
ವಿಶ್ವಕಪ್ನಲ್ಲಿ 13ನೇ ಬಾರಿ ಭಾರತ ಪಾಕ್ ಮುಖಾಮುಖಿ
ವಿಶ್ವಕಪ್ ಇತಿಹಾಸದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಈವರೆಗೆ ಒಟ್ಟು 13 ಬಾರಿ ಮುಖಾಮುಖಿಯಾಗಿದೆ. ಆದರೆ ಇದರಲ್ಲಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಮಾತ್ರವೇ ಪಾಕಿಸ್ತಾನ ಗೆಲುವು ಸಾಧಿಸಿದ್ದು ಉಳಿದೆಲ್ಲಾ ಪಂದ್ಯಗಳಲ್ಲಿಯೂ ಭಾರತವೇ ಗೆಲುವು ಸಾಧಿಸಿದೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ವಿಶ್ವಕಪ್ನಲ್ಲಿ ಭಾರತದ ಅಜೇಯ ಸಾಧನೆ ಅಂತ್ಯವಾಯಿತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು ಈ ಬಾರಿಯೂ ಅಂಥಾದ್ದೇ ಸಾಧನೆ ಮಾಡುವ ವಿಶ್ವಾಸದಲ್ಲಿದೆ.

"ವಿಶ್ವಕಪ್ ಗೆಲ್ಲದ ಹೊರತು ಬೇರೆ ಆಯ್ಕೆಯಿಲ್ಲ"
ಪಾಕಿಸ್ತಾನ ಹಾಗೂ ಭಾರತ ನಡುವಿನ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ಪಾಕಿಸ್ತಾನದ ಖ್ಯಾತ ವಾಹಿನಿ ಜಿಯೋ ಟಿವಿ ಜೊತೆಗೆ ನಡೆಸಿದ ಸಂವಾದದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರೊಂದಿಗೆ ನಡೆಸಿದ ಅಂತಿಮ ಸಂವಾದದಲ್ಲಿ ಏನು ಮಾತನಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು. "ನಾನು ನಾಯಕ ಬಾಬರ್ ಅಜಂ ಬಳಿ ಮಾತನಾಡಿದ್ದು ಟಿ20 ವಿಶ್ವಕಪ್ ಗೆಲ್ಲುವ ಮೇಲೆ ಮಾತ್ರವೇ ಗಮನಹರಿಸಲು ತಿಳಿಸಿದ್ದೇನೆ. ಟಿ20 ವಿಶ್ವಕಪ್ ಅನ್ನು ತವರಿಗೆ ತರುವುದನ್ನು ಹೊರತುಪಡಿಸಿ ಬೇರೆ ಆಯ್ಕೆಯನ್ನು ಯೋಚಿಸುವುದೇ ಬೇಡ" ಎಂದು ಹೇಳಿರುವುದಾಗಿ ರಮೀಜ್ ರಾಜಾ ಹೇಳಿದ್ದಾರೆ.

ಪಾಕ್ ತಂಡದ ಮೇಲೆ ಬೀಳಲಿದೆಯಾ ಒತ್ತಡ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ಮಾತುಗಳು ಪಾಕಿಸ್ತಾನ ತಂಡಕ್ಕೆ ಸ್ಪೂರ್ತಿ ನೀಡುವ ಬದಲಾಗಿ ಒತ್ತಡವನ್ನು ಉಂಟು ಮಾಡುವ ಸಾಧ್ಯತೆಗಳೇ ಹೆಚ್ಚಿದೆ. ಒತ್ತಡದ ಸಂದರ್ಭಗಳಲ್ಲಿ ಎಡವಟ್ಟುಗಳನ್ನು ಮಾಡಿಕೊಂಡು ಹಿನ್ನಡೆ ಅನುಭವಿಸುವ ಪಾಕಿಸ್ತಾನ ತಂಡಕ್ಕೆ ಪಂದ್ಯದ ಮೇಲಿನ ಒತ್ತಡ ಜೊತೆಗೆ ಮಂಡಳಿಯಿಂದಲೂ ಈ ರೀತಿಯ ನಿರೀಕ್ಷೆಗಳನ್ನು ಹೇರಿರುವುದು ಈ ಬಾರಿಯ ವಿಶ್ವಕಪ್ನಲ್ಲಿ ಬಾಬರ್ ಅಜಂ ತಂಡದ ಮೇಲಿನ ಒತ್ತಡ ಹೆಚ್ಚಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಆಸ್ಟ್ರೇಲಿಯಾ ಪಿಚ್ ಪರಿಸ್ಥಿತಿ ಬಗ್ಗೆ ರಾಜಾ ಸಲಹೆ
ಇನ್ನು ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗನೂ ಆಗಿರುವ ರಮೀಜ್ ರಾಜಾ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂಗೆ ಆಸ್ಟ್ರೇಲಿಯಾ ಪಿಚ್ನ ಪರುಸ್ಥಿತಿಗಳ ಬಗ್ಗೆ ಅವುಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. 1992ರಲ್ಲಿ ಆಸ್ಟ್ರೇಲಿಯಾದಲ್ಲಿ ಏಕದಿನ ವಿಶ್ವಕಪ್ ನಡೆದಿದ್ದಾಗ ಪಾಕಿಸ್ತಾನ ತಂಡ ಆ ಟೂರ್ನಿಯನ್ನು ಗೆದ್ದು ಬೀಗಿತ್ತು. ಈ ವಿಸ್ವಕಪ್ ತಂಡದ ಸದಸ್ಯನಾಗಿದ್ದರು ಈಗಿನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ.


Click it and Unblock the Notifications












