ನವದೆಹಲಿ, ಮೇ 19: ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ತಡೆ ಸಿಕ್ಕ ಸಂಭ್ರಮಾಚರಣೆಯನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ ಕ್ರಿಕೆಟರ್ ಕೈಫ್ ರನ್ನು ಗೇಲಿ ಮಾಡಿದ ಪ್ರಸಂಗ ನಡೆದಿದೆ.
ಆದರೆ, ಕಿಡಿಗೇಡಿಗಳಿಗೆ ಕೈಫ್ ತಕ್ಕ ಉತ್ತರ ನೀಡಿದ್ದು, ಟೀಕಾಕಾರರು ಬಾಯ್ಮುಚ್ಚುವಂತೆ ಮಾಡಿದ್ದಾರೆ.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು, ಕೈಫ್ ಅವರು ತಮ್ಮ ಹೆಸರಿನಲ್ಲಿ 'ಮೊಹಮ್ಮದ್' ಹೆಸರನ್ನು ಕಳಚಿ ನಂತರ ಟ್ವೀಟ್ ಮಾಡಿ ಎಂದಿದ್ದರು. ಸೆಹ್ವಾಗ್ ಅವರ ಟ್ವೀಟ್ ಗೂ ಆಕ್ಷೇಪಗಳು ಕೇಳಿ ಬಂದಿತ್ತು.
ಇದಕ್ಕೆ ಉತ್ತರ ನೀಡಿರುವ ಕೈಫ್, ದೇಶದಲ್ಲಿ ಅಸಹಿಷ್ಣುತೆ ಹರಡುವ ಮುನ್ನ ದೇಶ ಮೊದಲು ನಂತರ ಮಿಕ್ಕ ಎಲ್ಲಾ ವಿಚಾರ ಎಂಬುದನ್ನು ಕಾಣಿರಿ, ಯಾವುದೇ ಧರ್ಮಕ್ಕಾಗಲಿ, ಯಾವುದೇ ಹೆಸರಿಗಾಗಲಿ ಯಾರೂ ಪಾಳೆಗಾರರಿಲ್ಲ ಎಂದಿದ್ದಾರೆ.