ಬೆಂಗಳೂರು, ಫೆಬ್ರವರಿ 08: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ನೇತೃತ್ವದ ಅಂಡರ್ 19 ತಂಡ ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ಸರಣಿ ವೇಳೆ ಡಿನ್ನರ್ ಮಾಡಲು ಕಾಸು ಸಿಗದೆ ಒದ್ದಾಡಿದ ಪ್ರಸಂಗ ನಡೆದಿದೆ.
ಭಾರತ ಹಾಗೂ ಇಂಗ್ಲೆಂಡ್ ಅಂಡರ್ 19 ತಂಡಗಳ ನಡುವೆ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗು ಟೆಸ್ಟ್ ಸರಣಿ ಆಡಿದರು. ಆದರೆ, ಬಿಸಿಸಿಐಯ ನಿಯಮಾವಳಿ, ಅಪನಗದೀಕರಣದ ದೆಸೆಯಿಂದ ಸರಿಯಾದ ಸಮಯಕ್ಕೆ ಕೈಗೆ ಮೊತ್ತ ಸಿಗದೆ ಪರದಾಡಿದ್ದಾರೆ.

ಹೀಗಾಗಿ, ಆಟಗಾರರು ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭತ್ಯೆ ನೀಡಲು ಆಗಿಲ್ಲ. ಹೀಗಾಗಿ ದೊಡ್ಡ ಹೋಟೆಲ್ ನಲ್ಲಿ 1,500 ರು ಕೊಟ್ಟು ಬರ್ಗರ್ ತಿನ್ನಲು ಆಗದ ಆಟಗಾರರು ಪರದಾಡಿದ್ದಾರೆ.