ಭಾನುವಾರ, ಸೆಪ್ಟೆಂಬರ್ 17ರಂದು ಕೊಲಂಬೊದ ಆರ್ ಪ್ರೇಮದಾಸದ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ ದಾಖಲೆಯ 8ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.
2023ರ ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ವಿರುದ್ಧ ಶ್ರೀಲಂಕಾ 50 ರನ್ಗಳಿಗೆ ಆಲೌಟ್ ಆಯಿತು ಮತ್ತು ಏಕದಿನ ಇತಿಹಾಸದಲ್ಲಿ ಕೆಟ್ಟ ದಾಖಲೆ ನಿರ್ಮಿಸಿತು.

ಇದೀಗ ಇದು ಭಾರತ ವಿರುದ್ಧ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಕಡಿಮೆ ಮೊತ್ತ ಗಳಿಸಿದ ತಂಡವಾಯಿತು ಮತ್ತು ಶ್ರೀಲಂಕಾ ತಮ್ಮ ಎರಡನೇ ಅತಿ ಕಡಿಮೆ ಏಕದಿನ ಮೊತ್ತ ದಾಖಲಿಸಿತು.
ಭಾರತದ ಮಾರಕ ವೇಗಿ ಮೊಹಮ್ಮದ್ ಸಿರಾಜ್ 7 ಓವರ್ಗಳಲ್ಲಿ 21 ರನ್ ನೀಡಿ 6 ವಿಕೆಟ್ಗಳನ್ನು ಕಬಳಿಸಿದರೆ, ಹಾರ್ದಿಕ್ ಪಾಂಡ್ಯ 2.2 ಓವರ್ಗಳಲ್ಲಿ 3 ರನ್ ನೀಡಿ 3 ವಿಕೆಟ್ ಮತ್ತು ಜಸ್ಪ್ರೀತ್ ಬುಮ್ರಾ 5 ಓವರ್ಗಳಲ್ಲಿ 23 ರನ್ ನೀಡಿ 1 ವಿಕೆಟ್ ಪಡೆದು ಶ್ರೀಲಂಕಾ ಬ್ಯಾಟಿಂಗ್ ಕ್ರಮಾಂಕವನ್ನು ಧ್ವಂಸಗೊಳಿಸಿದರು.
ಇದಕ್ಕೂ ಮುನ್ನ ದಸುನ್ ಶನಕ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ನಂತರ, ಇನಿಂಗ್ಸ್ನ ಮೊದಲ ಓವರ್ನಲ್ಲೇ ಕುಸಲ್ ಪೆರೆರಾ ಅವರನ್ನು ಜಸ್ಪ್ರೀತ್ ಬುಮ್ರಾ ಪೆವಿಲಿಯನ್ಗೆ ಕಳಿಸಿದರು. ನಂತರ, ಮೊಹಮ್ಮದ್ ಸಿರಾಜ್ ಆರ್ಭಟ ಶುರುವಾಯಿತು. ಒಂದೇ ಓವರ್ನಲ್ಲಿ ನಾಲ್ಕು ವಿಕೆಟ್ಗಳೊಂದಿಗೆ ಶ್ರೀಲಂಕಾ ತಂಡದ ಪೆವಿಲಿಯನ್ ಪರೇಡ್ಗೆ ಕಾರಣರಾದರು.

ಶ್ರೀಲಂಕಾದ ಬ್ಯಾಟರ್ಗಳು ಕಳಪೆ ಶಾಟ್-ಆಯ್ಕೆಯ ಪ್ರದರ್ಶನವಾಗಿತ್ತು. ಭಾರತದ ವೇಗಿಗಳು, ವಿಶೇಷವಾಗಿ ಮೊಹಮ್ಮದ್ ಸಿರಾಜ್ ಅವರಿಂದ ಸಂಪೂರ್ಣವಾಗಿ ಜರ್ಜರಿತರಾದರು. ಮೊಹಮ್ಮದ್ ಸಿರಾಜ್ ವೇಗವಾಗಿ 50 ಏಕದಿನ ವಿಕೆಟ್ಗಳ ಹೆಗ್ಗುರುತನ್ನು ತಲುಪಿದ ನಾಲ್ಕನೇ ಭಾರತೀಯ ಆಟಗಾರರಾದರು.
