ಎರಡು ತಿಂಗಳ ಹಿಂದೆ...
ಎರಡು ತಿಂಗಳ ಹಿಂದೆ ಭಾರತದ ಎರಡನೇ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯ ದಿನದಂದು ರವಿಶಾಸ್ತ್ರಿ ಅಂದಿನ ತಂಡದ ಆಟಗಾರರಿಗೆ ಶುಭಾಶಯವನ್ನು ಕೋರಿದ್ದರು. ಆ ಟ್ವೀಟ್ಗೆ ರವಿಶಾಸ್ತ್ರಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯನ್ನು ಟ್ಯಾಗ್ ಮಾಡಿದ್ದರು. ಅದಕ್ಕೆ ಯುವರಾಜ್ ಸಿಂಗ್ ಧನ್ಯವಾದವನ್ನು ತಿಳಿಸುತ್ತಾ 'ನೀವು ನನ್ನನ್ನು ಮತ್ತು ಧೋನಿಯನ್ನೂ ಟ್ಯಾಗ್ ಮಾಡಬಹುದಿತ್ತು' ಎಂದು ಪ್ರತಿಕ್ರಿಯಿಸಿದ್ದರು.
ಶುಭಾಶಯ ಕೋರಿದ ಯುವರಾಜ್
ಗುರುವಾರ ಭಾರತದ ಕ್ರಿಕೆಟ್ ಅಭಿಮಾನಿಗಳು ಮೊದಲ ವಿಶ್ವಕಪ್ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಟ್ವಿಟ್ಟರ್ನಲ್ಲಿ ಹಿರಿಯ ಆಟಗಾರರಿಗೆ ಶುಭಾಶಯವನ್ನು ಕೋರುತ್ತಾ ಟ್ವೀಟ್ ಮಾಡಿದ್ದರು.
ರವಿಶಾಸ್ತ್ರಿ ಪ್ರತಿಕ್ರಿಯೆ
ಆದರೆ ಈ ಟ್ವೀಟ್ಗೆ ಯಾವುದೇ ಹಿರಿಯ ಆಟಗಾರರನ್ನು ಯುವಿ ಟ್ಯಾಗ್ ಮಾಡಿರಲಿಲ್ಲ. ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ ರವಿ ಶಾಸ್ತ್ರಿ, ಧನ್ಯವಾದ ಜ್ಯೂನಿಯರ್, ನೀವು ನನ್ನನ್ನು ಮತ್ತು ಕಪಿಲ್ ದೇವ್ ಅವರನ್ನು ಟ್ಯಾಗ್ ಮಾಡಬಹುದಿತ್ತು ಎಂದು ಬರೆದುಕೊಂಡಿದ್ದಾರೆ.
|
ಹೊಗಳಿದ ಯುವರಾಜ್ ಸಿಂಗ್
ಇದಕ್ಕೆ ಮತ್ತೆ ಯುವರಾಜ್ ಸಿಂಗ್ ನಗುತ್ತಾ ಪ್ರತಿಕ್ರಿಯಿಸಿದ್ದಾರೆ. ನೀವು ಅಂಗಳದೊಳಗೆ ಮತ್ತು ಹೊರಗೆ ದಿಗ್ಗಜ. ಕಪಿಲ್ ಪಾಜಿ(ಕಪಿಲ್ ದೇವ್) ಎಲ್ಲವನ್ನೂ ಒಳಗೊಂಡ ವಿಭಿನ್ನ ವ್ಯಕ್ತಿತ್ವ ಹೊಂದಿದವರು ಎಂದು ಪ್ರತಿಕ್ರಿಯಿಸಿದ್ದಾರೆ. ಯುವರಾಜ್ ಸಿಂಗ್ ಮತ್ತು ರವಿ ಶಾಸ್ತ್ರಿ ನಡುವಿನ ಟ್ವೀಟ್ ಸಂವಾದ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿತ್ತು.