For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಇಶಾನ್, ಶ್ರೇಯಸ್ ಔಟ್; ಮೌನ ಮುರಿದ ರವಿಶಾಸ್ತ್ರಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು 2023-24ರ ಋತುವಿನ (ಅಕ್ಟೋಬರ್ 1, 2023ರಿಂದ ಸೆಪ್ಟೆಂಬರ್ 30, 2024ರವರೆಗೆ) ಭಾರತ ಹಿರಿಯ ಪುರುಷರ ಕ್ರಿಕೆಟ್ ತಂಡದ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.

ಇದೇ ವೇಳೆ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ. ಗಮನಾರ್ಹವಾಗಿ, ಈ ಇಬ್ಬರು ಆಟಗಾರರಿಗೆ 2024ರ ರಣಜಿ ಟ್ರೋಫಿ ಪಂದ್ಯಾವಳಿ ಆಡುವಂತೆ ಬಿಸಿಸಿಐ ಸೂಚಿಸಿದ್ದರೂ ಆಡಿರಲಿಲ್ಲ. ಇದರಿಂದಾಗಿ ಬಿಸಿಸಿಐ ಗ್ರೇಡ್ ಆಟಗಾರರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

Team announced for test series, this player returns after 15 months

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಲವು ಭಾರತೀಯ ಅಂತಾರಾಷ್ಟ್ರೀಯ ಆಟಗಾರರು ಕೆಂಪು-ಚೆಂಡಿನ ಕ್ರಿಕೆಟ್‌ಗೆ ಆದ್ಯತೆ ನೀಡದಿರುವುದು ಮತ್ತು ಎಚ್ಚರಿಕೆಗಳನ್ನು ನಿರ್ಲಕ್ಷಿಸಿರುವ ಬಗ್ಗೆ ಪ್ರತಿಕ್ರಿಯಿಸಿದೆ. ಈ ಮೂಲಕ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್‌ಗೆ ನೇರವಾಗಿ ಚಾಟಿ ಬೀಸಿದೆ.

ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದರೂ ದೇಶೀಯ ಕ್ರಿಕೆಟ್ ಆಡಲು ನಿರಾಕರಿಸಿದ್ದಾರೆ ಮತ್ತು ಅಶಿಸ್ತು ತೋರಿದ್ದಕ್ಕಾಗಿ ಬೆಲೆ ತೆತ್ತಿದ್ದಾರೆ ಎಂದು ವರದಿಯಾಗಿದೆ.

Team announced for test series, this player returns after 15 months

ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್, ಕಳೆದ ವರ್ಷ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅರ್ಧದಲ್ಲೇ ತೊರೆದ ನಂತರ, ಫೆಬ್ರವರಿ ಕೊನೆಯಲ್ಲಿ ಡಿವೈ ಪಾಟೀಲ್ ಟಿ20 ಪಂದ್ಯಾವಳಿಯಲ್ಲಿ ಕ್ರಿಕೆಟ್ ಆಡಲು ಮರಳಿದರು. 2024ರ ರಣಜಿ ಟ್ರೋಫಿ ಪಂದ್ಯಗಳನ್ನು ನಿರ್ಲಕ್ಷಿಸಿ ಐಪಿಎಲ್‌ನತ್ತ ಗಮನ ಹರಿಸಿದರು.

ಇನ್ನು ಮುಂಬೈ ತಂಡದ ರಣಜಿ ಟ್ರೋಫಿ ಪಂದ್ಯವನ್ನು ಕಳೆದುಕೊಳ್ಳಲು ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್‌ಗೆ ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ಎನ್‌ಸಿಎಯ ಫಿಟ್‌ನೆಸ್ ತಜ್ಞರು ಬಿಸಿಸಿಐಗೆ ಮಾಹಿತಿ ನೀಡಿದ್ದರು.

ಇದೇ ವೇಳೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ರೆಡ್-ಬಾಲ್ ಮತ್ತು ಟೆಸ್ಟ್ ಕ್ರಿಕೆಟ್‌ನ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಬಿಸಿಸಿಐ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಹೊಸ ಒಪ್ಪಂದಗಳು ಬಿಡುಗಡೆಯಾದ ತಕ್ಷಣ ಅವರು ಎರಡು ಟ್ವೀಟ್‌ಗಳನ್ನು ಮಾಡಿದ್ದಾರೆ.

