ಬೆಂಗಳೂರು, ಜನವರಿ 17: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮತ್ತು ರಾಜಸ್ತಾನ ತಂಡಗಳು ಮುಖಾಮುಖಿಯಾಗಿವೆ. ಕರ್ನಾಟಕ್ಕೆ ಗೆಲ್ಲಲು ಇನ್ನು 139 ರನ್ ಗಳ ಅಗತ್ಯವಿದೆ.
ಭಾರತ vs ಆಸೀಸ್, ಏಕದಿನ: ಭಾರತದ XI ಆಟಗಾರರ ಸಂಭಾವ್ಯ ತಂಡ
ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿರುವ ಕರ್ನಾಟಕ ಗುರುವಾರ (ಜನವರಿ 17) ದಿನದಾಂತ್ಯಕ್ಕೆ 18 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದು 45 ರನ್ ಪೇರಿಸಿತ್ತು. ರವಿ ಕುಮಾರ್ ಸಮರ್ಥ್ 16, ದೇಗಾ ನಿಶ್ಚಲ್ 1, ಕೃಷ್ಣಮೂರ್ತಿ ಸಿದ್ಧಾರ್ಥ್ 5 ರನ್ ನೊಂದಿಗೆ ನಿರ್ಗಮಿಸಿದ್ದಾರೆ. ಕರುಣ್ ನಾಯರ್ (18 ರನ್) ಮತ್ತು ರೋನಿತ್ ಮೋರೆ (5) ಕ್ರೀಸ್ನಲ್ಲಿದ್ದಾರೆ.
Ranji Trophy Quarter final 3 :
— Johns Benny (@CricCrazyJohns) January 17, 2019
- Karnataka need 139 runs to win.
- Rajasthan need 7 wickets to win.
- Two days left.
- live in Star 1.#KARvRAJ #RanjiTrophy
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟಿದ್ದ ರಾಜಸ್ಥಾನ ಮೊದಲ ಇನ್ನಿಂಗ್ಸ್ನಲ್ಲಿ 224 ಮತ್ತು ದ್ವಿತೀಯ ಇನ್ನಿಂಗ್ಸ್ನಲ್ಲಿ 222 ರನ್ ಪೇರಿಸಿತ್ತು. ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 263 ರನ್ ಪೇರಿಸುವುದರೊಂದಿಗೆ 39 ರನ್ ಮುನ್ನಡೆಯಲ್ಲಿತ್ತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಕರ್ನಾಟಕ ಅಮೂಲ್ಯ 3 ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿರುವುದು ಹಿನ್ನಡೆಯಾಗಿ ಕಾಣಿಸಿದೆ. ಆದರೆ ಎಚ್ಚರಿಕೆ ಆಟ ತಂಡಕ್ಕೆ ಗೆಲುವು ತಂದುಕೊಡಬಲ್ಲದು.