For Quick Alerts
ALLOW NOTIFICATIONS  
For Daily Alerts
 

2024ರ ರಣಜಿ ಟ್ರೋಫಿ ಗೆದ್ದ ಮುಂಬೈ ತಂಡಕ್ಕೆ 'ಡಬಲ್' ಜಾಕ್‌ಪಾಟ್!

ಗುರುವಾರ, ಮಾರ್ಚ್ 14ರಂದು ಮುಂಬೈನ ವಾಂಖೆಡೆಯಲ್ಲಿ ಮುಕ್ತಾಯಗೊಂಡ 2023-24ರ ರಣಜಿ ಟ್ರೋಫಿ ಪಂದ್ಯಾವಳಿಯ ಫೈನಲ್‌ನಲ್ಲಿ ಮುಂಬೈ ತಂಡವು ವಿದರ್ಭ ವಿರುದ್ಧ 169 ರನ್‌ಗಳ ಗೆಲುವು ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿಯಿತು.

ಇದೀಗ ಮುಂಬೈ ತಂಡ ರಣಜಿ ಟ್ರೋಫಿ ಫೈನಲ್‌ನಲ್ಲಿ ಗೆಲುವು ಸಾಧಿಸಿದ ನಂತರ, ಬಹುಮಾನದ ಹಣವನ್ನು ದ್ವಿಗುಣಗೊಳಿಸುವುದಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(MCA) ಘೋಷಿಸಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿದರ್ಭವನ್ನು 169 ರನ್‌ಗಳಿಂದ ಸೋಲಿಸಿ 2023/24ರ ರಣಜಿ ಟ್ರೋಫಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

Ranji Trophy 2024 Champion Mumbai To Receive Double Prize Money for Winning Ranji Trophy

ಎಂಟು ವರ್ಷಗಳ ನಂತರ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ಮುಂಬೈ ತಂಡವು ಬಹುಮಾನದ ಮೊತ್ತವಾಗಿ ಬಿಸಿಸಿಐನಿಂದ 5 ಕೋಟಿ ರೂಪಾಯಿಗಳನ್ನು ಪಡೆಯಲಿದೆ ಎಂದು ಎಂಸಿಎ ಹೇಳಿದೆ.

2015-16ರಲ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಗೆದ್ದಿದ್ದ ಮುಂಬೈ ತಂಡ, ಇದೀಗ ದಾಖಲೆಯ 42ನೇ ಬಾರಿ ಪ್ರಶಸ್ತಿ ಜಯಿಸಿದೆ. ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ರಣಜಿ ಟ್ರೋಫಿ ಗೆದ್ದ ಮುಂಬೈನ 26ನೇ ನಾಯಕರೆನಿಸಿದರು.

ಮುಂಬೈ ತಂಡದ ಆಟಗಾರರು ಬಿಸಿಸಿಐ ನೀಡಿದ 5 ಕೋಟಿ ರೂಪಾಯಿಗೆ ಹೆಚ್ಚುವರಿಯಾಗಿ, ಮತ್ತೆ 5 ಕೋಟಿ ರೂಪಾಯಿ ಬಹುಮಾನ ಪಡೆಯಲಿದ್ದಾರೆ ಎಂದು ಎಂಸಿಎ ಕಾರ್ಯದರ್ಶಿ ಅಜಿಂಕ್ಯ ನಾಯಕ್ ಖಚಿತಪಡಿಸಿದ್ದಾರೆ.

"ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಧ್ಯಕ್ಷ ಅಮೋಲ್ ಕಾಳೆ ಮತ್ತು ಅಪೆಕ್ಸ್ ಕೌನ್ಸಿಲ್ ರಣಜಿ ಟ್ರೋಫಿ ಬಹುಮಾನವನ್ನು ದ್ವಿಗುಣಗೊಳಿಸಲು ನಿರ್ಧರಿಸಿದ್ದಾರೆ".

"ಮುಂಬೈ ರಣಜಿ ಟ್ರೋಫಿ ವಿಜೇತ ತಂಡಕ್ಕೆ ಎಂಸಿಎ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ನೀಡಲಿದೆ. ಎಂಸಿಎಗೆ ಇದು ಉತ್ತಮ ವರ್ಷವಾಗಿದ್ದು, ಅಸೋಸಿಯೇಷನ್ ​​7 ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ನಾವು ಬಿಸಿಸಿಐ ಪಂದ್ಯಾವಳಿಗಳಲ್ಲಿ ಎಲ್ಲಾ ವಯೋಮಾನದ ಗುಂಪುಗಳಲ್ಲಿ ನಾಕೌಟ್ ಹಂತವನ್ನು ತಲುಪಿದ್ದೇವೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮುಂಬೈ ತಂಡದ ಮುಖ್ಯ ಕೋಚ್ ಓಂಕಾರ್ ಸಾಲ್ವಿ ಬಹುಮಾನದ ಹಣವನ್ನು ದ್ವಿಗುಣಗೊಳಿಸುವ ಎಂಸಿಎನ ಕ್ರಮವನ್ನು ಶ್ಲಾಘಿಸಿದರು. ಈ ನಿರ್ಧಾರವು ಇತರ ಉದ್ಯೋಗಗಳು ಮತ್ತು ಆದಾಯದ ಮೂಲಗಳನ್ನು ಹೊಂದಿರದ ಯುವ ಆಟಗಾರರಿಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ.

