For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೆ ಭಾರತದ ನಂ.1 ವಿಕೆಟ್ ಕೀಪರ್ ಆಯ್ಕೆ ಮಾಡಿದ ನವಜೋತ್ ಸಿಂಗ್ ಸಿಧು

ಮುಂಬರುವ ಬಹು ನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡದಲ್ಲಿ ಎಲ್ಲ ಸ್ಥಾನಗಳಿಗಿಂತ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಸ್ಪರ್ಧೆಯು ಅತ್ಯಂತ ತೀವ್ರವಾಗಿ ನಡೆಯುತ್ತಿದೆ.

ರಿಷಭ್ ಪಂತ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರು ವಿಕೆಟ್ ಕೀಪರ್ ಸ್ಥಾನಕ್ಕಾಗಿ ಅಗ್ರ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ. ಆದರೆ ಯಾವುದೇ ಆಟಗಾರರು ಇನ್ನೂ ಫೈನಲ್ ಆಗಿಲ್ಲ.

Navjot Singh Sidhu Picks India s No 1 Wicket keeper for the T20 World Cup 2024 Squad

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿಯು ಭಾರತ ತಂಡದ ನಂಬರ್ 1 ವಿಕೆಟ್ ಕೀಪರ್ ಆಯ್ಕೆಯನ್ನು ಇನ್ನೂ ಅಂತಿಮಗೊಳಿಸದಿರುವಾಗ ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಈ ವಿಷಯದ ಬಗ್ಗೆ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದೇ ವೇಳೆ ಭಾರತದ ಮಾಜಿ ಆಲ್‌ರೌಂಡರ್ ನವಜೋತ್ ಸಿಂಗ್ ಸಿಧು ಅವರು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಟಿ20 ವಿಶ್ವಕಪ್‌ಗೆ ಭಾರತ ತಂಡದ ಮೊದಲ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕ್ರಿಕೆಟ್ ಪಂಡಿತರಾಗಿ ಕೆಲಸ ಮಾಡುತ್ತಿರುವ ನವಜೋತ್ ಸಿಂಗ್ ಸಿಧು ಅವರು ಸಂಜು ಸ್ಯಾಮ್ಸನ್ ಅವರ ಆಟದ ಬೆಳವಣಿಗೆಯನ್ನು ಶ್ಲಾಘಿಸಿದರು. ಒಂದೆರಡು ವರ್ಷಗಳ ಹಿಂದೆ ಇದ್ದಕ್ಕಿಂತ "ವಿಭಿನ್ನ' ಆಟಗಾರನಾಗಿದ್ದರು ಎಂದು ಕರೆದರು.

Navjot Singh Sidhu Picks India s No 1 Wicket keeper for the T20 World Cup 2024 Squad

"ವಿಕೆಟ್ ಕೀಪರ್ ಮತ್ತು ಬ್ಯಾಟಿಂಗ್ ಫಾರ್ಮ್‌ನಲ್ಲಿ ನಂ.1 ಸಂಜು ಸ್ಯಾಮ್ಸನ್, ಇದು ವಿಭಿನ್ನ ಸ್ಯಾಮ್ಸನ್ ಆಗಿ ಕಾಣುತ್ತಿದ್ದಾರೆ. ಭಾರತ ತಂಡಕ್ಕೆ ಒಂದು ವೇಳೆ ಆರಂಭಿಕ ಅಥವಾ 4ನೇ ಕ್ರಮಾಂಕದ ಬ್ಯಾಟರ್ ಅಥವಾ 6ನೇ ಕ್ರಮಾಂಕದಲ್ಲಿ ಅಗತ್ಯವಿದ್ದರೆ, ನೀವು ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್ ಅವರನ್ನು ಹೊಂದಿದ್ದೀರಿ. ಆದರೆ ನಾನು ಸಂಜು ಸ್ಯಾಮ್ಸನ್‌ಗೆ ಆದ್ಯತೆ ನೀಡುತ್ತೇನೆ," ಎಂದರು.

