ರಿಷಭ್ ಪಂತ್ ಅಬ್ಬರದ ಆಟ
ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ 407 ರನ್ಗಳ ಬೃಹತ್ ಗುರಿಯನ್ನು ಗೆಲುವಿಗಾಗಿ ನೀಡಿತ್ತು. ಈ ಪಂದ್ಯದ ಅಂತಿಮ ದಿನದಂದು ಭಾರತ ನಾಯಕ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡಿತ್ತು. ಆದರೆ ರಿಷಭ್ ಪಂತ್ ಅಬ್ಬರದ ಆಟದಿಂದಾಗಿ ಅಸಾಧ್ಯ ಗೆಲುವು ಸಾಧಿಸುವ ಭರವಸೆ ಮೂಡುವಂತೆ ಮಾಡಿತ್ತು.
ಆತುರ ಮಾಡಿ ಎಡವಿದ ಪಂತ್
ಈ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 118 ಎಸೆತಗಳಲ್ಲಿ 97 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದ್ದರು. ಚೇತೇಶ್ವರ್ ಪೂಜಾರ ಜೊತೆಗೆ ಪಂತ್ ಬ್ಯಾಟಿಂಗ್ ಮುಂದಯವರಿಸುತ್ತಿದ್ದ ವೇಳೆ ಒಂದು ಹಂತದಲ್ಲಿ ಭಾರತ 250 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ನೇಥನ್ ಲಿಯಾನ್ ಎಸೆತದಲ್ಲಿ ಬೌಂಡರಿ ಸಿಡಿಸಿ ಶತಕ ಗಳಿಸುವ ಪ್ರಯತ್ನದಲ್ಲಿ ವಿಫಲವಾಗಿ ಪಂತ್ ವಿಕೆಟ್ ಒಪ್ಪಿಸಿ ಹೊರನಡೆದಿದ್ದರು. ಬಳಿಕ ಪಂದ್ಯದ ಫಲಿತಾಂಶ ಡ್ರಾದೊಂದಿಗೆ ಅಂತ್ಯವಾಗಿತ್ತು.
30 ನಿಮಿಷ ಆಡಿದ್ದರೆ ಗೆಲುವು ಸಾಧ್ಯವಿತ್ತು
ಸ್ಪೋರ್ಟ್ಸ್ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಿಷಭ್ ಪಂತ್ ಇನ್ನು 30 ನಿಮಿಷಗಳ ಕಾಲ ನಾನು ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲುವು ಸಾಧಿಸಬಹುದಾಗಿತ್ತು. ಆದರೆ ಈ ಇನ್ನಿಂಗ್ಸ್ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮತ್ತಷ್ಟು ಉತ್ತಮವಾಗಿ ಆಡಿ ಸರಣಿ ಗೆಲುವಿಗೆ ಈ ಮೂಲಕ ಸಹಕಾರಿಯಾಯಿತು ಎಂದು ರಿಷಭ್ ಪಂತ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿ ಮೇಲೆ ಪಂತ್ ಚಿತ್ತ
ಆಸ್ಟ್ರೇಲಿಯಾ ವಿರುದ್ಧದ ಸುದೀರ್ಘ ಪ್ರವಾಸ ಮುಗಿಸಿಕೊಂಡು ತವರಿಗೆ ಮರಳಿರುವ ರಿಷಭ್ ಪಂತ್ ಈಗ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೇಲೆ ಚಿತ್ತ ನೆಟ್ಟಿದ್ದಾರೆ. ಈ ಸರಣಿ ಫೆಬ್ರವರಿ 5 ರಿಂದ ಆರಂಭವಾಗಲಿದ್ದು ತವರಿನಲ್ಲೂ ಟೀಮ್ ಇಂಡಿಯಾ ಪರವಾಗಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದ್ದಾರೆ.