Ranji Trophy 2024 Champion Mumbai To Receive Double Prize Money for Winning Ranji Trophy

"ಎಲ್ಲಾ ಆಟಗಾರರಿಗೆ, ಇತ್ತೀಚಿನ ದಿನಗಳಲ್ಲಿ ಉದ್ಯೋಗಗಳನ್ನು ಒದಗಿಸುವ ಸಂಸ್ಥೆಗಳು ಬಹಳ ಕಡಿಮೆ ಇವೆ. ಯುವಕರಿಗೆ, ಫ್ರಾಂಚೈಸಿ ಕ್ರಿಕೆಟ್‌ನತ್ತ ಹೆಚ್ಚಿನ ಆಮಿಷವಿದೆ, ಅಲ್ಲಿ ಸಾಕಷ್ಟು ಹಣವೂ ಇದೆ".

"ಬಿಸಿಸಿಐ ಆ ದಿಟ್ಟ ಹೆಜ್ಜೆ ಇಡುತ್ತಿದೆ ಮತ್ತು ಅದರೊಂದಿಗೆ ಹಣವನ್ನು ಸಂಗ್ರಹಿಸುತ್ತಿದೆ. ಎಂಸಿಎ ಆ ಮೊತ್ತವನ್ನು ಸರಿಗಟ್ಟಲು ಆ ಹೆಜ್ಜೆ ಮುಂದಿಡುವುದು ಕೆಲವು ಉದ್ಯೋಗಗಳು ಅಥವಾ ಸ್ವಲ್ಪ ಗಳಿಕೆಯನ್ನು ಹೊಂದಿರದ ಆಟಗಾರರಿಗೆ ಉತ್ತಮ ಸಹಾಯವಾಗಿದೆ," ಎಂದು ಓಂಕಾರ್ ಸಾಲ್ವಿ ಹೇಳಿದರು.

"ಇದು ಖಂಡಿತವಾಗಿಯೂ ಸ್ಫೂರ್ತಿಯಾಗಿದೆ ಮತ್ತು ಇದು ಆಂತರಿಕವಾಗಿರಬೇಕು. ವಿತ್ತೀಯ ಸಹಾಯವು ಅವರಿಗೆ ಆ ಭದ್ರತೆಯನ್ನು ನೀಡುತ್ತದೆ ಮತ್ತು ಇದು ಖಂಡಿತವಾಗಿಯೂ ಅವರನ್ನು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸ್ಥಿರಗೊಳಿಸುತ್ತದೆ. ಆದ್ದರಿಂದ ಆಟಗಾರರು ಆಟಕ್ಕೆ ಹೆಚ್ಚಿನದನ್ನು ನೀಡಬಹುದು," ಎಂದು ಓಂಕಾರ್ ಸಾಲ್ವಿ ತಿಳಿಸಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ 538 ರನ್‌ಗಳ ಸವಾಲಿನ ಗುರಿಯನ್ನು ನೀಡಿದ ಮುಂಬೈ ತಂಡವು ವಿದರ್ಭ ತಂಡವನ್ನು 368 ರನ್‌ಗಳಿಗೆ ಆಲೌಟ್ ಮಾಡಿತು. 3ನೇ ದಿನದಂದೇ 169 ರನ್‌ಗಳಿಂದ ಗೆದ್ದ ಪ್ರಶಸ್ತಿಯನ್ನು ಬಾಚಿಕೊಂಡಿತು.

ಮುಂಬೈನ ಮುಶೀರ್ ಖಾನ್ ಫೈನಲ್‌ನಲ್ಲಿ ಅದ್ಭುತ ಶತಕ ಬಾರಿಸಿದರು ಮತ್ತು ಎರಡು ವಿಕೆಟ್‌ಗಳನ್ನು ಪಡೆದಿದ್ದಕ್ಕಾಗಿ 'ಪಂದ್ಯಶ್ರೇಷ್ಠ ಆಟಗಾರ' ಪ್ರಶಸ್ತಿಗೆ ಭಾಜನರಾದರು.

Story first published: Thursday, March 14, 2024, 19:49 [IST]
Other articles published on Mar 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+