ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ವಿಶ್ವಕಪ್ನಲ್ಲಿ ಸೆಮಿ ಫೈನಲ್ನಲ್ಲಿ ಟೀಮ್ ಇಂಡಿಯಾ ಹೊರಬಿದ್ದ ಬಳಿಕ ಎಲ್ಲಾ ರೀತಿಯ ಕ್ರಿಕೆಟ್ನಿಂದ ದೂರವಾಗಿದ್ದರು.ಸೀಮಿತ ಕ್ರಿಕೆಟ್ಗೂ ಧೋನಿ ನಿವೃತ್ತಿಯನ್ನು ಪಡೆಯುತ್ತಾರೆ ಎಂಬ ಮಾತುಗಳೂ ಬಲವಾಗಿ ಕೇಳಿಬಂದಿತ್ತು. ಆದರೆ ಧೋನಿ ಯಾವುದಕ್ಕೂ ಉತ್ತರಿಸದೆ ಮೌನವಾಗಿಯೇ ಉಳಿದು ಬಿಟ್ಟರು.
ಐಪಿಎಲ್ನಲ್ಲಿ ಕಾಣಸಿಕೊಳ್ಳುವ ಹಿನ್ನೆಲೆಯಲ್ಲಿ ಧೋನಿ ಅಭ್ಯಾಸಕ್ಕಿಳಿದರಾದರೂ ಬಳಿಕ ಕೊರೊನಾ ವೈರಸ್ಗೆ ಐಪಿಎಲ್ ಮುಂದೂಡಿಕೆಯಾಗಿದೆ. ಈ ಮಧ್ಯೆ ಧೋನಿ ಅಭಿಮಾನಿಗಳು ಸಂತಸ ಪಡುವ ಸುದ್ದಿಯೊಂದು ಕೇಳಿಬರುತ್ತಿದೆ. ಧೋನಿ ದೇಸಿ ಟೂರ್ನಿಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವರದಿಗಳು ಬರುತ್ತಿವೆ.
ಕ್ರಿಕೆಟಿಗರು ಕ್ರೀಡಾಸ್ಫೂರ್ತಿ ಮೆರೆದು ಮನಗೆದ್ದಿದ್ದ ಟಾಪ್ 5 ಸಂದರ್ಭಗಳು
ಮುಂಬರುವ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಪಾಲ್ಗೊಳ್ಳಲು ಆಸಕ್ತಿಯನ್ನು ಹೊಂದಿದ್ದಾರೆ ಎನ್ನಲಾಗ್ತಿದೆ. ಆದರೆ ಈ ವಿಚಾರ ಇನ್ನೂ ಖಚಿತವಾಗಿಲ್ಲ. ಇದು ಖಚಿತವಾದಲ್ಲಿ ಧೋನಿ ಅಭಿಮಾನಿಗಳಿಗೆ ನಿಜಕ್ಕೂ ಸಂಭ್ರಮದ ಸುದ್ಧಿಯಾಗಿರಲಿದೆ.
ಧೋನಿ ಕೇವಲ ಒಂದು ಬಾರಿ ಮಾತ್ರವೇ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. 2007ರಲ್ಲಿ ನಡೆದ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಧೋನಿ ಝಾರ್ಖಂಡ್ ತಂಡವನ್ನು ಪ್ರತಿನಿಧಿಸಿದ್ದರು. 61.50 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದ ಧೋನಿ 123 ರನ್ ಗಳಿಸಿದ್ದರು.
ಎಂ ಎಸ್ ಧೋನಿ ಬಗ್ಗೆ ಸಿದ್ಧವಾಗ್ತಿದೆ ಡ್ವೇಯ್ನ್ ಬ್ರಾವೋ ರಚನೆಯ ಹಾಡು
ಸಧ್ಯ ದೇಶಾದ್ಯಂತ ಲಾಕ್ಡೌನ್ ಅವಧಿ ನಡೆಯುತ್ತಿದೆ. ಈ ಲಾಕ್ಡೌನ್ ಸಂಪೂರ್ಣ ಮುಕ್ತಾಯದ ಬಳಿಕ ಧೋನಿ ಈ ಬಗ್ಗೆ ತಮ್ಮ ಖಚಿತ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಮಾಹಿತಿಗಳು ದೊರಕಿವೆ.