ಮುಂಬೈ, ಜುಲೈ 19: ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸುವುದಕ್ಕೂ ಮುನ್ನ ಟೀಂ ಇಂಡಿಯಾದ ನೂತನ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರು ಬುಧವಾರದಂದು ಜಂಟಿ ಸುದ್ದಿಗೋಷ್ಠಿ ನಡೆಸಿದರು.
'ತಂಡ ಹಾಗೂ ತಂಡದ ಆಟಗಾರರು ಮುಖ್ಯ, ಕೋಚ್ ಗಳು ಇಲ್ಲಿ ಅಮುಖ್ಯ' ಎಂದು ರವಿಶಾಸ್ತ್ರಿ ಹೇಳಿದರು. ಶ್ರೀಲಂಕಾ ಪ್ರವಾಸದ ವೇಳೆ ಮೂರು ಟೆಸ್ಟ್, ಐದು ಏಕದಿನ ಪಂದ್ಯ ಹಾಗೂ ಏಕೈಕ ಟಿ20 ಪಂದ್ಯವನ್ನಾಡಲಿದೆ.

ವಿರಾಟ್ ಕೊಹ್ಲಿ: ಯಾವುದೇ ಸಂಬಂಧವಾದರೂ ಅರ್ಥ ಮಾಡಿಕೊಂಡು ಉತ್ತಮ ಸಂವಹನ ಮುಖ್ಯ. ನಾವಿಬ್ಬರೂ ಈ ಹಿಂದೆ ಒಟ್ಟಿಗೆ ಕಾರ್ಯ ನಿರ್ವಹಿಸಿದ್ದೇವೆ. ನಮ್ಮಿಂದ ಏನು ನಿರೀಕ್ಷಿಸಲಾಗುತ್ತಿದೆ ಎಂಬ ಅರಿವಿದೆ. ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವ ಭರವಸೆ ನೀಡುತ್ತೇನೆ ಎಂದರು.