ಮುಂಬೈ, ಜನವರಿ 4: ಮುಂಬೈಯ ಬಾಂದ್ರಾ ಕರ್ಲಾ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ ಮುಂಬೈ vs ಕರ್ನಾಟಕ, 4ನೇ ಸುತ್ತಿನ ಎಲೈಟ್ ಗ್ರೂಪ್ 'ಎ' ಮತ್ತು 'ಬಿ' ರಣಜಿ ಟ್ರೋಫಿ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ 24 ರನ್ ಮುನ್ನಡೆ ಸಾಧಿಸಿದೆ. ಮುಂಬೈ ದ್ವಿತೀಯ ಇನ್ನಿಂಗ್ಸ್ನಲ್ಲೂ ಕರ್ನಾಟಕದ ಅಭಿಮನ್ಯು ಮಾರಕ ಬೌಲಿಂಗ್ ದಾಳಿ ನಡೆಸಿದ್ದಾರೆ.
ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್ ಬೇಕು!
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ, ಪೃಥ್ವಿ ಶಾ 29, ನಾಯಕ ಸೂರ್ಯಕುಮಾರ್ ಯಾದವ್ 77, ಶಶಾಂಕ್ ಅಥರ್ಡೆ 35, ತುಷಾರ್ ದೇಶಪಾಂಡೆ 10 ರನ್ನೊಂದಿಗೆ 55.5 ಓವರ್ಗೆ 194 ರನ್ ಬಾರಿಸಿತು. ಮುಂಬೈ ಮೊದಲ ಇನ್ನಿಂಗ್ಸ್ನಲ್ಲಿ ಭುಜದ ನೋವಿಗೆ ತುತ್ತಾಗಿರುವ ಪೃಥ್ವಿ ಶಾ ದ್ವಿತೀಯ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ.
2004ರ ಪಾಕಿಸ್ತಾನ ವಿರುದ್ಧದ ಐತಿಹಾಸಿಕ ಸರಣಿಗೆ ಗಂಗೂಲಿಯೇ ಕಾರಣ; ರಶೀದ್ ಲತೀಫ್
ಗುರಿ ಬೆನ್ನತ್ತಿದ ಕರ್ನಾಟಕದಿಂದ ರವಿಕುಮಾರ್ ಸಮರ್ಥ್ 86, ದೇವದತ್ ಪಡಿಕ್ಕಲ್ 32, ಶ್ರೇಯಸ್ ಗೋಪಾಲ್ 31, ಶರತ್ ಬಿಆರ್ 46 ರನ್ ಸೇರಿಸಿದ್ದರಿಂದ ರಾಜ್ಯ ತಂಡ 68.5 ಓವರ್ನಲ್ಲಿ 218 ರನ್ ಬಾರಿಸಿ ಮುನ್ನಡೆ ಸಾಧಿಸಿತು. ಮುಂಬೈ ದ್ವಿತೀಯ ಇನ್ನಿಂಗ್ಸ್ ಆಡುತ್ತಿದ್ದು, 25 ಓವರ್ಗೆ 4 ವಿಕೆಟ್ ಕಳೆದು 49 ರನ್ ಗಳಿಸಿತ್ತು.
ಪ್ರಿಯಾಮ್ ಶತಕ, ದ.ಆಫ್ರಿಕಾ ಯು-19 ವಿರುದ್ಧ ಭಾರತ ಯು-19ಗೆ ಜಯ
ಮುಂಬೈ ಆರಂಭಿಕ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ 2, ವಿ ಕೌಶಿಕ್ 3, ರೋನಿತ್ ಮೋರೆ 2, ಪ್ರತೀಕ್ ಜೈನ್ 2, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು. ಕರ್ನಾಟಕ ಇನ್ನಿಂಗ್ಸ್ನಲ್ಲಿ ಮುಂಬೈಯ ತುಷಾರ್ ದೇಶಪಾಂಡೆ, ರಾಯ್ಸ್ಟನ್ ಡಯಾಸ್ ತಲಾ 1, ಶಶಾಂಕ್ ಅಥರ್ಡೆ 5, ಶಮ್ಸ್ ಮಲಾನಿ 3 ವಿಕೆಟ್ನೊಂದಿಗೆ ಗಮನ ಸೆಳೆದರು.