ಗುರುವಾರ, ಜೂನ್ 27ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್ಗಳ ಅಂತರದಿಂದ ಸೋಲಿಸಿದ ಭಾರತ ತಂಡ ಫೈನಲ್ಗೆ ಪ್ರವೇಶಿಸಿತು.
ಶನಿವಾರ, ಜೂನ್ 29ರಂದು ಬಾರ್ಬಡೋಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಮತ್ತೊಂದು ಅಜೇಯ ತಂಡವಾದ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯ ಗೆದ್ದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕಳೆದ ವರ್ಷದ ಹೃದಯವಿದ್ರಾವಕ ಪ್ರಯಾಣವನ್ನು ಪ್ರತಿಬಿಂಬಿಸಲು ಭಾವುಕರಾಗಿದ್ದರು.
ಪಂದ್ಯ ಗೆಲ್ಲುವವರೆಗೂ ಮೈದಾನದಲ್ಲಿ ಲವಲವಿಕೆಯಿಂದ ಇದ್ದ ಟೀಮ್ ಇಂಡಿಯಾ ನಾಯಕ, ಪಂದ್ಯದ ನಂತರದ ದಿನಚರಿ ಅನುಸರಿಸಿ ಡ್ರೆಸ್ಸಿಂಗ್ ಕೊಠಡಿಯ ಹೊರಗೆ ಕುಳಿತಾಗ ಸ್ವಲ್ಪ ಆನಂದಬಾಷ್ಪ ಸುರಿಸಿದರು.
ನಾಯಕನ ಹೆಗಲ ಮೇಲೆ ವಿರಾಟ್ ಕೊಹ್ಲಿ ಸ್ನೇಹಪೂರ್ವಕವಾಗಿ ಬೆನ್ನುತಟ್ಟಿ ಸಮಾಧಾನಪಡಿಸಿದಾಗ ರೋಹಿತ್ ಶರ್ಮಾ ಕಣ್ಣೀರು ಸುರಿಸದಿರಲು ಪ್ರಯತ್ನಿಸುತ್ತಿದ್ದರು.
ಇಂಗ್ಲೆಂಡ್ ಆಟಗಾರರೊಂದಿಗೆ ಸಾಂಪ್ರದಾಯಿಕವಾಗಿ ಹ್ಯಾಂಡ್ಶೇಕ್ ಮಾಡಿದ ನಂತರ, ಡ್ರೆಸ್ಸಿಂಗ್ ರೂಮ್ಗೆ ಹಿಂತಿರುಗುತ್ತಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಭಾವುಕತೆಯನ್ನು ಗಮನಿಸಿ ಅವರನ್ನು ಸಮಾಧಾನಪಡಿಸಿದರು.
ಸೂರ್ಯಕುಮಾರ್ ಯಾದವ್ ಸಹ ರೋಹಿತ್ ಶರ್ಮಾ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. 10 ವರ್ಷಗಳ ನಂತರ ಭಾರತ ತಂಡವು ಟಿ20 ವಿಶ್ವಕಪ್ನಲ್ಲಿ ಫೈನಲ್ ತಲುಪಲು ಅವಕಾಶ ನೀಡಿದ ನಂತರ ನಾಯಕನನ್ನು ಅಭಿನಂದಿಸಿದರು.

ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮ್ನ ಹೊರಗೆ ಕುರ್ಚಿ ಮೇಲೆ ಕುಳಿತುಕೊಂಡಿದ್ದನು. ತನ್ನ ಕೈ ಮತ್ತು ತೋಳುಗಳಿಂದ ಮುಖಮುಚ್ಚಿಕೊಂಡು ಭಾವುಕತೆ ಹೊರಹಾಕಿದರು. ಟಿವಿ ಕ್ಯಾಮರಾಗಳು ನಾಯಕನತ್ತ ಝೂಮ್ ಮಾಡಿದರೂ ರೋಹಿತ್ ತನ್ನ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರು.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ದಿನದಂದು ತನ್ನ ಸಹ ಆಟಗಾರರ ಆಲ್ರೌಂಡ್ ಪ್ರದರ್ಶನವನ್ನು ಶ್ಲಾಘಿಸಿದ ರೋಹಿತ್ ಶರ್ಮಾ ಹೆಮ್ಮೆಯಿಂದ ತುಂಬಿದ್ದರು.
2022ರಲ್ಲಿ ಅಡಿಲೇಡ್ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇದೇ ಇಂಗ್ಲೆಂಡ್ ತಂಡದ ವಿರುದ್ಧ 10 ವಿಕೆಟ್ಗಳಿಂದ ಸೋತಿದ್ದ ಭಾರತ ತಂಡ ಸ್ವಲ್ಪ ಒತ್ತಡಕ್ಕೆ ಸಿಲುಕಿತ್ತು. ಆದರೆ, ಎಲ್ಲವನ್ನೂ ಮೀರಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಬ್ಯಾಟಿಂಗ್ನಲ್ಲಿಯೂ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿದರು ಮತ್ತು ನಾಯಕನ ತಂತ್ರದ ಮೂಲಕ ಮುಂಭಾಗದಿಂದ ತಂಡವನ್ನು ಮುನ್ನಡೆಸಿದರು. ಹಾಲಿ ಚಾಂಪಿಯನ್ಗಳಿಗೆ ಮಣ್ಣುಮುಕ್ಕಿಸಿ 68 ರನ್ಗಳಿಂದ ಪಂದ್ಯ ಗೆದ್ದುಕೊಂಡರು.
