ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಈಗಾಗಲೇ ಪ್ಲೇಆಫ್ ರೇಸ್ನಿಂದ ಮೊದಲ ತಂಡವೆನಿಸಿದೆ. ಈಗೇನಿದ್ದರೂ ತಮ್ಮ ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸುವುದಾಗಿದೆ.
ಇನ್ನು ಮುಂಬೈ ಇಂಡಿಯನ್ಸ್ ಶಿಬಿರದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ ಎಂಬುದು ಜಗಜ್ಜಾಹೀರಾದ ಸುದ್ದಿ. ಸ್ಟಾರ್ ಆಟಗಾರರ ನಡುವೆ ಸಂಪರ್ಕ ಕಡಿತಗೊಂಡಿರುವಂತೆ ತೋರುತ್ತಿದೆ.

ಐಪಿಎಲ್ 2024ರ ಮುನ್ನ ನಾಯಕತ್ವ ಬದಲಾವಣೆ ಸಾಹಸವು ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನದ ಮೇಲೆ ದೊಡ್ಡ ಪರಿಣಾಮ ಬೀರಿದೆ ಮತ್ತು ಆ ಪರಿಣಾಮಗಳು ದೊಡ್ಡದಾಗಿವೆ. ಆಡಿದ 13 ಪಂದ್ಯಗಳಲ್ಲಿ ಕೇವಲ 4 ಗೆಲುವು ಮತ್ತು 9 ಸೋಲು ಕಂಡಿದ್ದು, 8 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಶುಕ್ರವಾರ, ಮೇ 17ರಂದು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
2024ರ ಪಂದ್ಯಾವಳಿ ಮುಗಿಯುವಷ್ಟರಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಂಪ್ನಲ್ಲಿ ಈಗಾಗಲೇ ಎರಡು ಗುಂಪುಗಳು ಹುಟ್ಟಿಕೊಂಡಿವೆ. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನೆಟ್ಸ್ನಲ್ಲಿ ಪರಸ್ಪರ ಅಭ್ಯಾಸ ಮಾಡುತ್ತಿಲ್ಲ ಎಂದು ಇದೀಗ ವರದಿಯಾಗಿದೆ.

ಇತ್ತೀಚಿನ ಘಟನೆಯೊಂದನ್ನು ವಿವರಿಸುವುದಾದರೆ, ನಾಯಕ ಹಾರ್ದಿಕ್ ಪಾಂಡ್ಯ ನೆಟ್ಸ್ನಲ್ಲಿ ಅಭ್ಯಾಸ ಮಾಡಲು ಬಂದಾಗ ಅವರನ್ನು ಬಿಟ್ಟು ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮೂವರು ಎದ್ದುಹೋದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ, ಈ ಐಪಿಎಲ್ ಪಂದ್ಯಾವಳಿಯಲ್ಲಿ ಹಾಲಿ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಹೆಚ್ಚು ಒಟ್ಟಿಗೆ ಅಭ್ಯಾಸ ಮಾಡಿಲ್ಲ.
ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋತ ಪಂದ್ಯದ ಮೊದಲು, ರೋಹಿತ್ ಶರ್ಮಾ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಹಾರ್ದಿಕ್ ಪಾಂಡ್ಯ ಸುತ್ತಮುತ್ತ ಇರಲಿಲ್ಲ.
ಈ ವೇಳೆ ರೋಹಿತ್ ಶರ್ಮಾ ಅವರು ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ಅವರೊಂದಿಗೆ ಸೈಡ್ಲೈನ್ನಲ್ಲಿ ಕುಳಿತಿದ್ದಾಗ, ಹಾರ್ದಿಕ್ ಪಾಂಡ್ಯ ನೆಟ್ಸ್ನಲ್ಲಿ ಬ್ಯಾಟ್ ಮಾಡಲು ಹೊರಬಂದರು.
