ದಿಂಡಿಗಲ್, ಡಿ.02: ತಮಿಳುನಾಡು ಹಾಗೂ ಪಂಜಾಬ್ನ ನಡುವೆ ನಡೆದಿರುವ ರಣಜಿ ಟ್ರೋಫಿ ಪಂದ್ಯದ ವೇಳೆ ಆಸ್ಟ್ರೇಲಿಯಾ ಅಂಪೈರ್ ರೊಬ್ಬರಿಗೆ ತಲೆಗೆ ಪೆಟ್ಟು ಬಿದ್ದ ಘಟನೆ ನಡೆದಿದೆ.
ಮಂಗಳವಾರ ಆರಂಭವಾದ ರಣಜಿ ಪಂದ್ಯದ ವೇಳೆ ಆಸ್ಟ್ರೇಲಿಯಾದ ಅಂಪೈರ್ ಜಾನ್ ವಾರ್ಡ್ ತಲೆಗೆ ಚೆಂಡು ತಾಗಿದೆ. ತೀವ್ರವಾಗಿ ಗಾಯಗೊಂಡ ಅಂಪೈರ್ ಜಾನ್ ರನ್ನು ತಕ್ಷಣವೇ ಸಮೀಪ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. [ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ]
ಪಂಜಾಬ್ ತಂಡದ ಬ್ಯಾಟ್ಸ್ ಮನ್ ರಾಜ್ವಿಂದರ್ ಸಿಂಗ್ ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ರಾಜ್ವಿಂದರ್ ಹೊಡೆದ ಚೆಂಡು ನೇರವಾಗಿ ಅಂಪೈರ್ ವಾರ್ಡ್ ಅವರ ತಲೆಗೆ ಅಪ್ಪಳಿಸಿದೆ. ವಾರ್ಡ್ರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ದಿಂಡಿಗಲ್ ಪೊಲೀಸರು ತಿಳಿಸಿದ್ದಾರೆ. [ದುರಂತ ಅಂತ್ಯ ಕಂಡ ಕೊಡಗಿನ ಕ್ರಿಕೆಟರ್]