ಸೋಮವಾರ, ಮಾರ್ಚ್ 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
ಪಂಜಾಬ್ ಕಿಂಗ್ಸ್ ನೀಡಿದ್ದ 177 ರನ್ಗಳ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 19.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿ ಐಪಿಎಲ್ 2024ರ ಮೊದಲ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಜಾನಿ ಬೈರ್ಸ್ಟೋವ್ ಮತ್ತು ಶಿಖರ್ ಧವನ್ ಉತ್ತಮ ಆರಂಭದ ಮುನ್ಸೂಚನೆ ನೀಡಿದ್ದರು. ಒಂದು ಕ್ಷಣ ಆರ್ಸಿಬಿ ಅಭಿಮಾನಿಗಳು ಮೌನವಾಗಿದ್ದರು.
ಆದರೆ, ಜಾನಿ ಬೈರ್ಸ್ಟೋವ್ ಅವರ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಪಡೆಯುತ್ತಿದ್ದಂತೆಯೇ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಹರ್ಷೋದ್ಗಾರದಿಂದ ಚೀರಾಡಿದರು.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಫುಟ್ಬಾಲ್ನಲ್ಲಿ ಬೆಂಗಳೂರು ಎಫ್ಸಿ ತಂಡವನ್ನು ಬೆಂಬಲಿಸುತ್ತಿರಲಿ, ಭಾರತದಲ್ಲೇ ಬೆಂಗಳೂರು ಅತ್ಯಂತ ಭಾವೋದ್ರಿಕ್ತ ಅಭಿಮಾನಿ ಬಳಗವನ್ನು ಹೊಂದಿದೆ. ತವರಿನ ಅಭಿಮಾನಿಗಳ ಆರ್ಭಟ ಕ್ರೀಡಾಂಗಣದ ತುಂಬೆಲ್ಲಾ ಪ್ರತಿಧ್ವನಿಸುತ್ತದೆ.

ಅದರಲ್ಲಿಯೂ, ಆರ್ಸಿಬಿ ಅಭಿಮಾನಿಗಳು ಉತ್ತಮ ಮತ್ತು ಕಳಪೆ ಪ್ರದರ್ಶನ ನೀಡಿದಾಗಲೂ ತಮ್ಮ ಅಚಲ ಬೆಂಬಲಕ್ಕಾಗಿ ಎದ್ದು ಕಾಣುತ್ತಾರೆ. ಮಹಿಳಾ ಪ್ರೀಮಿಯರ್ ಲೀಗ್ ಗೆಲುವಿನ ನಂತರದ ಇತ್ತೀಚಿನ ಅನ್ಬಾಕ್ಸ್ ಈವೆಂಟ್ನಲ್ಲಿನ ಸಂಭ್ರಮಾಚರಣೆಗಳು ಅವರ ನಿಷ್ಠೆಗೆ ಉದಾಹರಣೆಯಾಗಿದೆ.
ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಪ್ರಮುಖ ಮೂರನೇ ಓವರ್ನಲ್ಲಿ, ಮೊಹಮ್ಮದ್ ಸಿರಾಜ್ ಅವರು ಪಂಜಾಬ್ ಕಿಂಗ್ಸ್ನ ಸ್ಫೋಟಕ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ಗೆ ಬೌಲಿಂಗ್ ಮಾಡಿದರು.
ಮೊಹಮ್ಮದ್ ಸಿರಾಜ್ ಅವರ ಗುಡ್ ಲೆಂತ್ ಬಾಲ್ನಲ್ಲಿ ಬೈರ್ ಸ್ಟೋವ್ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿದರು. ನಂತರದ ಎಸೆತದಲ್ಲಿ ಬೇರ್ಸ್ಟೋವ್ ಮತ್ತೊಂದು ಬೌಂಡರಿ ಗಳಿಸಿದರು. ಇದು ಅವರ ಆಕ್ರಮಣಕಾರಿ ಉದ್ದೇಶವನ್ನು ಸೂಚಿಸಿತ್ತು.
ಆದಾಗ್ಯೂ, ಮೊಹಮ್ಮದ್ ಸಿರಾಜ್ ಮೂರನೇ ಎಸೆತದಲ್ಲಿ ತಮ್ಮ ಲೆಂಗ್ತ್ ಬಾಲ್ ಅನ್ನು ಸರಿಹೊಂದಿಸಿ, ಅದನ್ನು ಶಾರ್ಟ್ ಲೆಂಗ್ತ್ ಬೌಲಿಂಗ್ ಮಾಡಿದರು. ಜಾನಿ ಬೈರ್ಸ್ಟೋವ್ ಅವರು ಪುಲ್ ಶಾಟ್ಗೆ ಯತ್ನಿಸಿ, ಸಮಯ ತಪ್ಪಿ ಚೆಂಡನ್ನು ಕವರ್ ಮೇಲೆ ಬಾರಿಸಿದರು ಆಗ ಅಲ್ಲಿದ್ದ ವಿರಾಟ್ ಕೊಹ್ಲಿ ಸುಲಭವಾಗಿ ಕ್ಯಾಚ್ ಪಡೆದರು.
