಜಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಮಾಲ್ಡೀವ್ಸ್‌ಗೆ ಇದು ಅಪಾರ ಗೌರವವಾಗಿದೆ," ಎಂದು ಇಬ್ರಾಹಿಂ ಶಿಯುರಿ ಹೇಳಿದರು.

"ಭಾರತೀಯ ಕ್ರಿಕೆಟಿಗರಿಗೆ ಆತಿಥ್ಯ ನೀಡುವ ಅವಕಾಶಕ್ಕಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ. ಅವರ ವಿಜಯೋತ್ಸವದ ಶಾಶ್ವತ ನೆನಪುಗಳನ್ನು ಸೃಷ್ಟಿಸಲು ಪರಿಪೂರ್ಣ ಸೆಟ್ಟಿಂಗ್ ಅನ್ನು ನೀಡುತ್ತೇವೆ," ಎಂದು ಇಬ್ರಾಹಿಂ ಶಿಯುರಿ ತಿಳಿಸಿದರು.

ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಸದ್ಯ ವಿರಾಮದಲ್ಲಿದೆ. ಇನ್ನು ಭಾರತದ ಯುವ ತಂಡವು ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ.

ಆ ಬಳಿಕ ಜುಲೈ 27ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧ ಆರು ಪಂದ್ಯಗಳ ವೈಟ್‌ಬಾಲ್ (ಟಿ20 ಮತ್ತು ಏಕದಿನ) ಸರಣಿಯು ಭಾರತದ ಮುಂದಿನ ಅಂತಾರಾಷ್ಟ್ರೀಯ ನಿಯೋಜನೆಯಾಗಿದೆ. ಈ ಸರಣಿಯು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಒಳಗೊಂಡಿದೆ.

Story first published: Monday, July 8, 2024, 22:04 [IST]
Other articles published on Jul 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+