ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು 2024ರ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಮುಂಬೈ ತಂಡವನ್ನು ಸೇರಿಕೊಳ್ಳುತ್ತಿರುವುದರಿಂದ ಮುಂಬೈಗೆ ಗಮನಾರ್ಹ ಉತ್ತೇಜನ ಪಡೆದುಕೊಂಡಿದೆ.
ಪದೇ ಪದೇ ಬೆನ್ನು ಸೆಳೆತದಿಂದಾಗಿ ಶ್ರೇಯಸ್ ಅಯ್ಯರ್ ಪ್ರಸಕ್ತ ರಣಜಿ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಗಮನಾರ್ಹವಾಗಿ, ಮುಂಬೈ ತಂಡ ಮಂಗಳವಾರ, ಫೆಬ್ರವರಿ 27ರಂದು ಬರೋಡಾ ವಿರುದ್ಧ ಡ್ರಾ ಸಾಧಿಸಿದ ನಂತರ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿತು.

ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡವು ಮಾರ್ಚ್ 2ರಂದು ಪ್ರಾರಂಭವಾಗುವ ಸೆಮಿಫೈನಲ್ನಲ್ಲಿ ತಮಿಳುನಾಡು ವಿರುದ್ಧ ಸೆಣಸಲಿದೆ.
ಶ್ರೇಯಸ್ ಅಯ್ಯರ್ ಅವರು ಬ್ಯಾಟಿಂಗ್ ಮಾಡುವಾಗ ಬೆನ್ನುನೋವಿನಿಂದ ಬಳಲುತ್ತಿದ್ದ ಕಾರಣ, ಮುಂಬೈನ ಕೊನೆಯ ಎರಡು ರಣಜಿ ಟ್ರೋಫಿ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.
ಅಲ್ಲದೆ, ಅವರು ಕ್ರಮವಾಗಿ ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು ಮತ್ತು 35, 13, 27, ಮತ್ತು 29 ರನ್ಗಳನ್ನು ಗಳಿಸಿದ್ದರಿಂದ, ಕೊನೆಯ ಮೂರು ಪಂದ್ಯಗಳಿಗೆ ತಂಡದಿಂದ ಹೊರಬಿದ್ದರು.
"ಹೌದು, ಶ್ರೇಯಸ್ ಅಯ್ಯರ್ ಅವರು ಈಗ ಫಿಟ್ ಆಗಿದ್ದಾರೆ ಮತ್ತು ಮುಂಬೈನ ರಣಜಿ ಸೆಮಿಫೈನಲ್ ಪಂದ್ಯಕ್ಕೆ ಲಭ್ಯವಾಗಿದ್ದಾರೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ದೃಢಪಡಿಸಿದೆ," ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದೇ ವೇಳೆ, ಮುಂಬೈ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯಕ್ಕೆ ಭಾರತ ತಂಡದ ಆಫ್-ಸ್ಪಿನ್ನರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಸಾಯಿ ಸುದರ್ಶನ್ ಮರಳುವುದರಿಂದ ತಮಿಳುನಾಡು ತಂಡ ಕೂಡ ದೊಡ್ಡ ಬಲ ಪಡೆದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸೆಮಿಫೈನಲ್ ಪಂದ್ಯವು ಐದನೇ ದಿನಕ್ಕೆ ಮುನ್ನಡೆದರೆ, ಮಾರ್ಚ್ 6ರಂದು ಮುಕ್ತಾಯಗೊಳ್ಳುವುದರಿಂದ, ಭಾರತ ತಂಡದಿಂದ ವಾಷಿಂಗ್ಟನ್ ಸುಂದರ್ ಅವರನ್ನು ಬಿಡುಗಡೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ. ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಮಾರ್ಚ್ 7ರಂದು ಧರ್ಮಶಾಲಾದಲ್ಲಿ ಆಡಲಿದೆ.
ಮತ್ತೊಂದೆಡೆ, ಸಾಯಿ ಸುದರ್ಶನ್ ಅವರು ಬೆನ್ನು ಸೆಳೆತ ಅನುಭವಿಸುತ್ತಿದ್ದರು ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯು ಕ್ರಿಕೆಟ್ ಪುನರಾರಂಭಿಸಲು ಅವರಿಗೆ ಫಿಟ್ನೆಸ್ ಅನುಮತಿಯನ್ನು ನೀಡಿದೆ.
