For Quick Alerts
ALLOW NOTIFICATIONS  
For Daily Alerts
 

ರವೀಂದ್ರ ಜಡೇಜಾ ಬ್ಯಾಟಿಂಗ್ ಬಗ್ಗೆ ಸೌರವ್ ಗಂಗೂಲಿ ಹೇಳಿಕೆ

Ravindra Jadeja's 'Improvement With Bat' Impresses Sourav Ganguly | JADEJA | SAURAV GANGULY
Ravindra Jadejas Improvement With Bat Impresses Sourav Ganguly

ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಮೊತ್ತವನ್ನು ಬೆನ್ನತ್ತಿ ಗೆಲುವು ಕಂಡಿದೆ. ವೆಸ್ಟ್‌ ಇಂಡೀಸ್‌ ನೀಡಿದ ದೊಡ್ಡ ಮೊತ್ತದ ಗುರಿಯನ್ನು ಟೀಮ್ ಇಂಡಿಯಾ ರೋಚಕವಾಗಿ ಗೆದ್ದುಕೊಂಡಿತು. ಮಧ್ಯಮ ಕ್ರಮಾಂಕದ ವೈಫಲ್ಯದ ನಂತರ ನಾಯಕ ವಿರಾಟ್ ಕೊಹ್ಲಿಗೆ ಆಲ್‌ರೌಂಡರ್ ರವೀಂದ್ರ ಜಡೇಜಾ ಬೆಂಬಲವಾಗ ನಿಂತರು. ಮಾತ್ರವಲ್ಲ ಅಂತಿಮವಾಗಿ ತಂಡದ ಗೆಲುವಿನ ವರೆಗೂ ಕ್ರೀಸ್‌ನಲ್ಲಿದ್ದು ಗೆಲುವಿಗೆ ಕಾರಣವಾದರು.

ರವೀಂದ್ರ ಜಡೇಜಾ ಅವರ ಈ ಜವಾಬ್ಧಾರಿಯುತ ಇನ್ನಿಂಗ್ಸ್ನ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜಡೇಜಾ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ದಾರೆ. ರವೀಂದ್ರ ಜಡೇಜಾ ಅನಿವಾರ್ಯ ಸಂದರ್ಭದಲ್ಲಿ ತಂಡಕ್ಕೆ ಬೆಂಬಲವಾಗಿ ನಿಂತು ಆಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಗೆಲುವಿನ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, "ಮತ್ತೊಂದು ಜಯ. ಒತ್ತಡದ ಪಂದ್ಯದಲ್ಲಿ ಅತ್ಯುತ್ತಮ ಆಟ ಮೂಡಿ ಬಂದಿದೆ. ರವೀಂದ್ರ ಜಡೇಜಾ ಬ್ಯಾಟಿಂಗ್ ಗಮನಾರ್ಹ" ಎಂದುಬ ಟ್ವೀಟ್‌ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

ರವೀಂದ್ರ ಜಡೇಜಾ ಏಕದಿನ ಪಂದ್ಯಗಳಲ್ಲಿ ಈಗಾಗಲೇ 11 ಅರ್ಧ ಶತಕಗಗಳನ್ನು ಬಾರಿಸಿದ್ದಾರೆ. ಏಕದಿನದಲ್ಲಿ 2118ರನ್ ಗಳಿಸಿದ್ದು ಟೆಸ್ಟ್‌ನಲ್ಲಿ 1844ರನ್ ಗಳಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಜಡೇಜಾ, ನಿಗದಿತ ಓವರ್‌ಗಳಲ್ಲಿ ಉತ್ತಮವಾಗಿ ಅಡಲು ಶಕ್ತನಾಗಿದ್ದೇನೆ ಎಂದು ನನಗೆ ನಾನೇ ಸಾಬೀತುಪಡಿಸಿಕೊಳ್ಳಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.

ರವೀಂದ್ರ ಜಡೇಜಾ ಒಟ್ಟಾರೆಯಾಗಿ 25 ಅರ್ಧ ಶತಕ ದಾಖಲಿದ್ದಾರೆ. (14 ಏಕದಿನ 11 ಟೆಸ್ಟ್‌) ಜೊತೆಗೆ ಒಂದು ಶತಕವನ್ನೂ ಬಾರಿಸಿದ್ದಾರೆ.

Story first published: Monday, December 23, 2019, 20:14 [IST]
Other articles published on Dec 23, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+