Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Haryana vs Mumbai: ಕ್ವಾರ್ಟರ್ ಫೈನಲ್‌ಗೆ ಮುಂಬೈ ರಣಜಿ ತಂಡ ಪ್ರಕಟ; ಸೂರ್ಯ, ದುಬೆಗೆ ಸ್ಥಾನ

ರಣಜಿ ಟ್ರೋಫಿ ಟೂರ್ನಿಯಲ್ಲಿ ಹರಿಯಾಣ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಮುಂಬೈ ತಂಡವನ್ನು ಪ್ರಕಟಿಸಲಾಗಿದೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಮತ್ತು ಆಲ್‌ರೌಂಡರ್‌ ಶಿವಂ ದುಬೆ ಅವರನ್ನು 18 ಸದಸ್ಯರ ಮುಂಬೈ ರಣಜಿ ತಂಡಕ್ಕೆ ಸೇರಿಸಲಾಗಿದೆ. ಹರಿಯಾಣದ ಲಾಲ್ಹಿಯಲ್ಲಿರುವ ಚೌಧರಿ ಬನ್ಸಿ ಲಾಲ್ ಕ್ರೀಡಾಂಗಣದಲ್ಲಿ ಕ್ವಾರ್ಟರ್‌ ಫೈನಲ್‌ ಪಂದ್ಯ ಆರಂಭವಾಗಲಿದೆ.

ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಹಿರಿಯ ಆಯ್ಕೆ ಸಮಿತಿಯು ಸಂಜಯ್ ಪಾಟೀಲ್ (ಅಧ್ಯಕ್ಷ), ರವಿ ಠಾಕರ್, ಜಿತೇಂದ್ರ ಠಾಕ್ರೆ, ಕಿರಣ್ ಪವಾರ್ ಮತ್ತು ವಿಕ್ರಾಂತ್ ಯೆಲಿಗೆಟ್ಟಿ ಅವರನ್ನು ಒಳಗೊಂಡ ಸಮಿತಿ ತಂಡವನ್ನು ಆಯ್ಕೆ ಮಾಡಿದೆ. ಮುಂಬೈ ರಣಜಿ ತಂಡವನ್ನು ಎಂಸಿಎ ಸೋಮವಾರ ಪ್ರಕಟಿಸಿದೆ.

Mumbai Ranji squad announced for quarter-final against Haryana

ಅಜಿಂಕ್ಯ ರಹಾನೆ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಮುಂಬೈ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮೇಘಾಲಯವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿ ಬೋನಸ್ ಅಂಕಗಳನ್ನು ಗಳಿಸಿತು. ಜಮ್ಮು ಮತ್ತು ಕಾಶ್ಮೀರ ವಿರುದ್ಧ ಬರೋಡಾದ ಎರಡನೇ ಪಂದ್ಯದ ಫಲಿತಾಂಶವೂ ಪರವಾಗಿಯೇ ಇತ್ತು.

ಸೂರ್ಯ ಮತ್ತು ಶಿವಂ ದುಬೆ ಇಬ್ಬರೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಭಾಗವಾಗಿದ್ದರು. ಈ ಸರಣಿಯನ್ನು ಭಾರತ 4-1 ಅಂತರದಿಂದ ಗೆದ್ದುಕೊಂಡಿತು. ಈ ಹಿಂದೆ ಇಬ್ಬರೂ ರಣಜಿ ಟ್ರೋಫಿ ನಾಕೌಟ್‌ಗೆ ತಮ್ಮ ಲಭ್ಯತೆಯನ್ನು ಖಚಿತಪಡಿಸಿದ್ದರು. ಹರಿಯಾಣ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೂರ್ಯ ಹಾಗೂ ಶಿವಂ ದುಬೆ ಇಬ್ಬರೂ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.

ರಣಜಿ ಟ್ರೋಫಿ ನಾಕೌಟ್‌ಗಳು ಐದು ದಿನಗಳವರೆಗೆ ಇರುತ್ತದೆ. ಆದರೆ ಲೀಗ್ ಪಂದ್ಯಗಳು ನಾಲ್ಕು ದಿನಗಳವರೆಗೆ ಇರುತ್ತದೆ. ಮುಂಬೈ ದೇಶೀಯ ಮಟ್ಟದಲ್ಲಿ ಪ್ರತಿಷ್ಠಿತ ರಣಜಿ ಟ್ರೋಫಿಯನ್ನು ಹಲವಾರು ಬಾರಿ ಗೆದ್ದಿದೆ. ರಹಾನೆ ನೇತೃತ್ವದ ಮುಂಬೈ ತಂಡವು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯೋಜನೆ ರೂಪಿಸಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಶತಕ ಸಿಡಿಸಿದ ಆರಂಭಿಕ ಬ್ಯಾಟರ್‌ಗಳಾ ಆಯುಷ್ ಮ್ಹಾತ್ರೆ, ಆಂಗ್‌ಕ್ರಿಶ್ ರಘುವಂಶಿ ಮತ್ತು ಸಿದ್ಧೇಶ್ ಲಾಡ್ ಅವರನ್ನು ಆಯ್ಕೆಗಾರರು ತಂಡದಲ್ಲಿ ಸೇರಿಸಿದ್ದಾರೆ. ಲಾರ್ಡ್ ಠಾಕೂರ್ ಎಂದು ಖ್ಯಾತಿಗಳಿಸಿರುವ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿ ನಡೆಸಲು ಸಜ್ಜಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮೋಹಿತ್ ಅವಸ್ತಿ, ಶಿವಂ ದುಬೆ, ತನುಷ್ ಕೋಟ್ಯಾನ್ ಮತ್ತು ಶಮ್ಸ್ ಮುಲಾನಿ ಇದ್ದಾರೆ. ಆಕಾಶ್ ಆನಂದ್ ಮತ್ತು ಹಾರ್ದಿಕ್ ತಮೋರ್ ಅವರನ್ನು ವಿಕೆಟ್ ಕೀಪರ್‌ಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಆಯುಷ್ ಮ್ಹಾತ್ರೆ, ಅಂಗ್‌ಕ್ರಿಶ್ ರಘುವಂಶಿ, ಅಮೋಘ್ ಭಟ್ಕಳ್, ಸೂರ್ಯಕುಮಾರ್ ಯಾದವ್, ಸಿದ್ಧೇಶ್ ಲಾಡ್, ಶಿವಂ ದುಬೆ, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಸೂರ್ಯಾಂಶ್ ಶೆಡ್ಜ್, ಶಾರ್ದೂಲ್ ಠಾಕೂರ್, ಶಾರ್ದೂಲ್ ಠಾಕೂರ್, ತಾಕೂರ್ , ಮೋಹಿತ್ ಅವಸ್ಥಿ, ಸಿಲ್ವೆಸ್ಟರ್ ಡಿಸೋಜಾ, ರಾಯ್ಸ್ಟನ್ ಡಯಾಸ್, ಅಥರ್ವ ಅಂಕೋಲೆಕರ್, ಹರ್ಷ ತನ್ನಾ.

Story first published: Monday, February 3, 2025, 23:49 [IST]
Other articles published on Feb 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+