ನಾಯಕ ಹಾರ್ದಿಕ್ ನಡೆದು ಬರುತ್ತಿರುವುದನ್ನು ನೋಡಿದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮೂವರೂ ಎದ್ದು ಮೈದಾನದ ಇನ್ನೊಂದು ಬದಿಗೆ ನಡೆದರು. ಇದು ಮುಂಬೈ ಇಂಡಿಯನ್ಸ್ ತಂಡ ಇಬ್ಭಾಗವಾಗಿದೆ ಮತ್ತು ಆಟಗಾರರ ನಡುವೆ ಸರಿಯಾದ ಸಂವಹನ ನಡೆಯುತ್ತಿಲ್ಲ ಎನ್ನುವುದು ತೋರಿಸುತ್ತದೆ.
ಐಪಿಎಲ್ 2024ರ ಪಂದ್ಯಾವಳಿಗೂ ಮುನ್ನ ನಾಯಕತ್ವ ಬದಲಾವಣೆಯೊಂದಿಗೆ ಆರಂಭವಾದ ಈ ವಿವಾದ ಪಂದ್ಯಾವಳಿ ಮುಕ್ತಾಯದ ಹಂತಕ್ಕೆ ಬಂದರೂ ಕಡಿಮೆಯಾಗುತ್ತಿಲ್ಲ. ಅಲ್ಲದೆ, ಮುಂದಿನ ವರ್ಷದ ಆವೃತ್ತಿ ವೇಳೆಗೆ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಲಿವೆ ಎಂಬುದನ್ನು ನೋಡಬಹುದು.
ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ಮತ್ತು ಮುಂಬೈ ನಡುವಿನ ಪಂದ್ಯದ ಮೊದಲು, ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ರೋಹಿತ್ ಶರ್ಮಾ ನಡೆಸಿದ ಮಾತುಕತೆ ಕೂಡ ಸಾಮಾಜಿಕ ಮಾಧ್ಯಮ ಹಾಗೂ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.
ಈ ಸಂಭಾಷಣೆಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ಅಧಿಕಾರ ವಹಿಸಿಕೊಂಡ ನಂತರ, ಮುಂಬೈ ಇಂಡಿಯನ್ಸ್ನಲ್ಲಿ ಆಗಿರುವ ಬದಲಾವಣೆಗಳನ್ನು ರೋಹಿತ್ ಶರ್ಮಾ ಹಂಚಿಕೊಂಡಿದ್ದಾರೆ. ಮಾತುಕತೆ ವೇಳೆ ಮಾಜಿ ನಾಯಕ ರೋಹಿತ್ ಶರ್ಮಾ ಇದು ಮುಂಬೈ ಇಂಡಿಯನ್ಸ್ನೊಂದಿಗಿನ ತನ್ನ ಕೊನೆಯ ಐಪಿಎಲ್ ಆವೃತ್ತಿ ಎಂದು ದೃಢಪಡಿಸಿದಂತಿದೆ.
ಈ ಆವೃತ್ತಿ ನಂತರ, 2025ರ ಐಪಿಎಲ್ಗಾಗಿ ಮೆಗಾ ಹರಾಜು ನಡೆಯಲಿದ್ದು, ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ ಅವರು ಉಳಿದುಕೊಳ್ಳುವ ಬದ್ಧತೆ ಹೊಂದಿದ್ದಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕನಾಗಿ ನೇಮಿಸುವ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಕಾರ್ಡ್ ಅನ್ನು ಪ್ಲೇ ಮಾಡಿದ. ಮಾಲೀಕರು ಖಚಿತವಾಗಿ ತಮ್ಮ ಭವಿಷ್ಯವನ್ನು ಭಾರತದ ಆಲ್ರೌಂಡರ್ನೊಂದಿಗೆ ನೋಡುತ್ತಾರೆ ಎಂದು ತಿಳಿಸಿದ್ದಾರೆ.
ರೋಹಿತ್ ಶರ್ಮಾ ಬಹುಶಃ ಇನ್ನೂ ಕೆಲವು ಆವೃತ್ತಿಗಳನ್ನು ಆಡಲು ಬಯಸುತ್ತಾರೆ. ಇನ್ನೂ ಕೆಲವು ಐಪಿಎಲ್ ತಂಡಗಳು ರೋಹಿತ್ ಶರ್ಮಾಗಾಗಿ ಬಿಡ್ಡಿಂಗ್ ವಾರ್ ನಡೆಸಲು ಸಿದ್ಧವಾಗಿವೆ.