
ಟೀಮ್ ಇಂಡಿಯಾ ನಾಯಕನ ಬಗ್ಗೆ ಕೈಫ್ ಪ್ರಶಂಸೆ
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದ ಗೆಲುವಿನ ಬಳಿಕ ಮೊಹಮ್ಮದ್ ಕೈಫ್ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂದಿದ್ದಾರೆ ಕೈಫ್. ರೋಹಿತ್ ಶರ್ಮಾ ತೆಗೆದುಕೊಳ್ಳುವ ನಿರ್ಧಾರಗಳು ಯಶಸ್ಸಾಗುತ್ತಿರುವ ಬಗ್ಗೆ ಈ ಮಾತುಗಳನ್ನು ಆಡಿದ್ದಾರೆ ಮೊಹಮ್ಮದ್ ಕೈಫ್.

ರೋಹಿತ್ ಶರ್ಮಾ ಜೊತೆ ಶೇಕ್ಹ್ಯಾಂಡ್ ಮಾಡುವಾಗ ಎಚ್ಚರ
ರೋಹಿತ್ ಶರ್ಮಾ ಅವರ ಯಶಸ್ಸನ್ನು ಮೊಹಮ್ಮದ್ ಕೈಫ್ ತಮಾಷೆಯಾಗಿ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮೂಲಕ ಕೈಫ್ "ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಕೈಕುಲುಕುವಾಗ ಎಚ್ಚರವಾಗಿಬೇಕಾಗುತ್ತದೆ. ಆತ ಮುಟ್ಟಿದ್ದೆವೂ ಚಿನ್ನವಾಗುತ್ತಿದೆ. ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್, ಆಟಗಾರರ ಬದಲಾವಣೆ, ಬೌಲಿಂಗ್ ಬದಲಾವಣೆ ಹೀಗೆ ಪ್ರತಿ ಹೆಜ್ಜೆಯೂ ಮಾಸ್ಟರ್ಸ್ಟ್ರೋಕ್" ಎಂದು ಮೊಹಮ್ಮದ್ ಕೈಫ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ನಾಯಕತ್ವದಲ್ಲಿ ಸಾಮರ್ಥ್ಯ ಸಾಬೀತುಪಡಿಸಿದ ಶರ್ಮಾ
ಕಳೆದ ನವೆಂಬರ್ ತಿಂಗಳಿನಲ್ಲಿ ವಿಶ್ವಕಪ್ ಟೂರ್ನಿಯ ಬಳಿಕ ರೋಹಿತ್ ಶರ್ಮಾ ಭಾರತ ವೈಟ್ಬಾಲ್ ತಂಡದ ನಾಯಕತ್ವ ವಹಿಸಿಕೊಂಡರು. ಈ ಅವಧಿಯಲ್ಲಿ ರೋಹಿತ್ ಶರ್ಮಾ ತಮ್ಮ ನಾಯಕತ್ವದ ಕೌಶಲ್ಯವನ್ನು ಅದ್ಭುತವಾಗಿ ವ್ಯಕ್ತಪಡಿಸುವ ಮೂಲಕ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ, ಬೌಲರ್ಗಳ ಬದಲಾವಣೆ ಸೇರಿದಂತೆ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳು ಕೂಡ ಯಶಸ್ಸುಂಟುಮಾಡುತ್ತಿದೆ. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವನ್ನು ಕಟ್ಟಿ ಹಾಕುವುದು ಎದುರಾಳಿ ತಂಡಕ್ಕೆ ಅಸಾಧ್ಯವೆನಿಸಿದೆ.

ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆಯ ಸನಿಹ ಭಾರತ
ಇನ್ನು ಶ್ರೀಲಂಕಾ ವಿರುದ್ಧಧ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಭಾರತ ತವರಿನಲ್ಲಿ ಸತತ ಮೂರನೇ ಟಿ20 ಸರಣಿಯನ್ನು ವೈಟ್ವಾಶ್ ಮಾಡಿದಂತಾಗುತ್ತದೆ. ಈ ಸಾಧನೆಯ ಜೊತೆಗೆ ವಿಶ್ವದಾಖಲೆಯ ಅವಕಾಶವೂ ಭಾರತದ ಮುಂದಿದೆ. ತವರಿನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿ ಸದ್ಯ ಭಾರತ ನ್ಯೂಜಿಲೆಂಡ್ ಜೊತೆಗೆ ಸ್ಥಾನವನ್ನು ಹಂಚಿಕೊಂಡಿದೆ. ಅಂತಿಮ ಪಂದ್ಯವನ್ನು ಗೆದ್ದರೆ ಭಾರತ ತವರಿನಲ್ಲಿ 39 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವದಾಖಲೆಯನ್ನು ಬರೆಯಲಿದೆ.


Click it and Unblock the Notifications












