ಭಾನುವಾರ, ನವೆಂಬರ್ 19ರಂದು ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಮಡ ಸೋಲನುಭವಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ಭೇಟಿಯಾಗಿ ಸಂತೈಸಿದ್ದರು.
ನಂತರ, ಇದು ರಾಜಕೀಯ ತಿರುವು ಪಡೆದುಕೊಂಡಿತು ಮತ್ತು ಪ್ರಧಾನಿ ನರೇಂದ್ರ ಮೋದಿ ಫೈನಲ್ ಪಂದ್ಯ ವೀಕ್ಷಣೆಗೆ ಹೋಗಿದ್ದಕ್ಕೆ ಭಾರತ ತಂಡ ಸೋತಿತು, ಅವರು ಅಪಶಕುನ ಎಂದು ವಿಪಕ್ಷಗಳು ಟೀಕಿಸಿದವು.

ಇದೀಗ ಸ್ವತಃ ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಸೇರಿದಂತೆ ಮಾಜಿ ವೇಗದ ಬೌಲರ್ ಹಾಗೂ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವನ್ನು ಶ್ಲಾಘಿಸಿ, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ, ಭಾರತ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಕುರಿತು, ಭಾರತೀಯ ವೇಗಿ ಮೊಹಮ್ಮದ್ ಶಮಿ ಈ ರೀತಿಯ ನಡವಳಿಕೆಗಳು ಆಟಗಾರರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಕುಗ್ಗಿದ್ದ ತಮಗೆ ಮುಖ್ಯವಾಗಿದೆ ಎಂದು ಹೇಳಿದರು.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ನ ಫೈನಲ್ನಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್ಗಳಿಂದ ಸೋಲಿಸುವ ಮೂಲಕ, ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಮತ್ತೊಂದು ಹೃದಯ ವಿದ್ರಾವಕವಾಯಿತು. ಆಸ್ಟ್ರೇಲಿಯಾ ದಾಖಲೆಯ ತನ್ನ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು.
"ಪ್ರಧಾನಿ ನರೇಂದ್ರ ಮೋದಿ ಭಾರತ ತಂಡದ ಆಟಗಾರರನ್ನು ಭೇಟಿಯಾಗಿರುವುದು, ಇಂತಹ ಸನ್ನೆಗಳು ಪ್ರಮುಖವಾಗಿವೆ. ಫೈನಲ್ ನಂತರ ಪ್ರಧಾನಿ ನಿಮ್ಮನ್ನು ಪ್ರೋತ್ಸಾಹಿಸಿದಾಗ, ಅದು ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಇದು ನಿಜವಾಗಿಯೂ ವಿಭಿನ್ನವಾಗಿರುತ್ತದೆ, ಏಕೆಂದರೆ ನಿಮ್ಮ ನೈತಿಕತೆ ಈಗಾಗಲೇ ಕುಸಿದಿರುತ್ತದೆ," ಎಂದು ಮೊಹಮ್ಮದ್ ಶಮಿ ಅಮ್ರೋಹಾದಲ್ಲಿ ಮಾಧ್ಯಮಗಳಿಗೆ ಹೇಳಿದರು.
ಇನ್ನು ಪ್ರಧಾನಿ ಮೋದಿಯವರ ಈ ಕಾರ್ಯವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಹಾಗೂ ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಶ್ಲಾಘಿಸಿದ್ದಾರೆ.
"ವಿಶ್ವಕಪ್ ಫೈನಲ್ನಲ್ಲಿ ದುರದೃಷ್ಟಕರ ಸೋಲಿನ ನಂತರ, ಪ್ರಧಾನಮಂತ್ರಿ ನರೇಂದ್ರ ಮೋದಿ ಆಟಗಾರರನ್ನು ಭೇಟಿಯಾಗಿದ್ದು ಒಂದು ಸುಂದರವಾದ ಸೂಚಕವಾಗಿದೆ. ಇದು ನೈತಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನರೇಂದ್ರ ಮೋದಿ ಇದರಿಂದ ಯಾವುದೇ ಲಾಭ ಆಗಬೇಕಿಲ್ಲ. ಸೋಲಿನ ನಂತರ ಪ್ರಧಾನಿ ಹೋಗಿ ಆಟಗಾರರನ್ನು ಭೇಟಿ ಮಾಡಿದರು. ಇದು ಕೇವಲ ಒಂದು ದೊಡ್ಡ ಮಾನವ ಸೂಚಕವಾಗಿತ್ತು," ಎಂದು ವೆಂಕಟೇಶ್ ಪ್ರಸಾದ್ ಎಕ್ಸ್ನಲ್ಲಿ ಬರೆದಿದ್ದಾರೆ.
"ಇನ್ನು ಫಿಫಾ ವಿಶ್ವಕಪ್ ಫೈನಲ್ನಲ್ಲಿ ನಂತರ ಫ್ರಾನ್ಸ್ ಅಧ್ಯಕ್ಷರು ಎಂಬಪ್ಪೆ ಮತ್ತು ಫ್ರೆಂಚ್ ಆಟಗಾರರನ್ನು ಭೇಟಿಯಾದಾಗ, ಹೀಯಾಳಿಸುವ ಮತ್ತು ಟೀಕಿಸುವವರಲ್ಲಿ ಹಲವರು ಬುದ್ಧಿ ಹೀನರಾಗಿದ್ದರು. ಯಾವುದೇ ತಿಳುವಳಿಕೆ ಮತ್ತು ವಸ್ತುನಿಷ್ಠತೆ ಇಲ್ಲದೆ ಕೇವಲ ಶುದ್ಧ ದ್ವೇಷ," ಎಂದು ಭಾರತದ ಮಾಜಿ ಬೌಲರ್ ತಿಳಿಸಿದ್ದಾರೆ.