
ರವೀಂದ್ರ ಜಡೇಜಾಗೆ ನಾಯಕತ್ವ ನೀಡಿ ತರಬೇತಿ ಕೊಡುವ ಉದ್ದೇಶವಿದೆ ಎನ್ನಲಾಗಿತ್ತು
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂ ಎಸ್ ಧೋನಿ ಬದಲು ರವೀಂದ್ರ ಜಡೇಜಾ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ನೀಡಿ ಧೋನಿ ಮಾರ್ಗದರ್ಶನದಲ್ಲಿಯೇ ಜಡೇಜಾಗೆ ತರಬೇತಿ ನೀಡುವ ಉದ್ದೇಶವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಹೊಂದಿದೆ ಎಂಬ ಸುದ್ದಿ ಹರಿದಾಡಿತ್ತು.

ನಾಯಕತ್ವದ ಬದಲಾವಣೆ ಸುದ್ದಿ ನಿಜಾನಾ?
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂ ಎಸ್ ಧೋನಿ ಬದಲು ರವೀಂದ್ರ ಜಡೇಜಾ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎನ್ನುವುದರ ಕುರಿತು ಮಾಹಿತಿ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮೂಲವು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಾಯಕತ್ವ ಬದಲಾಯಿಸುವ ಯಾವುದೇ ಚಿಂತನೆಯನ್ನೂ ನಡೆಸಿಲ್ಲ ಎಂಎಸ್ ಧೋನಿ ಅವರೇ ಈ ಆವೃತ್ತಿಯಲ್ಲಿ ನಾಯಕನಾಗಿ ಇರಲಿದ್ದಾರೆ ಎಂಬ ಸ್ಪಷ್ಟನೆಯನ್ನು ನೀಡಿದೆ.

ಈಗ ನಮ್ಮ ಚಿತ್ತ ಹರಾಜಿನತ್ತ ಎಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ
ಎಂಎಸ್ ಧೋನಿ ನಾಯಕತ್ವ ಬದಲಾಯಿಸುವ ಚರ್ಚೆಯೇ ನಡೆದಿಲ್ಲ, ಎಂಎಸ್ ಧೋನಿ ಕಳೆದ ಆವೃತ್ತಿಯಲ್ಲಿ ಟ್ರೋಫಿಯನ್ನು ಗೆಲ್ಲಿಸಿ ಮತ್ತೆ ಕಣಕ್ಕಿಳಿದು ಅಬ್ಬರಿಸಿವಷ್ಟು ಫಿಟ್ ಆಗಿದ್ದಾರೆ ಹೀಗಿರುವಾಗ ಕಾರಣವಿಲ್ಲದೆ ಅವರು ನಾಯಕತ್ವವನ್ನು ಏಕೆ ತ್ಯಜಿಸುತ್ತಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪ್ರಶ್ನೆ ಹಾಕಿದೆ. ಹಾಗೂ ಸದ್ಯ ನಾಯಕತ್ವದ ಬದಲಾವಣೆಯ ಯಾವುದೇ ಚಿಂತನೆ ಇಲ್ಲ ಎಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈಗೇನಿದ್ದರೂ ತಮ್ಮ ಚಿತ್ತ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನತ್ತ ಎಂದಿದೆ.


Click it and Unblock the Notifications