"ಅವರು (ಸಾಯಿ ಸುದರ್ಶನ್) ಬ್ಯಾಟಿಂಗ್ ಆರಂಭಿಸಿದ್ದಾರೆ ಮತ್ತು ಬೆಂಗಳೂರಿನ ಎನ್ಸಿಎಯಲ್ಲಿ ಪಂದ್ಯದ ಸಿಮ್ಯುಲೇಶನ್ಗೆ ಒಳಗಾಗಲಿದ್ದಾರೆ. ಅವರು ಶೀಘ್ರದಲ್ಲೇ ತಮಿಳುನಾಡು ತಂಡವನ್ನು ಸೇರಿಕೊಳ್ಳಲಿದ್ದಾರೆ," ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಬಹಿರಂಗಪಡಿಸಿದೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಮುಂಬೈ ಮತ್ತು ಬರೋಡಾ ನಡುವೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯವು 5ನೇ ದಿನ ಡ್ರಾದಲ್ಲಿ ಕೊನೆಗೊಂಡಿತು. ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ್ದ ಕಾರಣ, ಮುಂಬೈ ಮುಂದಿನ ಸುತ್ತಿಗೆ ಮುನ್ನಡೆಯುವುದನ್ನು ನಿರ್ಧರಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 384 ರನ್ ಕಲೆಹಾಕಲು ಮುಶೀರ್ ಖಾನ್ ಅವರ ಚೊಚ್ಚಲ ಅಜೇಯ 203 ರನ್ಗಳ ದ್ವಿಶತಕ ನೆರವಾಯಿತು.
ಇದೇ ವೇಳೆ, ಬೌಲಿಂಗ್ನಲ್ಲಿ ಬರೋಡಾ ಪರ ಭಾರ್ಗವ್ ಭಟ್ ನಿರ್ಣಾಯಕ ಏಳು ವಿಕೆಟ್ ಗಳಿಕೆಯೊಂದಿಗೆ ಭರವಸೆ ಮೂಡಿಸಿದರೆ, ನಿನಾದ್ ರಥ್ವಾ ಮೂರು ವಿಕೆಟ್ ಪಡೆದರು.
ಬರೋಡಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಶಾಶ್ವತ್ ರಾವತ್ (124) ಮತ್ತು ನಾಯಕ ವಿಷ್ಣು ಸೋಲಂಕಿ (136) ಅವರ ಪ್ರಯತ್ನದಿಂದ 348 ರನ್ ಗಳಿಸಿತು. ಇನ್ನು ಬೌಲಿಂಗ್ನಲ್ಲಿ ಮುಂಬೈ ಪರ ಶಮ್ಸ್ ಮುಲಾನಿ ನಿರ್ಣಾಯಕ 4 ವಿಕೆಟ್ಗಳನ್ನು ಪಡೆದರು.
ಕ್ವಾರ್ಟರ್ಫೈನಲ್ ಪಂದ್ಯವು ರಣಜಿ ಟ್ರೋಫಿಯ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿತು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮುಂಬೈನ ವೇಗದ ಬೌಲರ್ಗಳಾದ ತುಷಾರ್ ದೇಶಪಾಂಡೆ (123) ಮತ್ತು ತನುಷ್ ಕೋಟ್ಯಾನ್ (ಅಜೇಯ 120) 10 ಮತ್ತು 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಶತಕ ಗಳಿಸಿದ ಎರಡನೇ ಬ್ಯಾಟಿಂಗ್ ಜೋಡಿಯಾದರು.
ಅಂತಿಮವಾಗಿ, ಮುಂಬೈ 569 ರನ್ ಗಳಿಸಿತು ಮತ್ತು ಬರೋಡ ಗೆಲುವಿಗೆ 606 ರನ್ಗಳ ಗುರಿಯನ್ನು ನಿಗದಿಪಡಿಸಿತು. ಮೂರನೇ ಇನ್ನಿಂಗ್ಸ್ನಲ್ಲಿಯೂ ಭಾರ್ಗವ್ ಭಟ್ ಹೀರೋ ಆಗಿದ್ದರು, ಅದೇ ಪಂದ್ಯದಲ್ಲಿ ತಮ್ಮ ಎರಡನೇ ಏಳು ವಿಕೆಟ್ ಸಾಧನೆಯನ್ನು ಪಡೆದರು.
ಇದೇ ವೇಳೆ ಅಂತಿಮ ಇನ್ನಿಂಗ್ಸ್ನಲ್ಲಿ ಪ್ರಿಯಾಂಶು ಮೊಲಿಯಾ ಅರ್ಧಶತಕ ಗಳಿಸಿದರ ಹೊರತಾಗಿಯೂ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು.