|
ಇಂಗ್ಲೆಂಡ್ ನೆಲದಲ್ಲೇ ಸತತ ಮೂರು ಶತಕ
ಜೂನ್ ತಿಂಗಳಿನಲ್ಲಿ ಇಂಗ್ಲೆಂಡ್ ನೆಲದಲ್ಲೇ ಸತತ ಮೂರು ಶತಕ ಬಾರಿಸಿ, ಉತ್ತಮ ಲಯದಲ್ಲಿದ್ದರು. ಇನ್ನು 2017-18 ರಣಜಿ ಸೀಸನ್ ನಲ್ಲಿ 1,000ರನ್ ಗಳಿಸಿದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದರು. 13 ಇನ್ನಿಂಗ್ಸ್ ಗಳಲ್ಲಿ 5 ಶತಕ, 2 ಅರ್ಧಶತಕ ಸೇರಿದಂತೆ 1,160ರನ್ (105.45 ರನ್ ಸರಾಸರಿ) ಗಳಿಸಿದ್ದಾರೆ.
|
ಇನ್ನೆಷ್ಟು ರನ್ ಬಾರಿಸಬೇಕು?
ಇಂಡಿಯಾ ಎ ಹಾಗೂ ರಣಜಿ ಸೀಸನ್ ನಲ್ಲಿ ಮಯಾಂಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಇದನ್ನು ಏಕೆ ಆಯ್ಕೆದಾರರು ಪರಿಗಣಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
|
ಮುರಳಿ ವಿಜಯ್ ಬಗ್ಗೆ ಕೂಡಾ ಪ್ರಶ್ನೆ
ಮುರಳಿ ವಿಜಯ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದು ಏಕೆ? ಹಾಗೆ ನೋಡಿದರೆ ಕೆಎಲ್ ರಾಹುಲ್ ಕೂಡಾ ಹೆಚ್ಚು ರನ್ ಗಳಿಸಿಲ್ಲ. ಹನುಮ ವಿಹಾರಿಗಿಂತ ಮಯಾಂಕ್ ಅಗರವಾಲ್ ಏನು ಕಡಿಮೆ ರನ್ ಗಳಿಸಿದ್ದಾರೆ.
|
ಹನುಮ ವಿಹಾರಿಗೆ ಅದೃಷ್ಟದ ಕರೆ
ಹನುಮ ವಿಹಾರಿಗೆ ಅದೃಷ್ಟದ ಕರೆ, ಆದರೆ, ಮಯಾಂಕ್ ಅಗರವಾಲ್ ದುರದೃಷ್ಟದ ಕತೆ ಮುಂದುವರೆದಿದೆ.