"ನಂತರ ರಿಷಭ್ ಪಂತ್. ಅವರು ಈಗ ಗಾಯದಿಂದ ಹೊರಬರುತ್ತಿದ್ದಾರೆ. ನೀವು ಅವರನ್ನು ವೈಟ್-ಬಾಲ್ ಸ್ಪೆಷಲಿಸ್ಟ್ ಎಂದು ಪರಿಗಣಿಸುತ್ತೀರಾ? ಅವರ ಫಾರ್ಮ್ ಸ್ವಲ್ಪ ತೇಪೆ ಮತ್ತು ಸ್ಕ್ರಾಚಿಂಗ್ ಆಗಿದೆ. ಆದರೆ ಅವರು ಇಲ್ಲಿಯವರೆಗೆ ಟೆಸ್ಟ್‌ನಲ್ಲಿ ಅತ್ಯುತ್ತಮವಾಗಿದ್ದಾರೆ. ನನ್ನ ಆದ್ಯತೆ ಈ ಮೂರು ಆಯ್ಕೆಗಳು," ಎಂದು ನವಜೋತ್ ಸಿಂಗ್ ಸಿಧು ಅಭಿಪ್ರಾಯಪಟ್ಟಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರ ಆಡಿದ ಸಂಜು ಸ್ಯಾಮ್ಸನ್ 33 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ಪಂದ್ಯದ ನಂತರ, ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಸ್ಟಂಪ್‌ಗಳ ಹಿಂದೆ ತಮ್ಮ ಪಾತ್ರವನ್ನು ಅವರ ಬ್ಯಾಟಿಂಗ್ ಪ್ರದರ್ಶನದ ಹಿಂದಿನ ಕೊಡುಗೆಯ ಅಂಶವಾಗಿ ಮನ್ನಣೆ ನೀಡಿದರು.

"ವಿಕೆಟ್‌ ಕೀಪರ್ ಅಗಿರಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಹೊಸ ಚೆಂಡಿನೊಂದಿಗೆ ಸ್ವಲ್ಪ ಲಾಭ ಪಡೆದೆವು ಮತ್ತು ನಂತರ ಬ್ಯಾಟ್ ಮಾಡಲು ಉತ್ತಮ ವಿಕೆಟ್ ಆಗಿತ್ತು. ಪವರ್-ಪ್ಲೇನಲ್ಲಿ ಬಂದು ಒಂದು ಓವರ್ ಬೌಲ್ ಮಾಡುವ ಬೌಲರ್‌ಗಳು ಪ್ರಮುಖ ಕೆಲಸ ಮಾಡುತ್ತಾರೆ".

"ತೆರೆಮರೆಯಲ್ಲಿ ಸಾಕಷ್ಟು ಯೋಜನೆಗಳು ನಡೆದಿವೆ. ಇನಿಂಗ್ಸ್‌ನ ಆರಂಭ ಮತ್ತು ಅಂತ್ಯ ಉತ್ತಮವಾಗಿತ್ತು. ನಾವು ಮಧ್ಯಮ ಓವರ್‌ಗಳಲ್ಲಿ ಕೆಲವನ್ನು ಬಿಟ್ಟುಕೊಟ್ಟಿದ್ದೇವೆ. ಈ ಸ್ವರೂಪದಲ್ಲಿ ಫಾರ್ಮ್ ತಾತ್ಕಾಲಿಕವಾಗಿದೆ. ನಾವು ಧ್ರುವ್ ಜುರೆಲ್ ಅವರನ್ನು ಟೆಸ್ಟ್‌ ಪಂದ್ಯಗಳಲ್ಲಿ ನೋಡಿದ್ದೇವೆ. ನಾವು ಆತನ ಮೇಲೆ ನಂಬಿಕೆ ಇಟ್ಟಿದ್ದೇವೆ. ಅವರು ಕೆಲವೊಮ್ಮೆ ಒಂದು ಗಂಟೆ ಮತ್ತು ಎರಡು ಗಂಟೆಗಳ ಕಾಲ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ," ಎಂದು ಸಂಜು ಸ್ಯಾಮ್ಸನ್ ಹೇಳಿದರು.

"ನಾವು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ, ನಾವೂ ಸ್ವಲ್ಪ ಅದೃಷ್ಟವಂತರು. ನಾವು ಇದೇ ಪ್ರದರ್ಶನವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ತಂಡದ ಸಭೆಗಳಲ್ಲಿ, ನಾವು ಒಂದೊಂದು ಆಟದಲ್ಲಿ ಪ್ರಕ್ರಿಯೆಗಳನ್ನು ಟಿಕ್ ಮಾಡುವ ಬಗ್ಗೆ ಮಾತನಾಡುತ್ತೇವೆ," ಎಂದು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಿಳಿಸಿದರು.

Story first published: Sunday, April 28, 2024, 16:52 [IST]
Other articles published on Apr 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+