ತಮ್ಮ ಮೊದಲ ಟ್ವೀಟ್‌ನಲ್ಲಿ ಇದು ಬಿಸಿಸಿಐನಿಂದ ಪ್ರಬಲ ಸಂದೇಶವಾಗಿದೆ ಎಂದು ಬರೆದಿದ್ದಾರೆ. ಎರಡನೇ ಟ್ವೀಟ್‌ನಲ್ಲಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್‌ಗೆ ಸ್ಫೂರ್ತಿಯುತ ಸಂದೇಶ ಕಳುಹಿಸಿದ್ದಾರೆ. ಈ ಕ್ಷಣವನ್ನು ಬಲವಾದ ಪುನರಾಗಮನಕ್ಕೆ ಪ್ರೇರೇಪಿಸಲು ಇಂಧನವಾಗಿ ಬಳಸಿಕೊಳ್ಳುವಂತೆ ತಿಳಿ ಹೇಳಿದ್ದಾರೆ.

"ವಾರ್ಷಿಕ ಗುತ್ತಿಗೆ ಒಪ್ಪಂದಗಳೊಂದಿಗೆ ಆಟವನ್ನು ಬದಲಾಯಿಸುವ ಕ್ರಮಕ್ಕಾಗಿ ಬಿಸಿಸಿಐ ಮತ್ತು ಜಯ್ ಶಾಗೆ ದೊಡ್ಡ ಚಪ್ಪಾಳೆ. ಈ ವರ್ಷದ ನಂತರ ಡೌನ್ ಅಂಡರ್‌ಗೆ ಸಜ್ಜಾಗುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಟೆಸ್ಟ್ ಕ್ರಿಕೆಟ್ ಮತ್ತು ದೇಶೀಯ ಕ್ರಿಕೆಟ್‌ಗೆ ಒತ್ತು ನೀಡಲು ಶಕ್ತಿಯುತ ಸಂದೇಶವಾಗಿದ್ದು, ನಮ್ಮ ಪ್ರೀತಿಯ ಕ್ರೀಡೆಯ ಭವಿಷ್ಯಕ್ಕೆ ಸರಿಯಾದ ಧ್ವನಿಯನ್ನು ಹೊಂದಿಸುತ್ತದೆ," ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.

"ಕ್ರಿಕೆಟ್ ಆಟದಲ್ಲಿ ಪುನರಾಗಮನ ಚೈತನ್ಯವನ್ನು ವ್ಯಾಖ್ಯಾನಿಸುತ್ತವೆ. ಚಿನ್-ಅಪ್ ಶ್ರೇಯಸ್ ಅಯ್ಯರ್ ಮತ್ತು ಇಶನ್ ಕಿಶನ್. ಆಳವಾಗಿ ಇಳಿಯಿರಿ, ಸವಾಲುಗಳನ್ನು ಎದುರಿಸಿ ಮತ್ತು ಇನ್ನಷ್ಟು ಬಲವಾಗಿ ಹಿಂತಿರುಗಿ. ನಿಮ್ಮ ಹಿಂದಿನ ಸಾಧನೆಗಳು ಪರಿಮಾಣವನ್ನು ಹೇಳುತ್ತವೆ ಮತ್ತು ನೀವು ಮತ್ತೊಮ್ಮೆ ಜಯಿಸುವುದರಲ್ಲಿ ನನಗೆ ಸಂದೇಹವಿಲ್ಲ," ಎಂದು ರವಿಶಾಸ್ತ್ರಿ ಧೈರ್ಯ ತುಂಬಿದ್ದಾರೆ.

ಗಮನಾರ್ಹವೆಂದರೆ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಹೆಸರನ್ನು ಹೇಳದೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೆಂಪು ಬಾಲ್ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡುವ ಮತ್ತು ಹಸಿವನ್ನು ತೋರಿಸುವ ಕ್ರಿಕೆಟಿಗರನ್ನು ತಂಡದಲ್ಲಿ ಸೇರಿಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಹೇಳಿದ್ದರು.

ರೋಹಿತ್ ಶರ್ಮಾ ಒಳಗೊಂಡ ಟೀಮ್ ಮ್ಯಾನೇಜ್‌ಮೆಂಟ್, ಸಹಾಯಕ ಸಿಬ್ಬಂದಿ, ಆಯ್ಕೆಗಾರರು ಯಾರು ಟೆಸ್ಟ್ ಕ್ರಿಕೆಟ್‌ಗಾಗಿ ಹಸಿದಿದ್ದಾರೆ ಮತ್ತು ಯಾರು ಇಲ್ಲ ಎಂಬುದನ್ನು ಸುಲಭವಾಗಿ ನೋಡುತ್ತಿದ್ದಾರೆ ಎಂದು ರೋಹಿತ್ ಶರ್ಮಾ ಗಮನಸೆಳೆದಿದ್ದರು.

Story first published: Thursday, February 29, 2024, 10:59 [IST]
Other articles published on Feb 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+