ಈ ವರ್ಷ ಎಂ ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಮೊದಲ ವಿಕೆಟ್ ಕಬಳಿಸುತ್ತಿದ್ದಂತೆ ಇಡೀ ಕ್ರೀಡಾಂಗಣ ಸಂಭ್ರಮದಲ್ಲಿ ಮುಳುಗಿತ್ತು. ಈ ವೇಳೆ ಆರ್ಸಿಬಿ ಅಭಿಮಾನಿಗಳ ಆರ್ಭಟವನ್ನು ಡೆಸಿಬಲ್ ಮೀಟರ್ ಧ್ವನಿಯನ್ನು ರೆಕಾರ್ಡ್ ಮಾಡಿದ್ದು, ಗರಿಷ್ಠ 124 ಡೆಸಿಬಲ್ ದಾಖಲಿಸಿದೆ.
ವಿರಾಟ್ ಕೊಹ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಗ್ಲೆನ್ ಮ್ಯಾಕ್ಸ್ವೆಲ್ಗೆ ಡಿಕ್ಕಿ ಹೊಡೆಯುತ್ತಿದ್ದರಿಂದ ಇದು ಆತಂಕದಿಂದ ಕೂಡಿತ್ತು. ಆದರೆ ಚೆಂಡು ಕೊಹ್ಲಿ ಕೈ ಸೇರಿದಾಗ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.
ಜಾನಿ ಬೈರ್ಸ್ಟೋವ್ ಅವರ ಆರಂಭಿಕ ವಿಕೆಟ್ ನಂತರ, ನಾಯಕ ಶಿಖರ್ ಧವನ್ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಪಂಜಾಬ್ ಕಿಂಗ್ಸ್ ತಂಡವನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಪಂಜಾಬ್ ಮಾಜಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅವರ ಬೌಲಿಂಗ್ನಲ್ಲಿ ಇಬ್ಬರನ್ನೂ ಔಟ್ ಮಾಡಿದರು.
ಗ್ಲೆನ್ ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ ಅಪಾಯಕಾರಿಯಾಗಿದ್ದ ಶಿಖರ್ ಧವನ್ ಅವರ ಕ್ಯಾಚ್ ಅನ್ನು ಮತ್ತೊಮ್ಮೆ ವಿರಾಟ್ ಕೊಹ್ಲಿ ಪಡೆದರು. ಆಗ ಗ್ಲೆನ್ ಮ್ಯಾಕ್ಸ್ವೆಲ್ ಭಾವೋದ್ರಿಕ್ತವಾಗಿ ಸಂಭ್ರಮಿಸಿದರು.
ಪ್ರತಿ ಕ್ರೀಡಾ ತಂಡಕ್ಕೂ, ಅವರ ಸಂಕಲ್ಪವನ್ನು ಬಲಪಡಿಸುವುದು ಅವರ ಅಭಿಮಾನಿಗಳು. ಸ್ಟ್ಯಾಂಡ್ಗಳಿಂದ ಉತ್ಸಾಹಭರಿತ ಚೀರ್ಸ್ ಮತ್ತು ದೃಢವಾದ ಬೆಂಬಲವು ತಂಡ ಮತ್ತು ಆಟಗಾರರನ್ನು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿಯಲ್ಲಿ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್ ಅವರು ಕೆಲವು ವರ್ಷಗಳಲ್ಲಿ ಕೆಲವು ಶೋಮ್ಯಾನ್ ಆಟಗಾರರಾಗಿ ಸಾಕ್ಷಿಯಾಗಿದ್ದಾರೆ. ಅವುಗಳಲ್ಲಿ ಪ್ರತಿಯೊಂದೂ ಪ್ರೇಕ್ಷಕರ ಶಕ್ತಿಯ ಮೇಲೆ ಪ್ರಭಾವ ಬೀರಿದೆ. ಇದು ಅವರ ಆಟಕ್ಕೆ ಹೆಚ್ಚುವರಿ ಪ್ರೋತ್ಸಾಹ ಸೇರಿಸುತ್ತದೆ. ಹೀಗಾಗಿ ಆರ್ಸಿಬಿ ತಂಡಕ್ಕೆ ಎಂ ಚಿನ್ನಸ್ವಾಮಿ ಅಚ್ಚುಮೆಚ್ಚಾಗಿದೆ.