For Quick Alerts
ALLOW NOTIFICATIONS  
For Daily Alerts
 

ವೀರೇಂದ್ರ ಸೆಹ್ವಾಗ್ ಮತ್ತೆ ಬ್ಯಾಟ್ ಹಿಡಿಯುತ್ತಿದ್ದಾರೆ

ಮೈಸೂರು, ಅಕ್ಟೋಬರ್.21: ಭಾರತ ಕಂಡ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ಹೊಡಿ ಬಡಿ ಆಟವನ್ನು ಮತ್ತೆ ನೋಡಬಹುದು. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರೂ ರಣಜಿ ಪಂದ್ಯಗಳನ್ನು ಆಡಲಿದ್ದಾರೆ. ಸೆಹ್ವಾಗ್ ಅಟವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಕಣ್ಣು ತುಂಬಿಕೊಳ್ಳಬಹುದು.

ಹರ್ಯಾಣದ ಪರ ವೀರೂ ಬ್ಯಾಟ್ ಹಿಡಿಯಲಿದ್ದಾರೆ. ಅಕ್ಟೋಬರ್ 22 ರಿಂದ ಕರ್ನಾಟಕದ ವಿರುದ್ಧ ಆರಂಭವಾಗಲಿರುವ ರಣಜಿ ಪಂದ್ಯದಲ್ಲಿ ಸೆಹ್ವಾಗ್ ಅಭಿಮಾನಿಗಳ ಎದುರು ಕಾಣಿಸಿಕೊಳ್ಳಲಿದ್ದಾರೆ. ದೆಹಲಿ ತಂಡದಲ್ಲಿದ್ದ ಸೆಹ್ವಾಗ್ ಈ ಬಾರಿ ಹರ್ಯಾಣದ ಪರ ಆಡುತ್ತಿದ್ದಾರೆ.[ಸೆಹ್ವಾಗ್‌ರಲ್ಲೂ ಭಯ ಹುಟ್ಟಿಸಿದ್ದ ಆ ಬೌಲರ್ ಯಾರು?]

Retired Virender Sehwag set to play in Mysuru

ಅಕ್ಟೋಬರ್ 21 ರಂದು ಸೆಹ್ವಾಗ್ ಅಂತಾರಾಷ್ಟ್ರೀಯ ಬದುಕಿಗೆ ನಿವೃತ್ತಿ ಹೇಳಿದ್ದರು. ಇದೀಗ ಹರ್ಯಾಣದ ನಾಯಕರಾಗಿ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಕ್ರೀಡಾಂಗಣದಲ್ಲಿ ಬ್ಯಾಟ್ ಬೀಸಲಿದ್ದಾರೆ.[ನಿವೃತ್ತಿಯ ನಿಜ ಕಾರಣ ಪತ್ರದಲ್ಲಿ ಬಿಚ್ಚಿಟ್ಟ ಸೆಹ್ವಾಗ್]

ಈಗಾಗಲೇ ಹರ್ಯಾಣ ತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದ್ದು ಹಾಲಿ ಚಾಂಪಿಯನ್ ಕರ್ನಾಟಕ್ಕೆ ಸೆಹ್ವಾಗ್ ನೇತೃತ್ವದಲ್ಲಿ ಸವಾಲು ಒಡ್ಡಲಿದೆ. ಅಕ್ಟೋಬರ್ 22 ರಿಂದ ಬೆಳಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+