
ಭುವಿಗೆ ಯಾಕೆ ಸ್ಥಾನ ನೀಡುತ್ತಿಲ್ಲ?
ಭುವನೇಶ್ವರ್ ಕುಮಾರ್ಗೆ ಯಾಕೆ ಸ್ಥಾನ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟಾಗ ಸಿಕ್ಕ ಅಂಶವೆಂದರೆ, ಭುವನೇಶ್ವರ್ ಕುಮಾರ್ ಇತ್ತೀಚೆಗೆ ಲಾಂಗೆಸ್ಟ್ ಫಾರ್ಮ್ಯಾಟ್ನಲ್ಲಿ ಆಡಿಲ್ಲ. 2020ರಲ್ಲಿ ಐಪಿಎಲ್ ವೇಳೆ ಭುವಿ ಗಾಯಗೊಂಡ ಬಳಿಕ ಯಾವುದೇ ಟೆಸ್ಟ್ ಪಂದ್ಯಗಳಲ್ಲಿ ಆಡಿಲ್ಲ. ಹೀಗಾಗಿ ಟೆಸ್ಟ್ ಕ್ರಿಕೆಟ್ ಅದರಲ್ಲೂ ಸುದೀರ್ಘ ಪ್ರವಾಸ ಸರಣಿಗೆ ಭುವಿ ಸೂಕ್ತರಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಂದುಕೊಂಡಿದೆ. ಭುವಿ ಮೂಲೆಗುಂಪಾಗಲು ಇದೊಂದು ಕಾರಣ.

ತಂಡದಲ್ಲಿ ಉತ್ತಮ ಬೌಲರ್ಗಳಿದ್ದಾರೆ
ಭುವಿಗೆ ಸ್ಥಾನ ಸಿಗದಿರಲು ಮತ್ತೊಂದು ಕಾರಣವೆಂದರೆ ಭಾರತ ತಂಡದಲ್ಲಿ ಈಗಾಗಲೇ ಪ್ರತಿಭಾವಂತ ಬೌಲರ್ಗಳಿದ್ದಾರೆ. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಇವರೆಲ್ಲ ಸದ್ಯ ಟೆಸ್ಟ್ ತಂಡದಲ್ಲಿರುವವರು. ಇವರಲ್ಲಿ ಹೆಚ್ಚಿನವರು ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದವರು. ಹೀಗಾಗಿ ಇವರನ್ನು ತಂಡದಿಂದ ಕೈಬಿಡಲು ಬಿಸಿಸಿಐ ಮನಸು ಮಾಡಿಲ್ಲ.

ಪ್ರಥಮದರ್ಜೆ ಕ್ರಿಕೆಟ್ ಆಡಿ 3 ವರ್ಷ ಕಳೆದಿದೆ
ಭುವನೇಶ್ವರ್ ಕುಮಾರ್ ಇತ್ತೀಚೆಗೆ ಪ್ರಥಮದರ್ಜೆ ಕ್ರಿಕೆಟ್ ಕೂಡ ಆಡಿದ್ದಿಲ್ಲ. ಭುವಿ ಕೊನೇ ಪ್ರಥಮದರ್ಜೆ ಕ್ರಿಕೆಟ್ ಆಡಿದ್ದು ಜನವರಿ 2018ರಲ್ಲಿ. ಆವತ್ತು ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ಬರ್ಗ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಡಿದ್ದರು. ಆವತ್ತಿನಿಂದಲೂ ಭುವಿಯನ್ನು ವೈಟ್ಬಾಲ್ಗೆ ಹೆಚ್ಚು ಪರಿಗಣಿಸಲಾಗುತ್ತಿತ್ತು. ಅಲ್ಲದೆ 2020ರ ಐಪಿಎಲ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದ ವೇಳೆ ಭುವಿ ಸ್ನಾಯು ಸೆಳೆತಕ್ಕೀಡಾಗಿ ದೀರ್ಘ ಕಾಲ ಕ್ರಿಕೆಟ್ ಮೈದಾನದಿಂದ ಹೊರಗುಳಿಸಿದ್ದರು.


Click it and Unblock the Notifications












