
ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ
ಕಾರು ಅಪಘಾತಕ್ಕೆ ಒಳಗಾದ ಬಳಿಕ ಅವರನ್ನು ತಕ್ಷಣವೇ ಸಾಕ್ಷಮ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಅದಶದ ಬಳಿಕ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಇಲ್ಲಿಯೇ ಪಂತ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರದ ವೇಳೆ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಂಡು ಬಂದಿದೆ ಎಂದು ಪಂತ್ ಅವರ ಕುಟುಂಬದ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಮಾಹಿತಿ ನೀಡಿದ ಪಂತ್ ಕುಟುಂಬದ ಆಪ್ತ
"ನಿನ್ನೆಯಿಂದ ಪಂತ್ ಅವರ ಆರೋಗ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದೆ. ತಕ್ಷಣಕ್ಕೆ ಅವರನ್ನು ಎಲ್ಲಿಗೂ ಸ್ಥಳಾಂತರಿಸುವ ಯೋಜನೆಗಳು ಇಲ್ಲ"ಎಂದು ರಿಷಭ್ ಪಂತ್ ಅವರ ಕುಟುಂಬದ ಆಪ್ರ ಉಮೇಶ್ ಕುಮಾರ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಇನ್ನು ಕಳೆದ ಶುಕ್ರವಾರವೇ ಪಂತ್ ಹಣೆಗೆ ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದ್ದು ಇಂದು ಅದರ ಮೊದಲ ಡ್ರೆಸ್ಸಿಂಗ್ ಕೂಡ ಮಾಡಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಇನ್ನು ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಕೂಡ ಪಂತ್ ಚಿಕಿತ್ಸೆ ಪಡೆಯುತ್ತಿರುವ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಮೂಳೆಕಟ್ಟು ಗಾಯದ ಚಿಕಿತ್ಸೆಯ ಬಗ್ಗೆ ಇಬ್ಬರು ಕೂಡ ಸೇರಿ ಎಲ್ಲಿ ಚಿಕಿತ್ಸೆ ನೀಡಬೇಕು ಎಂದು ನಿರ್ಧರಿಸಲಿದ್ದಾರೆ ಎಂದು ಕೂಡ ಉಮೇಶ್ ಕುಮಾರ್ ಮಾಹಿತಿ ಹಂಚಿಕಕೊಂಡಿದ್ದಾರೆ.

ಪಂತ್ ಆರೋಗ್ಯ ವಿಚಾರಿಸಿದ ಸ್ಟಾರ್ಗಳು
ಇನ್ನು ರಿಷಭ್ ಪಂತ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಚೇತರಿಕೆಗಾಗಿ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳು ಹಾಗೂ ಅನೇಕ ತಾರೆಯರು ಶುಭಹಾರೈಸಿದ್ದಾರೆ. ಕ್ರಿಕೆಟರ್ ನಿತೀಶ್ ರಾಣಾ, ಬಾಲಿವುಡ್ ನಟರಾದ ಅನಿಲ್ ಕಪೂರ್ ಹಾಗೂ ಅನುಪಮ್ ಖೇರ್ ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಭಾನುವಾರ ಆಸ್ಪತ್ರೆಗೆ ಭೆಟಿ ನೀಡಿ ಪಂತ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅನಿಲ್ ಕಪೂರ್, "ಪಂತ್ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆತನನ್ನು ನಾವು ಅಭಿಮಾನಿಗಳಾಗಿ ಭೇಟಿಯಾದೆವು. ಆದಷ್ಟು ಶೀಘ್ರವಾಗಿ ಆತ ಚೇತರಿಸಿಕೆ ಕಾಣಲು ಪ್ರಾರ್ಥಿಸುತ್ತೇವೆ ಆತ ಮತ್ತೆ ಆಡುವುದನ್ನು ನೋಡಲು ಬಯಸುತ್ತೇನೆ" ಎಂದಿದ್ದಾರೆ ಅನಿಲ್ ಕಪೂರ್.
ಇನ್ನು ಅನುಪಮ್ ಖೇರ್ ಮಾತನಾಡಿ "ಎಲ್ಲವೂ ಚೆನ್ನಾಗಿದೆ. ನಾವು ಪಂತ್ ಅವರನ್ನು ಅವರ ತಾಯಿ ಹಾಗೂ ಕುಟುಂಬಸ್ಥರನ್ನು ಭೇಟಿಯಾದೆವು. ಎಲ್ಲರೂ ಕೂಡ ಆರೋಗ್ಯವಾಗಿದ್ದಾರೆ. ಆತನನ್ನು ನಾವು ಬಹಳ ನಗಿಸಿದೆವು" ಎಂದು ಅನಿಲ್ ಕಪೂರ್ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಅನುಪಮ್ ಖೇರ್ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications
