For Quick Alerts
ALLOW NOTIFICATIONS  
For Daily Alerts
 

ಚೆನ್ನೈಗೆ ರೋಹಿತ್ ಶರ್ಮಾ ಎಂಟ್ರಿ? ಸಿಇಒ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ 2024 ಗಾಗಿ ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಿತು. ಇದೀಗ ಟೂರ್ನಿಗೆ ಸಿದ್ಧತೆ ಆರಂಭವಾಗಿದೆ. ಆದರೆ ಈ ನಡುವೆ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ ಮಾಜಿ ನಾಯಕ ರೋಹಿತ್ ಶರ್ಮಾ ಭಾರಿ ಸುದ್ದಿಯಲ್ಲಿದ್ದಾರೆ.

ಮುಂಬೈ ಫ್ರಾಂಚೈಸಿ ಇತ್ತೀಚೆಗೆ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್‌ ತಂಡಕ್ಕೆ ಚಾಂಪಿಯನ್ ಪಟ್ಟಕ್ಕೇ ಏರಿಸಿದ್ದರು. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಸೇರುತ್ತಿದ್ದಂತೆ, ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಕಸಿದುಕೊಳ್ಳಲಾಯಿತು. ಅಲ್ಲದೆ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲಾಯಿತು. ಹೀಗಿರುವಾಗ ರೋಹಿತ್‌ ಶರ್ಮಾ ಬೇಸರಗೊಂಡಿದ್ದಾರೆ. ಹೀಗಿರುವಾಗ ಟ್ರೆಡಿಂಗ್‌ ವೇಳೆ ರೋಹಿತ್ ಮುಂಬೈ ತಂಡವನ್ನು ತೊರೆಯುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.

Rohit Sharma entry to Chennai? What did the CEO say?

ಟ್ರೇಡ್ ವಿಂಡೋ ಅಡಿಯಲ್ಲಿ ರೋಹಿತ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಹೋಗಬಹುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ಈ ಎಲ್ಲಾ ವರದಿಗಳ ನಡುವೆ, ಚೆನ್ನೈ ಫ್ರಾಂಚೈಸಿ ಅಂತಹ ವರದಿಗಳನ್ನು ತಿರಸ್ಕರಿಸಿದೆ.

ಫ್ರಾಂಚೈಸಿ ಸಿಇಒ ಕಾಸಿ ವಿಶ್ವನಾಥನ್ ಹರಾಜಿನ ಮಧ್ಯದಲ್ಲಿ ತಮ್ಮ ತಂಡವು ರೋಹಿತ್ ಅವರನ್ನು ಆಯ್ಕೆ ಮಾಡುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳಿದರು. ಈ ಸುದ್ದಿಗಳೆಲ್ಲ ವದಂತಿಗಳು ಎಂದು ತಿಳಿಸಿದರು.

ಈ ಬಗ್ಗೆ ಮಾತನಾಡಿರುವ ವಿಶ್ವನಾಥನ್, 'ಪ್ರಧಾನವಾಗಿ ನಾವು ಆಟಗಾರರನ್ನು ಟ್ರೇಡ್ ಮಾಡುವುದಿಲ್ಲ. ಮುಂಬೈ ಇಂಡಿಯನ್ಸ್‌ನೊಂದಿಗೆ ವ್ಯಾಪಾರ ಮಾಡಲು ನಮ್ಮಲ್ಲಿ ಆಟಗಾರರೂ ಇಲ್ಲ. ನಾವು ಅವರನ್ನು ಸಂಪರ್ಕಿಸಿಲ್ಲ ಮತ್ತು ನಾವು ಉದ್ದೇಶಿಸಿಲ್ಲ. ಚೆನ್ನೈ ತಂಡವು ಎಂಐ ಆಟಗಾರರನ್ನು ವ್ಯಾಪಾರ ಮಾಡಲು ನೋಡುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಅವರು ತಳ್ಳಿಹಾಕಿದರು. ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಂಡದ ನಾಯಕರಾಗಿದ್ದಾರೆ.

Rohit Sharma entry to Chennai? What did the CEO say?

ರೋಹಿತ್ ಪ್ರದರ್ಶನ ಹೇಗಿದೆ?

2013 ರಿಂದ ಮುಂಬೈ ತಂಡದ ನಾಯಕರಾಗಿರುವ ರೋಹಿತ್ ಅವರು ಮುಂಬೈ ಇಂಡಿಯನ್ಸ್ ಅನ್ನು 5 ಬಾರಿ ಐಪಿಎಲ್ ಚಾಂಪಿಯನ್ ಆಗಿ ಮಾಡಿದ್ದರು. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ರೋಹಿತ್ ಫಾರ್ಮ್ ತುಂಬಾ ಕಳಪೆಯಾಗಿತ್ತು. ರೋಹಿತ್ 2023 ರ ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 20.75 ಸರಾಸರಿ ಮತ್ತು 132.80 ಸ್ಟ್ರೈಕ್ ರೇಟ್‌ನಲ್ಲಿ 332 ರನ್ ಗಳಿಸಿದರು. 2022 ರಲ್ಲಿ, ಅವರು 14 ಪಂದ್ಯಗಳಲ್ಲಿ 19.14 ರ ಸರಾಸರಿಯಲ್ಲಿ ಮತ್ತು 120.18 ರ ಸ್ಟ್ರೈಕ್ ರೇಟ್‌ನಲ್ಲಿ 268 ರನ್ ಗಳಿಸಿದರು. ಸರಾಸರಿಯಲ್ಲಿ ರೋಹಿತ್ ಫಾರ್ಮ್‌ನಲ್ಲಿ ಖಚಿತ ಕುಸಿತ ಕಂಡುಬಂದಿದೆ.

ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಈಗಾಗಲೇ ಅಸಮಾಧಾನದ ಹೊಗೆ ಎದ್ದಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದ್ದರಿಂದ ಮುಂಬೈ ತಂಡದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಮುಂಬೈ ಇಂಡಿಯನ್ಸ್‌ ತಂಡದ ಯಾರ್ಕರ್‌ ಸ್ಪೇಷಲಿಸ್ಟ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರಲ್ಲೂ ಅಸಮಾಧಾನ ಕಂಡು ಬಂದಿದೆ. ಸೂರ್ಯಕುಮಾರ್ ಅವರಿಗೆ ಬೇರೆ ತಂಡಗಳು ಆಫರ್‌ ನೀಡಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Story first published: Saturday, December 23, 2023, 11:28 [IST]
Other articles published on Dec 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+