ರೋಹಿತ್ ಶರ್ಮಾ ಭಾರತ ಟಿ20 ತಂಡದ ನಾಯಕತ್ವದಿಂದ ಸದ್ಯ ದೂರ ಉಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದುಕೊಂಡಿದ್ದು, ಟೆಸ್ಟ್ ಸರಣಿಗೆ ವಾಪಸಾಗಲಿದ್ದಾರೆ.
ಸೀಮಿತ ಓವರ್ ಗಳ ಕ್ರಿಕೆಟ್ಗೆ ರೋಹಿತ್ ಶರ್ಮಾ ಮತ್ತೆ ಮರಳುವ ವಿಶ್ವಾಸ ಅಭಿಮಾನಿಗಳಲ್ಲಿದೆ. 2024ರ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಆಡಬೇಕು ಎನ್ನುವ ಒತ್ತಾಯ ಕೂಡ ಅಭಿಮಾನಿಗಳದ್ದಾಗಿದೆ. 2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಎಂಎಸ್ ಧೋನಿ ನಂತರ ಯಾವುದೇ ಭಾರತೀಯ ನಾಯಕ ಭಾರತ ತಂಡದಲ್ಲಿ ಐಸಿಸಿ ಕೋಡ್ ಅನ್ನು ಭೇದಿಸಲು ಯಶಸ್ವಿಯಾಗಲಿಲ್ಲ ಎಂಬುದಂತೂ ನಿಜ.

ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ರೋಹಿತ್ ಅವರನ್ನು ನಾಯಕ, ಕ್ರಿಕೆಟಿಗ ಮತ್ತು ಒಬ್ಬ ಉತ್ತಮ ವ್ಯಕ್ತಿ ಎಂದು ವಿಶ್ಲೇಷಿಸುತ್ತಾ, ಡ್ರೆಸ್ಸಿಂಗ್ ರೂಮ್ನಲ್ಲಿ ಭಾರತ ನಾಯಕನ ಗೌರವದ ಬಗ್ಗೆ ವಿವರಣೆಯನ್ನು ನೀಡಿದರು.
"ನೀವು ಭಾರತೀಯ ಕ್ರಿಕೆಟ್ ಅನ್ನು ನೋಡಿದರೆ, ಎಂಎಸ್ ಧೋನಿ ಅತ್ಯುತ್ತಮ ನಾಯಕ ಎಂದು ಎಲ್ಲರೂ ನಿಮಗೆ ಹೇಳುತ್ತಿದ್ದಾರೆ. ರೋಹಿತ್ ಶರ್ಮಾ ಒಬ್ಬ ಅತ್ಯುತ್ತಮ ವ್ಯಕ್ತಿ, ಅವರು ತಂಡದ ಪ್ರತಿಯೊಬ್ಬ ಆಟಗಾರನನ್ನು ಅರ್ಥಮಾಡಿಕೊಳ್ಳುತ್ತಾರೆ. ಉತ್ತಮ ತಿಳುವಳಿಕೆಯನ್ನು ಹೊಂದಿದ್ದಾರೆ. ಅವರು ಪ್ರತಿಯೊಬ್ಬ ಆಟಗಾರರನ್ನು ವೈಯಕ್ತಿಕವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ" ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊದಲ್ಲಿ ತಿಳಿಸಿದ್ದಾರೆ.
ರೋಹಿತ್ ಏಕದಿನ ವಿಶ್ವ ಕಪ್ನಲ್ಲಿ ಉತ್ತಮವಾಗಿ ತಂಡವನ್ನು ಮುನ್ನಡೆಸಿದರು, ಫೈನಲ್ ಸೇರಿದಂತೆ ಪ್ರತಿಯೊಂದು ಪಂದ್ಯದಲ್ಲೂ ಅದ್ಭುತ ಆರಂಭವನ್ನು ನೀಡಿದರು. ಆದರೆ,ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಗೆಲುವು ಸಾಧಿಸಿತು.
"ನಾನು ಫೈನಲ್ ಆಡುವ ಮಟ್ಟಿಗೆ, ತಂಡದ ಸಂಯೋಜನೆ ಮತ್ತು ಎಲ್ಲವೂ ಗೌಣವಾಗಿದೆ. ನಾನೇ ರೋಹಿತ್ ಶರ್ಮಾ ಅವರ ಸ್ಥಾನದಲ್ಲಿದ್ದರೂ ತಂಡವನ್ನು ಬದಲಾವಣೆ ಮಾಡುವ ಬಗ್ಗೆ 100 ಬಾರಿ ಯೋಚನೆ ಮಾಡುತ್ತಿದೆ. ಮೂವರು ಸ್ಪಿನ್ನರ್ ಗಳಿಗೆ ಫೈನಲ್ನಲ್ಲಿ ಅವಕಾಶ ನೀಡುವ ಅಗತ್ಯ ಇರಲಿಲ್ಲ, ವೇಗಿಗೆ ವಿಶ್ರಾಂತಿ ಕೂಡ ಬೇಕಿರಲಿಲ್ಲ. ರೋಹಿತ್ ಶರ್ಮಾ ಅವರ ನಿರ್ಧಾರ ಸರಿಯಾಗಿದೆ" ಎಂದು ಹೇಳಿದ್ದಾರೆ.
"ಪ್ರಾಮಾಣಿಕವಾಗಿ, ನಾನು ರೋಹಿತ್ ಶರ್ಮಾ ಅವರ ಆಲೋಚನಾ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡಿದ್ದೇನೆ. ಫೈನಲ್ ಆಡುವುದು ದೊಡ್ಡದಾಗಿದೆ, ನಾನು ಮೂರು ದಿನಗಳ ಮುನ್ನಡೆಗಾಗಿ ತಯಾರಿ ನಡೆಸುತ್ತಿದ್ದೆ. ಅದೇ ಸಮಯದಲ್ಲಿ, ನಾನು ತಂಡವನ್ನು ಹುರಿದುಂಬಿಸಲು ಮತ್ತು ಶಕ್ತಿಯಿಂದ ಓಡಲು ಸಹ ಸಿದ್ಧನಾಗಿದ್ದೆ. ಅವಕಾಶ ಸಿಗದಿದ್ದರೆ ಅದಕ್ಕೆ ಮಾನಸಿಕವಾಗಿಯೂ ತಯಾರಿ ನಡೆಸಿದ್ದೆ," ಎಂದು ಅಶ್ವಿನ್ ಹೇಳಿದ್ದಾರೆ.