ಭಾರತ ತಂಡದ ಪರ ರೋಹಿತ್ ಶರ್ಮಾ 39 ಎಸೆತಗಳಲ್ಲಿ 57 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 47 ರನ್ ಗಳಿಸಿದರು. ಈ ಜೋಡಿ ಮೂರನೇ ವಿಕೆಟ್ಗೆ 50 ಎಸೆತಗಳಲ್ಲಿ 73 ರನ್ಗಳನ್ನು ಸೇರಿಸಿ ಪಂದ್ಯದ ಗೆಲುವಿನ ಬುನಾದಿ ಹಾಕಿದರು.
ಭಾರತ ತಂಡ ಸ್ಕೋರ್ ಬೋರ್ಡ್ನಲ್ಲಿ 171 ರನ್ಗಳನ್ನು ಕಲೆಹಾಕಿತು. ಇದು ಇಂಗ್ಲೆಂಡ್ ತಂಡಕ್ಕೆ ಕೊನೆಯಲ್ಲಿ ತುಂಬಾ ಕಠಿಣವೆನಿಸಿತು. ಭಾರತೀಯ ಸ್ಪಿನ್ನರ್ಗಳು ಮಾರಕ ದಾಳಿ ನಡೆಸಿದರು ಮತ್ತು ಇಬ್ಬರ ನಡುವೆ ಆರು ವಿಕೆಟ್ಗಳನ್ನು ಪಡೆದರು.
ಕುಲದೀಪ್ ಯಾದವ್ ಮಧ್ಯಮ ಕ್ರಮಾಂಕದ ಬ್ಯಾಟರ್ಗಳನ್ನು ಕಿತ್ತುಹಾಕುವ ಮೊದಲು, ಅಕ್ಷರ್ ಪಟೇಲ್ ಅಗ್ರ ಕ್ರಮಾಂಕಕ್ಕೆ ಪೆಟ್ಟು ನೀಡಿದರು. ವೇಗಿ ಜಸ್ಪ್ರೀತ್ ಬುಮ್ರಾ ಅವರು ಫಿಲ್ ಸಾಲ್ಟ್ ಅವರ ನಿರ್ಣಾಯಕ ವಿಕೆಟ್ ಸೇರಿದಂತೆ ಎರಡು ವಿಕೆಟ್ ಕಬಳಿಸಿದರು.
ಭಾರತದ ಬೌಲಿಂಗ್ ವಿಭಾಗದ ಬೆದರಿಕೆಗೆ ಪ್ರತಿರೋಧ ಒಡ್ಡಲು ಇಂಗ್ಲೆಂಡ್ನ ಯಾವುದೇ ಬ್ಯಾಟರ್ಗಳಿಗೆ ಸಾಧ್ಯವಾಗದ ಕಾರಣ ಕೇವಲ 103 ರನ್ ಗಳಿಸಿ ಆಲೌಟ್ ಆಯಿತು.
ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, "ಇದು ಒಂದು ದೊಡ್ಡ ಸಂದರ್ಭವಾಗಿದೆ. ನಮಗೆ ನಾವು ಶಾಂತವಾಗಿರುವುದು ಮುಖ್ಯವಾಗಿದೆ. ಸಂಯೋಜಿತವಾಗಿರುವುದು ನಿಮಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅದು ಅಗತ್ಯವಾಗಿರುತ್ತದೆ," ಎಂದರು.
"40 ಓವರ್ಗಳಲ್ಲಿ ನಾವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇದ್ದೇವೆ. ಅದು ನಮಗೆ ಪಂದ್ಯವನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಈ ಆಟದಲ್ಲಿ ನಾವು ತುಂಬಾ ಸ್ಥಿರವಾಗಿ ಮತ್ತು ಶಾಂತವಾಗಿದ್ದೆವು. ನಾವು ಹೆಚ್ಚು ಪ್ಯಾನಿಕ್ ಆಗಲಿಲ್ಲ, ಅದು ನಮಗೆ ಪ್ರಮುಖವಾಗಿತ್ತು," ಎಂದು ರೋಹಿತ್ ಶರ್ಮಾ ತಿಳಿಸಿದರು.
ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋತಿದ್ದ ಭಾರತ ತಂಡ, ಇದೀಗ ಶನಿವಾರ ಬಾರ್ಬಡೋಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಳ್ಳಲು ಎದುರು ನೋಡುತ್ತದೆ.