ಶ್ರೀಲಂಕಾ ಇನ್ನಿಂಗ್ಸ್ನ ನಾಲ್ಕನೇ ಓವರ್ನ ಮೊದಲ ಎಸೆತದಲ್ಲಿ ಪಾಥುಮ್ ನಿಸ್ಸಾಂಕ ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು. ನಂತರ ಅದೇ ಓವರ್ನ ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಸದೀರ ಸಮರವಿಕ್ರಮ ಮತ್ತು ಚರಿತ್ ಅಸಲಂಕಾ ಅವರ ವಿಕೆಟ್ ಪಡೆದರು. ಅದೇ ಓವರ್ನ ಅಂತಿಮ ಎಸೆತದಲ್ಲಿ ಧನಂಜಯ ಡಿ ಸಿಲ್ವಾ ಅವರನ್ನು ಔಟ್ ಮಾಡಿ ದುಸ್ವಪ್ನವಾದರು.
ಶ್ರೀಲಂಕಾ - 2023ರಲ್ಲಿ ಭಾರತ ವಿರುದ್ಧ 50 ರನ್
ಬಾಂಗ್ಲಾದೇಶ - 2000 ರಲ್ಲಿ ಪಾಕಿಸ್ತಾನ ವಿರುದ್ಧ 87 ರನ್
ಬಾಂಗ್ಲಾದೇಶ - 1986ರಲ್ಲಿ ಪಾಕಿಸ್ತಾನ ವಿರುದ್ಧ 94 ರನ್
ಶ್ರೀಲಂಕಾ - 2023ರಲ್ಲಿ 50 ರನ್- ಕೊಲಂಬೊ
ಬಾಂಗ್ಲಾದೇಶ - 2004ರಲ್ಲಿ 58 ರನ್ - ಮೀರ್ಪುರ್
ಜಿಂಬಾಬ್ವೆ - 2005ರಲ್ಲಿ 65 ರನ್ - ಹರಾರೆ
ಶ್ರೀಲಂಕಾ - 2023ರಲ್ಲಿ 73 ರನ್ - ತಿರುವನಂತಪುರಂ
ಕೆಲ ನಿಮಿಷಗಳ ನಂತರ ಕುಸಾಲ್ ಮೆಂಡಿಸ್ ವಿಕೆಟ್ನೊಂದಿಗೆ ಮೊಹಮ್ಮದ್ ಸಿರಾಜ್ ತಮ್ಮ ವಿಕೆಟ್ಗಳ ಖಾತೆಯನ್ನು ವಿಸ್ತರಿಸಿದರು. ನಂತರ ಹಾರ್ದಿಕ್ ಪಾಂಡ್ಯ ದುನಿತ್ ವೆಲ್ಲಲಾಗೆ ಅವರನ್ನು ಔಟ್ ಮಾಡಿ ಶ್ರೀಲಂಕಾವನ್ನು 8 ವಿಕೆಟ್ಗೆ 40 ರನ್ಗಳಿಗೆ ಇಳಿಸಿದರು.
ಶ್ರೀಲಂಕಾ ಏಕದಿನ ಇತಿಹಾಸದಲ್ಲಿ ಅತ್ಯಂತ ಕಡಿಮೆ ತಂಡದ ಮೊತ್ತವನ್ನು ದಾಖಲಿಸುವ ಮುಜುಗರವನ್ನು ತಪ್ಪಿಸಿದೆ. ಆದರೆ, ಕೇವಲ 50 ರನ್ಗೆ ಆಲೌಟ್ ಇದೀಗ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ವಿಶೇಷವಾಗಿ, ಕಳೆದ ವಾರ ಭಾರತ ವಿರುದ್ಧ ವೀರೋಚಿತ ಮುಖಾಮುಖಿಯಾಗುವ ಮೊದಲು ಏಕದಿನ ಸ್ವರೂಪದಲ್ಲಿ ಅವರ ಅದ್ಭುತ ವಿಜಯಗಳ ನಂತರ ಈ ಸೋಲು ಚಿಂತೆಗೀಡು ಮಾಡಿದೆ.
ಮೊಹಮ್ಮದ್ ಸಿರಾಜ್ ಅವರು ಕೇವಲ ಮೂರನೇ ಓವರ್ನಲ್ಲಿ ಏಕದಿನ ಕ್ರಿಕೆಟ್ನಲ್ಲಿ ತಮ್ಮ ಮೊದಲ ಐದು ವಿಕೆಟ್ಗಳ ಸಾಧನೆಯನ್ನು ಪೂರೈಸಿದರು. ಶ್ರೀಲಂಕಾ 12 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಾಗ ತವರಿನ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದರು.
ಇನ್ನು ಅಕ್ಟೋಬರ್ 29, 2000ರಂದು ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧ 54 ರನ್ಗಳಿಗೆ ಆಲೌಟ್ ಆಗಿದ್ದ ಭಾರತದ ಅತ್ಯಂತ ಕಡಿಮೆ ಏಕದಿನ ಮೊತ್ತವೂ ಆಗಿದೆ.