ಮೈಸೂರು, ಸೆಪ್ಟೆಂಬರ್ 07 : ಎನ್.ಆರ್. ಸಮೂಹದ ಸೈಕಲ್ ಪ್ಯೂರ್ ಅಗರಬತ್ತೀಸ್ ಮಾಲೀಕತ್ವದ ಮೈಸೂರು ವಾರಿಯರ್ಸ್, ಪ್ರೇರೇಪಣಾಯೋಜನೆಯಡಿ ನಗರದ ಮಹಾಜನಾ ಮೈದಾನದಲ್ಲಿ 7 ಕೊಳೆಗೇರಿಗಳ 8 ತಂಡಗಳೊಂದಿಗಿನ ಸೌಹಾರ್ದ ಕ್ರಿಕೆಟ್ ಆಡಿ ಗಮನಸೆಳೆಯಿತು.
ಮೈಸೂರು ವಾರಿಯರ್ಸ್ ನ ಮಾಲೀಕ ಅರ್ಜುನ್ರಂಗ, ಎಸ್ವಿವೈಎಂನ ಡಾ.ಸೀತಾರಾಂ ಮತ್ತು ಡಾ. ಸಿಂಧು ಸುರೇಶ್ ಅವರು ಮೈಸೂರು ವಾರಿಯರ್ಸ್ ತಂಡದ ಆಟಗಾರರೊಂದಿಗೆ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕೊಳಗೇರಿ ತಂಡಗಳ ಪ್ರತಿಯೊಬ್ಬ ಆಟಗಾರರಿಗೆ ಮೈಸೂರು ವಾರಿಯರ್ಸ್ ತಂಡದ ಟಿ-ಶರ್ಟ್ ನೀಡಲಾಯಿತು.
ಎನ್ಆರ್ ಸಮೂಹದ ಪರೋಪಕಾರಿ ಅಂಗವಾದ ಎನ್ಆರ್ ಫೌಂಡೇಶನ್ ತನ್ನ ಪ್ರೇರೇಪಣಾ ಯೋಜನೆಯಡಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸ್ವಾಮಿ ವಿವೇಕಾನಂದಯೂತ್ ಮೂವಮೆಂಟ್ ಸಂಘಟನೆಯು ಸಹಯೋಗ ನೀಡಿದ್ದು ವಿಶೇಷವಾಗಿತ್ತು.
ಕೊಳೆಗೇರಿಯದ ಏಕಲವ್ಯಾ ನಗರ, ಭಾರತ್ ನಗರ, ಕಲ್ಯಾಣಗಿರಿ-ಕೆ.ಹೆಚ್.ಬಿ ಕಾಲೊನಿ, ವಂದೇಮಾತರಂ, ಶಿವರಾತ್ರೇಶ್ವರನಗರ, ಕೇಸರೆ-ಕುರಿಮಂದಿ, ಅಂಬೇಡಕರ್ ಜ್ಞಾನ ಲೋಕಾ ಮತ್ತು ಎಸ್ವೈವಿಎಂ ತಂಡಗಳೊಂದಿಗೆ ಮೈಸೂರು ವಾರಿಯರ್ಸ್ ಆರು ಓವರ್ ಗಳ ಟೆನ್ನಿಸ್ ಬಾಲ್ ಕಿಕೆಟ್ ಆಡಿತು.